ಹೋಲಿಯಾಗುತ್ತಿರುವ ಹೋಳಿ ಹುಣ್ಣಿಮೆ

ಮರೆಯಾಗುತ್ತಿವೆ ಶೃಂಗಾರ ಕಾವ್ಯಗಳು,ಹಬ್ಬದ ಮೂಲ ಆಶಯ-ಸ್ವರೂಪವೇ ಬದಲು

Team Udayavani, Mar 29, 2021, 3:41 PM IST

ಹೋಲಿಯಾಗುತ್ತಿರುವ ಹೋಳಿ ಹುಣ್ಣಿಮೆ

ಧಾರವಾಡ: ಶೃಂಗಾರ ಕಾವ್ಯಗಳ ಬದಲು ಸಿನಿಮಾಹಾಡುಗಳು, ಲಬೋ ಲಬೋ ಎಂದು ಬಾಯಿಬಡಿದುಕೊಳ್ಳುತ್ತ ಸಂಭ್ರಮಿಸುವ ಬದಲುಬಾಯಲ್ಲೊಂದು ಸದ್ದು ಮಾಡುವ ಪಿಂಯಾ,ಮೋಜಿಗೊಂದಿಷ್ಟು ಬಣ್ಣದ ಬದಲು ಎಲ್ಲರಕೈಯಲ್ಲೂ ಮದ್ಯದ ಬಾಟಲಿ. ಒಟ್ಟಾರೆ ಹೋಳಿ ಹುಣ್ಣಿಮೆ ಸ್ವರೂಪವೇ ಅದಲು ಬದಲು. ಸಂಭ್ರಮದಿಂದ ಹೋಳಿಹುಣ್ಣಿಮೆ ಆಚರಿಸುವಬದಲು ಎಲ್ಲರೂ ಜಸ್ಟ್‌ ಹ್ಯಾಪಿ ಹೋಲಿಎನ್ನುವಲ್ಲಿಗೆ ತೃಪ್ತರಾಗುತ್ತಿದ್ದಾರೆ.

ಹೌದು. ಕಳೆದ 30 ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಮಣ್ಣನ ಹಬ್ಬ ಹೋಳಿ ಹುಣ್ಣಿಮೆ ತನ್ನ ಸ್ವರೂಪದಲ್ಲಿಬದಲಾವಣೆಯಾಗುತ್ತಲೇ ಸಾಗಿದೆ. ಆದರೂಮೂಲ ಹೋಳಿಹಬ್ಬದ ಆಶಯ ಮೈ ಮರೆತು,ಮೈದುಂಬಿ, ಮನದುಂಬಿ, ಹೃದಯ ತುಂಬಿಸಂಭ್ರಮಿಸುವುದೇ ಆಗಿದೆ. ಅದು ಬಣ್ಣದ ಆಟವಾಗಲಿ,ಹೋಳಿ ಶೃಂಗಾರಕಾವ್ಯ ಹಾಡುವುದಾಗಲಿ, ಹಳ್ಳಿಗಳಲ್ಲಿಜಿದ್ದಾಜಿದ್ದಿನ ಕೆಲಸಗಳೇ ಆಗಲಿ, ಕಾಮಣ್ಣನ ನೆಪದಲ್ಲಿಒಟ್ಟಾಗಿ ಸೇರಿ ವಿಪರೀತ ಹಾಸ್ಯ, ಅಪಹಾಸ್ಯಕ್ಕೆ ಮನ್ನಣೆ ಸದಾ ಇರುತ್ತಿತ್ತು.

ಆದರೀಗ ಬರೀ ಡಿಜೆ ಕುಣಿತ, ನೀರಿನ ಜಳಕ,ಅತಿಯಾದ ಮದ್ಯ ಸೇವನೆ ಹೊರತು ಪಡಿಸಿದರೆ ಬೇರೆಏನನ್ನೂ ಹೊಸ ಪೀಳಿಗೆ ನೋಡುತ್ತಲೇ ಇಲ್ಲ. ಇದೀಗಕಾಮಣ್ಣನ ಹಬ್ಬ ಇತರೆ ಹಬ್ಬಗಳಂತೆ ಒಂದು ರಜಾಮಜಾ ಆಗಿ ಮಾತ್ರ ಪರಿಣಮಿಸುತ್ತಿದೆಯೇ ಹೊರತುಅದರ ಮೂಲ ಆಶಯವಾದ ಸಾಮಾಜಿಕ ಸಹಬಾಳ್ವೆ, ಕಾಮಪ್ರೇರಣೆ, ಶೃಂಗಾರ ಸಾಹಿತ್ಯದ ಹಾಡುಗಾರಿಕೆ ಮಾತ್ರ ಕಣ್ಮರೆಯಾಗುತ್ತಿದೆ.

ಹಲಗಿ ಹಬ್ಬ ಜೀವಂತ: ಇನ್ನು ಇದೆಲ್ಲದಕ್ಕೂ ವಿಭಿನ್ನ ಎಂಬಂತೆ ಧಾರವಾಡದಲ್ಲಿ ಜಾನಪದ ಕಲಾಸಕ್ತರ ಬಳಗವೊಂದು ಕಳೆದ ಮೂರು ವರ್ಷಗಳಿಂದ ಹಲಿಗೆಹಬ್ಬವನ್ನು ಹೋಳಿಹುಣ್ಣಿಮೆ ನಿಮಿತ್ತ ಅದ್ಧೂರಿಯಾಗಿ ಆಚರಿಸುತ್ತಿದೆ. ಕಾಮನಕಟ್ಟಿ ವೀರಭದ್ರೇಶ್ವರದೇವಸ್ಥಾನದಲ್ಲಿ ನಡೆಯುವ ಈ ಹಲಗಿ ಹಬ್ಬಕ್ಕೆ ಮಾಳಾಪೂರ, ಹೊಸಯಲ್ಲಾಪೂರ ಸೇರಿದಂತೆಗ್ರಾಮೀಣ ಸೊಗಡು ಉಳಿಸಿಕೊಂಡಿರುವ ಧಾರವಾಡದನಗರ ಪ್ರದೇಶದ ಅನೇಕರು ಸಾಥ್‌ ನೀಡುತ್ತಾರೆ.ಅಷ್ಟೇಯಲ್ಲ, ಧಾರವಾಡದ ಮುರುಘಾಮಠ, ಕಮಲಾಪೂರ, ನವಲೂರು ಚೌಣಿಗಳಲ್ಲಿ ಇಂದಿಗೂಕಾಮಣ್ಣನ ಹಬ್ಬ ತನ್ನ ವೈಶಿಷ್ಟ್ಯತೆ ಉಳಿಸಿ ಕೊಂಡಿದೆ. ಹೊಸ ತಲೆಮಾರು ಕಾಮಣ್ಣನ ಸಾಂಪ್ರದಾಯಿಕ ಹಬ್ಬದ ಸ್ವರೂಪದಿಂದ ಸಂಪೂರ್ಣ ಹೊರಗೆಹೋಗುತ್ತಿರುವ ಸಂದರ್ಭದಲ್ಲಿ ಹಲಗಿ ಬಡಿಯುತ್ತಲೇ ಹೋಳಿ ಹುಣ್ಣಿಮೆ ಆಚರಿಸುವ ಪದ್ಧತಿಯನ್ನು ಸಂಘಟನಾತ್ಮಕವಾಗಿ ಇಲ್ಲಿ ಜೀವಂತವಾಗಿಡುವ ಪ್ರಯತ್ನ ನಡೆದಿದ್ದು ಶ್ಲಾಘನೀಯ. ಇದಕ್ಕೆ ರಾಜಕೀಯಗಣ್ಯರು ಕೂಡ ಕೈಜೋಡಿಸಿ ಇದನ್ನು ಸಾರ್ವಜನಿಕ ಆಚರಣೆಯನ್ನಾಗಿ ಮಾಡಿದ್ದು ಹಲಗಿ ಹಬ್ಬಕ್ಕೆ ಇನ್ನಷ್ಟು ಮೆರಗು ತಂದಂತಾಗಿದೆ.

ಶೃಂಗಾರ ಕಾವ್ಯ ರಮ್ಯ: ಜನಪದ ಬಾಯಲ್ಲಿ ಮೌಖೀಕಪರಂಪರೆಯಿಂದ ಬಂದಿರುವ ಹೋಳಿಹುಣ್ಣಿಮೆ ಹಾಡುಗಳು ಅರ್ಥಾರ್ಥ ಶೃಂಗಾರ ಸಾಹಿತ್ಯವೆಂದುಕರೆಯಲ್ಪಡುವ ಏಕೈಕ ಪ್ರಕಾರ ಉತ್ತರ ಕರ್ನಾಟಕದಹೋಳಿ ಹಾಡುಗಳು. ಯುವಕರು ಅದರಲ್ಲೂ ಹದಿಹರೆಯದವರ ಕಾಮೋತ್ಸಾಹವನ್ನು ಹೊರ ಹಾಕಲುಬಳಸುವ ಈ ಕಾವ್ಯ ಪ್ರಕಾರಕ್ಕೆ ಐತಿಹಾಸಿಕ ಹಿನ್ನೆಲೆಯೂಉಂಟು. ಹರಿಹರನ ಗಿರಿಜಾ ಕಲ್ಯಾಣದಲ್ಲಿನ ಅನೇಕ ಪ್ರಣಯ ಪ್ರಸಂಗ ಗಳನ್ನು ಜಾನಪದರು ತಮ್ಮ ಹಾಡುಗಳಮೂಲಕ ಹೋಳಿ ಹಬ್ಬದಲ್ಲಿ ರತಿ-ಕಾಮಣ್ಣರ ಎದುರು ಹಾಡುವ ಸಂಪ್ರದಾಯವಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆಈಗಲೂ ಕೆಲ ಹಳ್ಳಿಗಳಲ್ಲಿ ಕಾಮಣ್ಣನ ಎದುರು ಹೋಳಿ ಪದಗಳನ್ನು ಹಾಡುತ್ತಾರೆ. ಕಾಲಾಂತರದಲ್ಲಿ ಅದು ಕಣ್ಮರೆಯಾಗಿದೆ.

ಹೋಳಿಹುಣ್ಣಿಮೆ ಹಾಡುಗಳು ಎಂದೇ ಪ್ರಸಿದ್ಧಿಪಡೆದಿರುವ ಈ ಹಾಡುಗಳಲ್ಲಿ ಯುವಕ ಯುವತಿಯನ್ನುನೋಡಿ ಅವಳ ಚೆಲುವನ್ನು ಮೆಚ್ಚಿಕೊಳ್ಳುವ ಮತ್ತುಅವಳ ಮೈಮಾಟ ವರ್ಣಿಸುವ ಬಗೆಯೇ ಹೆಚ್ಚು. ಆಮೂಲಕ ಕಾಮವನ್ನು ನೋಡಿ, ಮಾಡಿ ಮತ್ತು ಹಾಡಿ ಅನುಭವಿಸಬೇಕೆನ್ನುವ ಜನಪದರ ಆಶಯಗಳಿಗೆ ಇಲ್ಲಿ ಮನ್ನಣೆಯಿತ್ತು. ಈ ಭಾಗದಲ್ಲಿ ಅಂತಹ 30 ಸಾವಿರಕ್ಕೂಹೆಚ್ಚು ಶೃಂಗಾರ ಹಾಡುಗಳಿದ್ದವು ಎನ್ನುತ್ತಾರೆ ಜಾನಪದತಜ್ಞರು. ಆದರೆ ಹೋಳಿ ಆಚರಣೆಯಲ್ಲಾದ ಬದಲಾವಣೆಶೃಂಗಾರ ಸಾಹಿತ್ಯಕ್ಕೆ ಕುತ್ತು ತುಂದಿದೆ ಎಂಬುದು ಅನೇಕ ಜಾನಪದೀಯ ಅಧ್ಯಯನಗಳಿಂದ ದೃಢಪಟ್ಟಿದೆ.

ಒಂದು ವರ್ಷದಲ್ಲಿ ಒಂದು ದಿನವನ್ನುಕಾಮಪ್ರೇರಣೆ ಮತ್ತು ಪಡ್ಡೆ ಹುಡುಗರಹುಡುಗಾಟಕ್ಕೆ ಮೀಸಲಿಡಲಾಗಿತ್ತು. ಜಾನಪದ ಅಂದಿನ ಸಮಾಜದಕೊಡುಕೊಳ್ಳುವಿಕೆಯನ್ನುತೆಗೆದುಕೊಳ್ಳುತ್ತದೆ. ಬದಲಾವಣೆ ಎಲ್ಲಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂಸಾಮಾನ್ಯ. ಆದರೆ ಕಾಮಣ್ಣನ ಹಬ್ಬಮಾದರಿ ಆಚರಣೆಯಾಗುವಂತೆಎಲ್ಲರೂ ನೋಡಿಕೊಳ್ಳಬೇಕಿದೆ. ಡಾ| ವಿ.ಎಲ್‌. ಪಾಟೀಲ, ಜಾನಪದ ತಜ್ಞ

 ಹೋಳಿ ಹುಣ್ಣಿಮೆ ದಿನ ಹಳ್ಳಿಯ ಯುವಕರುಸಿನಿಮಾ ನೋಡಿ, ಸಾರಾಯಿ ಕುಡಿದುಒಂದಿಷ್ಟು ಬಣ್ಣ ಎರಚುತ್ತಿದ್ದಾರಷ್ಟೆ. ಜನಪದರದೃಷ್ಟಿಯಲ್ಲಿ ಹೋಳಿಹುಣ್ಣಿಮೆ ಶೃಂಗಾರಪದಗಳನ್ನುಹಾಡಿ ಸಂಭ್ರಮಿಸುವ ಹಬ್ಬ. ಅದು ಮತ್ತೆ ಪುನರುತ್ಥಾನವಾಗಬೇಕಿದೆ. – ಡಾ| ರಾಮು ಮೂಲಗಿ, ಜಾನಪದ ವಿದ್ವಾಂಸ

 

ಡಾ| ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

8-

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.