ಪಾರ್ಕಿಂಗ್‌ ಟವರ್‌ಗೆ ಅಂತೂ ಕೂಡಿಬಂತು ಮುಹೂರ್ತ


Team Udayavani, Dec 1, 2018, 5:25 PM IST

1-december-21.gif

ಹುಬ್ಬಳ್ಳಿ: ಇಲ್ಲಿನ ಕೋರ್ಟ್‌ ವೃತ್ತದ ಬಳಿಯ ಖಾಲಿ ಜಾಗದಲ್ಲಿ ಹಲವು ವರ್ಷಗಳ ನಿರೀಕ್ಷಿತ ಬಹುಮಹಡಿ ಕಾರು-ಬೈಕ್‌ ಪಾರ್ಕಿಂಗ್‌ ಕಟ್ಟಡಕ್ಕೆ ಮುಹೂರ್ತ ಕೂಡಿ ಬಂದಂತಿದೆ. ಸುಮಾರು 50 ಕೊಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌(ಮಲ್ಟಿ ಲೆವಲ್‌ ಕಾರ್‌ ಪಾರ್ಕಿಂಗ್‌) ಕಟ್ಟಡ ನಿರ್ಮಿಸಲಾಗುತ್ತದೆ. ಕಟ್ಟಡ ನಿರ್ಮಾಣ-ನಿರ್ವಹಣೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸ್ಥಳೀಯ ನಿರ್ಮಾಣ ಸಂಸ್ಥೆ ಸುರೇಶ ಎಂಟರಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌(ಎಸ್‌ಇಪಿಎಲ್‌) ಕಾಮಗಾರಿ ಗುತ್ತಿಗೆ ಪಡೆದಿದೆ.

ಪಾಲ್ಗೊಂಡಿದ್ದು ಒಂದೇ ಸಂಸ್ಥೆ: ಕೋರ್ಟ್‌ ವೃತ್ತಕ್ಕೆ ಹೊಂದಿಕೊಂಡಿರುವ ಸುಮಾರು 1.5 ಎಕರೆ ಜಾಗದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌ ನಿರ್ಮಾಣ ಹಲವು ವರ್ಷಗಳ ಹಿಂದಿನ ಯೊಜನೆ. ಪಿಪಿಪಿ ಮಾದರಿಯಲ್ಲಿ 2 ಬಾರಿ ಟೆಂಡರ್‌ ಕರೆದರೂ ಯಾರೂ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಮತ್ತೊಮ್ಮೆ ಹು-ಧಾ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಕಂಪೆನಿ ಟೆಂಡರ್‌ ಕರೆದಿತ್ತು. ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಏಕೈಕ ಸಂಸ್ಥೆ ಎಸ್‌ಇಪಿಎಲ್‌ ಆಗಿದ್ದು, ಎರಡು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಷರತ್ತು ವಿಧಿಸಲಾಗಿದೆ.

375 ಕಾರು ಪಾರ್ಕಿಂಗ್‌: 2 ಕೆಳ ಅಂತಸ್ತಿನ ಬೇಸ್‌ ಮೆಂಟ್‌, ನೆಲಮಹಡಿ, 1ನೇ ಮಹಡಿ ಹಾಗೂ 2ನೇ ಮಹಡಿ ಒಳಗೊಂಡ ಬಹುಅಂತಸ್ತಿನ ಪಾರ್ಕಿಂಗ್‌ ಕಟ್ಟಡ ಇದಾಗಲಿದೆ. ನೆಲಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಬರಲಿದೆ. ಉಳಿದ ಎಲ್ಲ ಮಹಡಿಗಳಲ್ಲೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸುಮಾರು 375 ಕಾರು ಪಾರ್ಕಿಂಗ್‌ಗೆ ಸ್ಥಳಾವಕಾಶ ಇರುವಂತೆ ಕಟ್ಟಡ ವಿನ್ಯಾಸಗೊಳಿಸಲಾಗಿದೆ. ಗುತ್ತಿಗೆ ಕರಾರಿನಂತೆ ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಸುರೇಶ ಎಂಟರ್‌ಪ್ರೈಸಸ್‌ ಪ್ರವೇಟ್‌ ಲಿಮಿಟೆಡ್‌(ಎಸ್‌ ಇಪಿಎಲ್‌) ಅವರಿಗೆ ಅವಕಾಶ ನೀಡಲಾಗಿದೆ. ಕೇವಲ ಕಾರು ಪಾರ್ಕಿಂಗ್‌ ಅಷ್ಟೇ ಅಲ್ಲದೇ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಲಭ್ಯವಾಗಲಿದೆ. ಪ್ರತಿ ಕಾರಿಗೆ 18 ಚದರ ಮೀಟರ್‌ನಂತೆ ಸ್ಥಳ ನಿಗದಿ ಪಡಿಸಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

