ಕಾಯಿಪಲ್ಲೆ ವ್ಯಾಪಾರಕ್ಕೆ ಸಮಯ ಮಿತಿ ಆಘಾತ
ದರದಲ್ಲಿ ಏರಿಳಿತ! ರೈತರಿಗೆ ಸಂಕಷ್ಟ ಸನ್ನಿಹಿತ! ಕಾಪಾಡಿ ರಿಟೇಲ್ ವ್ಯಾಪಾರಸ್ಥರ ಹಿತಮಾರುಕಟ್ಟೆಯಾಗಲಿ ವ್ಯವಸ್ಥಿತ
Team Udayavani, May 1, 2021, 5:09 PM IST
ವರದಿ: ಶಶಿಧರ್ ಬುದ್ನಿ
ಧಾರವಾಡ: ದಿನವಿಡೀ ಕುಳಿತು ಕಾಯಿಪಲ್ಲೆ-ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ ಇದೀಗ ದಿನದ ನಾಲ್ಕು ತಾಸಿನಲ್ಲಿ ಮಾರಾಟ ಮಾಡಬೇಕು. ಇದರಿಂದ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ನಿರೀಕ್ಷಿತ ಲಾಭ ಗಳಿಕೆಗೆ ಕೊರೊನಾ ಕರ್ಫ್ಯೂ ವಿಧಿಸಿರುವ ಸೀಮಿತ ಸಮಯ ಹೊಡೆತ ನೀಡಿದ್ದು, ರೈತರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಕೊರೊನಾ ಕರ್ಫ್ಯೂವಿನ ಮಾರ್ಗಸೂಚಿಯನ್ವಯ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸೀಮಿತ ಅವಧಿಯ “ಪರಿಣಾಮ’ ಕಾಯಿಪಲ್ಲೆ ಬೆಳೆದ ರೈತರು ಹಾಗೂ ಹೋಲ್ಸೆಲ್ ವ್ಯಾಪಾರಸ್ಥರಿಗಿಂತ ರಿಟೇಲ್ ವ್ಯಾಪಾರಸ್ಥರು ಹಾಗೂ ಗ್ರಾಹಕರ ಮೇಲಾಗಿದೆ. ಹೀಗಾಗಿ ಈ ಅವಧಿ ಒಂದೆರಡು ಗಂಟೆ ಹೆಚ್ಚಳ ಮಾಡಬೇಕೆಂಬುದು ರಿಟೇಲ್ ವ್ಯಾಪಾರಸ್ಥರ ಬೇಡಿಕೆ.
ಜಿಲ್ಲೆಯಲ್ಲಿ ಐದು ಎಪಿಎಂಸಿಗಳಿದ್ದು, ಈ ಪೈಕಿ ಧಾರವಾಡ ಹಾಗೂ ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ ಅಷ್ಟೇ ಹೋಲ್ ಸೇಲ್ ಕಾಯಿಪಲ್ಲೆ ಮಾರುಕಟ್ಟೆ ಇದೆ. ಇಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ 11 ಗಂಟೆ ವರೆಗೆ ವ್ಯಾಪಾರ-ವಹಿವಾಟು ನಡೆದುಕೊಂಡು ಬಂದಿದೆ. ಇದೀಗ ಕೊರೊನಾ ಕರ್ಫ್ಯೂ ಮಾರ್ಗಸೂಚಿ ಅನ್ವಯ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ 10 ಗಂಟೆವರೆಗೆ ಅಷ್ಟೇ ಹೋಲ್ಸೇಲ್ ಕಾಯಿಪಲ್ಲೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು, ಒಂದು ತಾಸಿನ ಸಮಯ ಕಡಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?