ನಿರ್ವಹಣಾ ಶುಲ್ಕ ಬಾಕಿಯೇ ಪ್ರಾಬ್ಲಂ 

ಕೆಲ ಇಲಾಖೆಗಳು ಆರೇಳು ವರ್ಷಗಳಿಂದ ಉಳಿಸಿಕೊಂಡಿವೆ ಲಕ್ಷಾಂತರ ರೂ. ಬಾಕಿ | ಜನರಿಗೆ ಸೌಲಭ್ಯ ಕಷ್ಟಕರ 

Team Udayavani, Feb 20, 2020, 1:20 PM IST

20-February-13
ಹುಬ್ಬಳ್ಳಿ: ಮಿನಿವಿಧಾನಸೌಧ ನಿರ್ವಹಣೆಗಾಗಿ ಇಲ್ಲಿರುವ ಕಚೇರಿಗಳು ಪ್ರತಿ ತಿಂಗಳು ಇಂತಿಷ್ಟು ನಿರ್ವಹಣಾ ಶುಲ್ಕ ಪಾವತಿ ಮಾಡಬೇಕೆಂಬುದು ನಿಯಮ. ಆದರೆ ಕೆಲ ಇಲಾಖೆಗಳು ಆರೇಳು ವರ್ಷಗಳಿಂದ ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಸಮರ್ಪಕ ನಿರ್ವಹಣೆ ಅಸಾಧ್ಯವಾಗಿದ್ದು, ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಲಾಗದಂತಹ ಪರಿಸ್ಥಿತಿ ಉಂಟಾಗಿದೆ.
ಒಂದೇ ಸೂರಿನಡೆ ವಿವಿಧ ಇಲಾಖೆಗಳ ಸೇವೆ ದೊರೆಯಲೆಂದು ಮಿನಿ ವಿಧಾನಸೌಧ ನಿರ್ಮಿಸಿ, ವಿವಿಧ ಇಲಾಖೆಗಳಿಗೆ ಸ್ಥಳಾವಕಾಶ ನೀಡಲಾಗಿತ್ತು, ನಿರ್ವಹಣಾ ವೆಚ್ಚ ಭರಿಸುವಂತೆಯೂ ಸೂಚಿಸಲಾಗಿತ್ತು. ಕೆಲವು ಇಲಾಖೆ ಶುಲ್ಕ ನೀಡಿದರೆ, ಇನ್ನೂ ಕೆಲವು ನೀಡುತ್ತಿಲ್ಲ ಇದರಿಂದ ಕಟ್ಟಡ ನಿರ್ವಹಣೆ ಸಮಸ್ಯೆ ಎದುರಾಗಿದೆ.
89.69 ಲಕ್ಷ ರೂ. ಬಾಕಿ: 2019 ಜೂನ್‌ ಅಂತ್ಯದ ವೇಳೆಗೆ ತಾಲೂಕು ಪಂಚಾಯ್ತಿ ಬರೋಬ್ಬರಿ 87 ತಿಂಗಳ 54,29,580 ರೂ. ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿದೆ. ಅದರಂತೆ ವಾರ್ತಾ ಇಲಾಖೆ 4,49,280
ರೂ. ಸಮಾಜ ಕಲ್ಯಾಣ ಇಲಾಖೆ 4,36,620 ರೂ. ಸೇರಿದಂತೆ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ. 2019 ಜೂನ್‌ ತಿಂಗಳಿನಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ ಬಾಕಿ ಮೊತ್ತ ಮತ್ತಷ್ಟು ಹೆಚ್ಚಲಿದೆ. ಹೊಸದಾಗಿ ಆರಂಭವಾಗಿರುವ ಭೂ ದಾಖಲೆಗಳ ಹಾಗೂ ಯುಪಿಆರ್‌ ಇಲಾಖೆಗಳ ನಿರ್ವಹಣಾ ಶುಲ್ಕಕ್ಕೆ ಸೇರ್ಪಡೆಗೊಳಿಸಬೇಕಿದೆ.
ಎಲ್ಲಾ ಇಲಾಖೆಗಳಿಂದ ಒಟ್ಟು 89,69,196 ರೂ. ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿವೆ. ಬರುವ ಹಣದಲ್ಲೆ ಭದ್ರತಾ ಸಿಬ್ಬಂದಿ ವೇತನ, ವಿದ್ಯುತ್‌, ಸ್ವತ್ಛತೆ ಸೇರಿದಂತೆ ಕನಿಷ್ಠ ಸೌಲಭ್ಯಕ್ಕೆ ವ್ಯಯಿಸಲಾಗುತ್ತಿದೆ. ಜನರಿಗೆ ಬೇಕಾದ ಅಗತ್ಯ ಸುಸ್ಥಿಯಲ್ಲಿರುವ ಶೌಚಾಲಯ, ಲಿಫ್ಟ್‌, ಸೂಕ್ತ ಭದ್ರತೆ ಕ್ರಮಗಳು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಕಟ್ಟಡದ ನಿರ್ವಹಣೆಗೆ ಕನಿಷ್ಠ 3ಲಕ್ಷ ರೂ. ತಗಲುತ್ತಿದ್ದು, ಇಷ್ಟೊಂದು ಹಣ ಸಂಗ್ರಹವಾಗದಿರುವುದರಿಂದ ನಿರ್ವಹಣೆ ದುಸ್ತರವಾಗಿದ್ದು, ಇಲಾಖೆಗಳ
ಅಸಹಕಾರದಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ತಾಪಂ ಪ್ರತಿಷ್ಠೆಯ ತಿಕ್ಕಾಟ: ಮಿನಿವಿಧಾನಸೌಧ ನಿರ್ಮಾಣವಾಗಿರುವ ಜಾಗ ತಮಗೆ ಸೇರಿದ್ದರಿಂದ ನಿರ್ವಹಣಾ ವೆಚ್ಚ ಪಾವತಿಸುವುದಿಲ್ಲ ಎಂಬುದು ತಾಪಂ ವಾದ. ಇದರ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ಕೂಡ ತಾಪಂ ಅಡಿಯಲ್ಲಿ ಬರುವುದರಿಂದ ಇವರು ಕೂಡ ತಾಪಂನತ್ತ ಬೆರಳು ಮಾಡುತ್ತಿದ್ದಾರೆ ಪರಿಣಾಮ ಎರಡರಿಂದ ಬರೋಬ್ಬರಿ 58 ಲಕ್ಷಕ್ಕೂ ಹೆಚ್ಚು ಶುಲ್ಕ ಬಾಕಿ ಉಳಿದಿದೆ. ಶುಲ್ಕ ಬಾಕಿ ಉಳಿಸಿಕೊಂಡ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನೊಟೀಸ್‌ ಕಳುಹಿಸಿದರೂ ಯಾವುದಕ್ಕೂ ಕ್ಯಾರೆ ಮಾಡುತ್ತಿಲ್ಲ.
ಹೊರೆಯಾದ ಶುಲ್ಕ: ಆರಂಭದಲ್ಲಿ ಚದರಡಿಗೆ 2 ರೂ. ನಿರ್ವಹಣಾ ಶುಲ್ಕ ವಿಧಿಸಲಾಗಿತ್ತು. ಈ ಹಣದಲ್ಲಿ ಇಷ್ಟೊಂದು ದೊಡ್ಡ ಕಟ್ಟಡ ನಿರ್ವಹಿಸುವುದು ಅಸಾಧ್ಯ ಎನ್ನುವ ಕಾರಣಕ್ಕೆ 2017ರಲ್ಲಿ ನಿರ್ವಹಣಾ ಸಮಿತಿಯಲ್ಲಿ ಚರ್ಚಿಸಿ ಪ್ರತಿ ಚದರಡಿಗೆ 10 ರೂ. ನಿಗದಿ ಮಾಡಲಾಯಿತು. ಕೆಲ ಇಲಾಖೆಗಳಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಬರುವ ಒಂದಿಷ್ಟು ನಿರ್ವಹಣಾ ಹಣದಲ್ಲಿ ವಿದ್ಯುತ್‌, ಫೋನ್‌ ಸೇರಿದಂತೆ ಇತರೆ ನಿಭಾಯಿಸುವುದು ದುಸ್ತರವಾಗಿದೆ. ಮುಖ್ಯ ಕಚೇರಿಯಿಂದ ಇಷ್ಟೊಂದು ಹಣ ನಿರ್ವಹಣೆಗೆ ಪಾವತಿಸುತ್ತಿಲ್ಲ ಎನ್ನುವುದು ಕೆಲ ಅಧಿಕಾರಿಗಳ ಅಳಲು.
ಹಿಂದಿನ ಅಧಿಕಾರಿಗಳ ಎಡವಟ್ಟು
ಯೋಜನೆಯಂತೆ ಮಿನಿವಿಧಾನಸೌಧ ನಿರ್ಮಾಣವಾಗದ ಕಾರಣ ಪಾಲಿಕೆಯಿಂದ ಸಿಸಿ ದೊರೆಯದಿರುವುದು ಕಟ್ಟಡ ಈ ಪರಿಸ್ಥಿತಿ ತಲುಪಲು ಕಾರಣವಾಗಿದೆ. ನಿಯಮಾವಳಿ ಪ್ರಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಗೊಂಡಿದ್ದರೆ ಆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಅಂದಿನ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನೀಲನಕ್ಷೆಗೆ ವಿರುದ್ಧವಾಗಿ ನಿರ್ಮಿಸಿರುವ ಪರಿಣಾಮ ಪಾಲಿಕೆಯಿಂದ ಸಿಸಿ ದೊರೆಯದೆ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಹೀಗಾಗಿಯೇ ಕಟ್ಟಡದ ನಿರ್ವಹಣೆಗೆ ತಹಶೀಲ್ದಾರ್‌ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ನಿರ್ವಹಣೆಗೆ ತಗಲುವ ವೆಚ್ಚವನ್ನು ಆಯಾ ಇಲಾಖೆಯಿಂದ ಭರಿಸುವುದು ಎನ್ನುವ ನಿರ್ಣಯಕ್ಕೆ ಬಂದ ಪರಿಣಾಮ ಇಡೀ ಕಟ್ಟಡ ನಿರ್ವಹಣೆ ತಹಶೀಲ್ದಾರ್‌ ನೋಡಿಕೊಳ್ಳುವಂತಾಗಿದೆ.
ಪ್ರತಿ ತಿಂಗಳು ಕನಿಷ್ಠ 3ಲಕ್ಷ ರೂ. ನಿರ್ವಹಣೆಗೆ ಬೇಕಾಗುತ್ತಿದೆ. ಎಲ್ಲಾ ಇಲಾಖೆಗಳಿಂದ ಪ್ರತಿ ತಿಂಗಳು ಸಂದಾಯವಾದರೆ ಇಲ್ಲಿನ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ. ಕೆಲ ಇಲಾಖೆಗಳು ಕಾಲಕಾಲಕ್ಕೆ ಬಾಕಿ ಪಾವತಿಸುತ್ತಿರುವುದರಿಂದ ಅದೇ ಹಣದಲ್ಲಿ ಸಾಧ್ಯವಾದ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳದಂತಾಗಿದೆ.
ಶಶಿಧರ ಮಾಡ್ಯಾಳ,
 ತಹಶೀಲ್ದಾರ್‌
ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.