ಪಿಪಿಪಿ ಮಾದರಿ ನಿರ್ಮಾಣ: ಪಾರ್ಕಿಂಗ್‌ ಟವರ್‌ ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ 10 ಕೋಟಿ ರೂ. ನೀಡಿದರೆ, ಇನ್ನುಳಿದ 40 ಕೋಟಿ ರೂ.ವನ್ನು ಟೆಂಡರ್‌ ಪಡೆದ ಸಂಸ್ಥೆ ತೊಡಗಿಸಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಡುವ ಅನುದಾನವನ್ನು ನಿರ್ಮಾಣದ ವಿವಿಧ ಹಂತದಲ್ಲಿ ವೆಚ್ಚದ ಶೇ. 25ರಂತೆ ಹಣವನ್ನು ಕಂಪನಿ ಬಿಡುಗಡೆ ಮಾಡಲಿದೆ.

ನಿರ್ಮಾಣದ ಬಳಿಕ ಇದರ ನಿರ್ವಹಣೆಯ ಹೊಣೆಯನ್ನು 30 ವರ್ಷಗಳ ಅವಧಿಗೆ ಸಂಸ್ಥೆ ವಹಿಸಿಕೊಂಡಿದೆ. ಪಾರ್ಕಿಂಗ್‌ ಶುಲ್ಕ, ವಾಣಿಜ್ಯ ಮಳಿಗೆ ಬಾಡಿಗೆ ಹಾಗೂ ಡಿಜಿಟಲ್‌ ಜಾಹೀರಾತು ಫ‌ಲಕಗಳ ಶುಲ್ಕದಿಂದ ಟೆಂಡರ್‌ ಪಡೆದ ಸಂಸ್ಥೆ ಆದಾಯ ಪಡೆಯಲಿದೆ. ಗುತ್ತಿಗೆ ಕರಾರಿನಂತೆ ಸಂಸ್ಥೆ ವಾರ್ಷಿಕ ರಿಯಾಯಿತಿ ಶುಲ್ಕವಾಗಿ ಪಾಲಿಕೆಗೆ 67ಲಕ್ಷ ರೂ. ಪಾವತಿಸಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಮೊತ್ತದಲ್ಲಿ ಶೇ. 15 ಏರಿಕೆಯಾಗಲಿದೆ.

ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌ ನಿರ್ಮಾಣ ಕಾಮಗಾರಿಯ ಕಾರ್ಯಾದೇಶವನ್ನು ಇನ್ನೆರಡು ದಿನಗಳಲ್ಲಿ ಎಸ್‌ಇಪಿಎಲ್‌ ಗೆ ನೀಡಲಿದ್ದೇವೆ. ನಿರ್ಮಾಣ ಅವಧಿ 24 ತಿಂಗಳಿದ್ದು, ಅದಕ್ಕೂ ಪೂರ್ವ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದಾಗಿ ಸುರೇಶ ಎಂಟರ್‌ ಪ್ರೈಸಸ್‌ ಪ್ರವೇಟ್‌ ಲಿಮಿಟೆಡ್‌(ಎಸ್‌ಇಪಿಎಲ್‌) ವಿಶ್ವಾಸ ವ್ಯಕ್ತಪಡಿಸಿದೆ.
 ಎಸ್‌.ಎಚ್‌. ನರೇಗಲ್ಲ, ವಿಶೇಷಾಧಿಕಾರಿ,
ಹು-ಧಾ ಸ್ಮಾರ್ಟ್‌ಸಿಟಿ ಲಿಮಿಟೆಡ್‌

ಬಸವರಾಜ ಹೂಗಾರ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.