ಅನಧಿಕೃತ ವರ್ಗಾದೇಶಗಳು ಸೃಷ್ಟಿಯಾಗಿದೆಲ್ಲಿ?
Team Udayavani, Feb 18, 2019, 9:14 AM IST
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಡೆದಿರುವ ಅನಧಿಕೃತ ವರ್ಗಾವಣೆಯ ಬಹುತೇಕ ಆದೇಶಗಳನ್ನು ಆವಕ-ಜಾವಕ (ಇನ್ವರ್ಡ್-ಔಟ್ ವರ್ಡ್) ಪುಸ್ತಕದಲ್ಲಿ ದಾಖಲೆ ಮಾಡದಿರುವ ದಂಧೆಕೋರರ ಕಳ್ಳಾಟ ಬೆಳಕಿಗೆ ಬಂದಿದೆ. ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ ಎನ್ನುವ ಪ್ರಶ್ನೆಗಳು ತನಿಖಾಧಿಕಾರಿಗಳ ಮುಂದಿವೆ.
ವರ್ಗಾವಣೆ ದಂಧೆಯನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎನ್ನುವುದನ್ನು 55 ಆದೇಶಗಳ ಮೂಲಕ 148 ಸಿಬ್ಬಂದಿ ವರ್ಗಾವಣೆ ಪ್ರಕರಣ ತೆರೆದಿಟ್ಟಿದೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ಹರಿದಾಡಿರುವುದನ್ನು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಆದರೆ ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ.
ಸಂಚಾರ ವಿಭಾಗದ ಸಿಬ್ಬಂದಿಯ ವರ್ಗಾವಣೆ ಆದೇಶಗಳು ಕೇಂದ್ರ ಕಚೇರಿಯ ಸಂಚಾರ ಶಾಖೆಯಿಂದ ಹೊರಡಿಸಲಾಗುತ್ತಿದೆ. ಇಲ್ಲಿ ಸಿದ್ಧಗೊಂಡ ಆದೇಶಗಳನ್ನು ಸಿಬ್ಬಂದಿ ಶಾಖೆಯ ಪತ್ರ ಶಾಖೆ (ಆವಕ-ಜಾವಕ) ಮೂಲಕ ಸಂಬಂಧಿಸಿದ ವಿಭಾಗಗಳಿಗೆ ರವಾನಿಸಲಾಗುತ್ತಿದೆ. ಸಿಬ್ಬಂದಿ ಶಾಖೆ ಮೂಲಕ ಕಳುಹಿಸುವ ಎಲ್ಲಾ ಪತ್ರಗಳ ಮಾಹಿತಿಯನ್ನು ಸಂಚಾರ ಶಾಖೆಯ ಆವಕ-ಜಾವಕ ಸಿಬ್ಬಂದಿ ದಾಖಲೆ ಪುಸ್ತಕದಲ್ಲಿ ನಮೂದಿಸುತ್ತಾರೆ. ಯಾವುದೇ ಕಾರಣಕ್ಕೂ ಸಿಬ್ಬಂದಿ ಶಾಖೆಯ ಅಧೀನದಲ್ಲಿರುವ ಪತ್ರ ಶಾಖೆ ಹೊರತುಪಡಿಸಿ ನೇರವಾಗಿ ಕಳುಹಿಸಲು ಸಾಧ್ಯವಿಲ್ಲ.
ಲೆಸ್ ಪೇಪರ್ ಕಚೇರಿ ಮೂಲೆಗುಂಪು
ಅಕ್ರಮಗಳಿಗೆ ಕಡಿವಾಣ, ನಿಖರತೆಗಾಗಿ ಕೇಂದ್ರ ಕಚೇರಿಯಲ್ಲಿ ಲೆಸ್ ಪೇಪರ್ ವ್ಯವಸ್ಥೆ ಜಾರಿಗೆ ತಂದು ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿ ಅನುಷ್ಠಾನಕ್ಕೆ ತರಲಾಗಿತ್ತು. ಒಂದು ಶಾಖೆಯಲ್ಲಿ ಫೈಲ್ ಸಿದ್ಧಪಡಿಸಿ ಶಾಖೆ ಮುಖ್ಯಸ್ಥರ ಸಹಿ ಅಥವಾ ಇನ್ನೊಂದು ಶಾಖೆಗೆ ರವಾನಿಸಬೇಕಾದರೆ ಈ ತಂತ್ರಾಂಶದಲ್ಲಿ ನಮೂದಿಸಿಯೇ ಫೈಲ್ ವರ್ಗಾಯಿಸುವ ಪದ್ಧತಿ ಜಾರಿಗೆ ತರಲಾಗಿತ್ತು. ಈ ತಂತ್ರಾಂಶದಲ್ಲಿ ನಮೂದಿಸದ ಪತ್ರಗಳ ಪರಿಶೀಲಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಈ ವ್ಯವಸ್ಥೆ ಮೂಲೆಗುಂಪಾಗಿದ್ದರಿಂದ ಅವ್ಯವಹಾರಕ್ಕೆ ಆಸ್ಪದ ನೀಡಿದಂತಾಗಿದೆ.
ಹೀಗೂ ಮಾಡಿರಬಹುದಾ?
ಕಳ್ಳಾಟದ ದಂಧೆಕೋರರು ವರ್ಗಾವಣೆಗಾಗಿಯೇ ಪ್ರತ್ಯೇಕ ದಾಖಲೆ ಪುಸ್ತಕ ನಿರ್ವಹಿಸುತ್ತಿರಬಹುದಾ ಎನ್ನುವ ದಟ್ಟ ಶಂಕೆಯೂ ಇದೆ. ಕೆಲ ಪತ್ರಗಳನ್ನು ಮಾಮೂಲಾಗಿ ನಿತ್ಯ ಬಳಸುವ ದಾಖಲೆಯಲ್ಲಿ ನಮೋದಿಸಿ, ಕೆಲ ಆದೇಶಗಳನ್ನು ಕಳ್ಳಾಟಕ್ಕೆ ಬಳಸುತ್ತಿರಬಹುದಾದ ದಾಖಲೆ ