ಅಮೆಜಾನ್‌ನಲ್ಲಿ ಹುಬ್ಬಳ್ಳಿ ಅವಲಕ್ಕಿ ಟ್ರೆಂಡ್‌


Team Udayavani, Sep 18, 2020, 6:09 PM IST

Avalanche

ಹುಬ್ಬಳ್ಳಿ: ಆನ್‌ಲೈನ್‌ ವಹಿವಾಟಿನ ಜಾಗತಿಕ ದೈತ್ಯ ಕಂಪೆನಿ ಅಮೆಜಾನ್‌ ನಲ್ಲಿ “ಹುಬ್ಬಳ್ಳಿ ಅವಲಕ್ಕಿ’ ಸದ್ದು ಮಾಡತೊಡಗಿದೆ. ದೇಶದ ವಿವಿಧ ರಾಜ್ಯಗಳಿಗೆ ಹುಬ್ಬಳ್ಳಿ ಬ್ರ್ಯಾಂಡ್‌ನ‌ ಅವಲಕ್ಕಿ ತಲುಪುತ್ತಿದೆ. ಅಮೇಜಾನ್‌ನಲ್ಲಿ ಕರ್ನಾಟಕ ಪೋಹಾ(ಅವಲಕ್ಕಿ) ಎಂದು ನಮೂದಿಸಿದರೆ “ಹುಬ್ಬಳ್ಳಿ ಅವಲಕ್ಕಿ’ಯೇ ಮೊದಲ ಸ್ಥಾನದಲ್ಲಿ ಕಾಣುವಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ.

ಮಧ್ಯಪ್ರದೇಶ, ಗುಜರಾತ್‌ ರಾಜ್ಯಗಳ ಅವಲಕ್ಕಿ ಅಬ್ಬರದ ನಡುವೆಯೂ ಜಾಗತಿಕ ಮಟ್ಟದ ಆನ್‌ಲೈನ್‌ ಕಂಪೆನಿಯಲ್ಲಿ ಹುಬ್ಬಳ್ಳಿ ಅವಲಕ್ಕಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಕಳೆದ ಐದು ದಶಕಗಳಿಂದ ಅವಲಕ್ಕಿ ತಯಾರಿಕೆಯನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಹೇಳಿಕೊಳ್ಳುವುದಕ್ಕೆ ದೊಡ್ಡ ಫ್ಯಾಕ್ಟರಿ ಏನು ಅಲ್ಲ. ಆದರೆ, ಗುಣಮಟ್ಟದ ಅವಲಕ್ಕಿ ತಯಾರಿಕೆ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ರುಚಿಯ ಅಚ್ಚೊತ್ತತೊಡಗಿದೆ. ವಿದೇಶದಿಂದ ಬೇಡಿಕೆ ಪಡೆದಿದೆ.

ರಾಸಾಯನಿಕ ಮುಕ್ತ: ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಕಳೆದ 50 ವರ್ಷಗಳಿಂದ ಅವಲಕ್ಕಿ ತಯಾರಿಕೆಯಲ್ಲಿ ತೊಡಗಿದೆ. ರಾಸಾಯನಿಕ ಮುಕ್ತ ಹಾಗೂ ಯಾವುದೇಬಣ್ಣ ಬೆರೆಸದೆ ನೈಸರ್ಗಿಕವಾಗಿ ಅವಲಕ್ಕಿ ತಯಾರಿಸಲಾಗುತ್ತದೆ. ದಪ್ಪ ಅವಲಕ್ಕಿ, ಮೀಡಿಯಂ ಅವಲಕ್ಕಿ ಹಾಗೂ ಪೇಪರ್‌ ಅವಲಕ್ಕಿಯನ್ನು ತಯಾರಿಸಲಾಗುತ್ತದೆ.ಒಂದು ಕೆಜಿ ಹಾಗೂ ಐದು ಕೆಜಿ ಪಾಕೇಟ್‌ ಗಳಲ್ಲಿ ಅವಲಕ್ಕಿ ದೊರೆಯುತ್ತಿದ್ದು, ಸಗಟುರೂಪದಲ್ಲಿ 30 ಹಾಗೂ 40 ಕೆಜಿ ತೂಕದ ಚೀಲದಲ್ಲಿಯೂ ದೊರೆಯುತ್ತಿದೆ.

ಉತ್ತಮ ಗುಣಮಟ್ಟದ ಆಯ್ದ ಅಕ್ಕಿಯನ್ನು ರೈತರು, ಇನ್ನಿತರ ಕಡೆಗಳಿಂದ ಖರೀದಿ ಮಾಡಲಾಗುತ್ತಿದ್ದು, ಅಕ್ಕಿ ಸಂಸ್ಕರಿಸುವ ಮೂಲಕ ಅದಕ್ಕೆ ಯಾವುದೇ ಕೃತಕ ಬಣ್ಣ ಬೆರೆಸದೆ ನೈಸರ್ಗಿಕವಾಗಿಯೇ ತಯಾರಿಸಲಾಗುತ್ತದೆ. ಇತರೆ ಅವಲಕ್ಕಿಗೆ ಹೋಲಿಸಿದರೆ ಇದು ಆಫ್ ವೈಟ್‌ ಅವಲಕ್ಕಿಯಾಗಿದೆ. ಮೂರು ತಲೆಮಾರುಗಳಿಂದ ಅದೇ ಗುಣಮಟ್ಟ ಕಾಯ್ದುಕೊಂಡು ಬಂದಿರುವ ಮೂರಶಿಳ್ಳಿ ಕಂಪೆನಿ ಇಂದಿಗೂ ಹೆಚ್ಚಿನ ಉತ್ಪಾದನೆಗೆ ಒತ್ತು ನೀಡದೆ, ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಸೀಮಿತಪ್ರಮಾಣದ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಯಾರು ಏನೇ ಪೈಪೋಟಿಗಿಳಿಯಲಿ, ಕಡಿಮೆ ದರಕ್ಕೆ ನೀಡಲಿ ನಾವು ಮಾತ್ರ ನಮ್ಮ ಗುಣಮಟ್ಟಕ್ಕೆ ಬದ್ಧರಾಗಿದ್ದೇವೆ ಎಂಬುದು ಕಂಪೆನಿಯವರ ಅನಿಸಿಕೆ.

ವಹಿವಾಟು ಒಪ್ಪಂದ :  ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಆನ್‌ಲೈನ್‌ ಮೂಲಕ ಗ್ರಾಹಕರನ್ನು ತಲುಪಲು ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ನೊಂದಿಗೆ ವಹಿವಾಟು ಒಪ್ಪಂದ ಮಾಡಿಕೊಂಡಿದೆ. ಅಮೇಜಾನ್‌ ಮೂಲಕ ಹುಬ್ಬಳ್ಳಿ ಅವಲಕ್ಕಿ ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಗೋವಾ, ಹರ್ಯಾಣ, ಉತ್ತರಖಂಡ, ಗೋವಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ದಿಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅನೇಕ ಗ್ರಾಹಕರನ್ನು ತಲುಪಿದೆ. ಜತೆಗೆ ಮಲೇಷ್ಯಾದಿಂದಲೂ ಹುಬ್ಬಳ್ಳಿ ಅವಲಕ್ಕಿಗೆ ಬೇಡಿಕೆ ಬಂದಿದೆಯಂತೆ. ಅಮೆಜಾನ್‌ನಲ್ಲಿ ಹುಬ್ಬಳ್ಳಿ ಅವಲಕ್ಕಿ ಖರೀದಿಸಿದ ದೇಶದ ವಿವಿಧ ರಾಜ್ಯಗಳ ಗ್ರಾಹಕರು ಅತ್ಯುತ್ತಮ ರೇಟಿಂಗ್‌ ನೀಡಿರುವುದು, ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಸಹಜವಾಗಿಯೇ ಕಂಪೆನಿಯವರಿಗೆ ಸಂತಸ ಮೂಡಿಸಿದೆ. ಯೂಟ್ಯೂಬ್‌ನಲ್ಲಿಯೂ ಹುಬ್ಬಳ್ಳಿ ಅವಲಕ್ಕಿ ಮಾಹಿತಿ ಲಭ್ಯವಿದೆ.

ರಫ್ತು ವಹಿವಾಟಿನತ್ತ.. ಉತ್ಪಾದನೆ ಹೆಚ್ಚಳ ಚಿತ್ತ :  ಅವಲಕ್ಕಿ ರಫ್ತು ವಹಿವಾಟಿಗೂ ಹುಬ್ಬಳ್ಳಿ ಅವಲಕ್ಕಿ ಸ್ಥಾನ ಪಡೆಯುವ ಯತ್ನಗಳು ಸಾಗಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ ಚೆನ್ನೈ ಮೂಲಕ ವಿವಿಧ ದೇಶಗಳಿಗೂ ಇದು ರಫ್ತು ಆಗಲಿದೆ. ಅಮೆಜಾನ್‌ ಮೂಲಕ ನಿತ್ಯವೂ ಬೇಡಿಕೆ ಹೆಚ್ಚತೊಡಗಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಬೇಡಿಕೆ ಬಂದಿತ್ತಂತೆ. ರಾಜ್ಯದ ವಿವಿಧ ಜಿಲ್ಲೆಗಳಿಗೂ ಹುಬ್ಬಳ್ಳಿ ಅವಲಕ್ಕಿ ಸರಬರಾಜು ಆಗುತ್ತಿದೆ. ಪ್ರಸ್ತುತ ಸೀಮಿತ ರೀತಿಯಲ್ಲಿ ಉತ್ಪಾದನೆ ಕೈಗೊಳ್ಳುತ್ತಿರುವ ಕಂಪೆನಿ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳೊಂದಿಗೆ ಹೊಸ ಘಟಕ ಸ್ಥಾಪನೆ ಹಾಗೂ ಉತ್ಪಾದನೆ ಹೆಚ್ಚಳದ ಯೋಜನೆ ಹೊಂದಿದೆ.

ಉತ್ಪಾದನೆ ಹೆಚ್ಚಳಕ್ಕಿಂತ ಇರುವ ಉತ್ಪಾದನೆಯೊಂದಿಗೆ ಪರಿಶುದ್ಧ-ಗುಣಮಟ್ಟದ ಅವಲಕ್ಕಿ ಗ್ರಾಹಕರಿಗೆ ತಲುಪಬೇಕು. ನಮ್ಮ ಅವಲಕ್ಕಿ ಬಳಕೆ ಮಾಡಿದವರು ತೃಪ್ತಿಯೊಂದಿಗೆ ಮತ್ತೂಮ್ಮೆ ಖರೀದಿಗೆ ಮುಂದಾಗಬೇಕೆಂಬುದು ನಮ್ಮ ಬಯಕೆ. ತಾತನ ಕಾಲದಿಂದ ಆರಂಭವಾದ ಈ ಉದ್ಯಮವನ್ನು ತಂದೆಯವರು ಸಂಕಷ್ಟದ ಸ್ಥಿತಿಯಲ್ಲೂ ಗುಣಮಟ್ಟದಲ್ಲಿ ರಾಜಿಯಾಗದೆಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ನಾವು ತಂದೆಯವರ ಮಾರ್ಗದರ್ಶನದಲ್ಲಿ ಅದೇ ಗುಣಮಟ್ಟದೊಂದಿಗೆ ಆನ್‌ಲೈನ್‌ ವಹಿವಾಟು ಬಳಕೆ ಮೂಲಕ ಹುಬ್ಬಳ್ಳಿ ಅವಲಕ್ಕಿ ಬ್ರಾÂಂಡ್‌ ಅನ್ನು ದೇಶ-ವಿದೇಶಗಳಲ್ಲಿ ವೃದ್ಧಿಸುವ ಯತ್ನದಲ್ಲಿ ತೊಡಗಿದ್ದೇವೆ. – ಅಕ್ಷಯ ಮತ್ತು ಶಿವರಾಜ ಮೂರಶಿಳ್ಳಿ, ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ

 

­ಅಮರೇಗೌಡ ಗೋನವಾರ

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

ನಾಮಪತ್ರ ಹಿಂದೆ ತೆಗೆದುಕೊಂಡಾಕ್ಷಣ ನನ್ನ ಧರ್ಮ ಯುದ್ಧ ನಿಂತಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

ನಾಮಪತ್ರ ಹಿಂದೆ ತೆಗೆದುಕೊಂಡಾಕ್ಷಣ ನನ್ನ ಧರ್ಮ ಯುದ್ಧ ನಿಂತಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ

ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ

ನೇಹಾ ಹತ್ಯೆ ತನಿಖೆನೇಹಾ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ: ಜೆ.ಪಿ.ನಡ್ಡಾಐಗೆ ವಹಿಸಿ: ಜೆ.ಪಿ.ನಡ್ಡಾ

ನೇಹಾ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ: ಜೆ.ಪಿ.ನಡ್ಡಾ

1-trew

Neha ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.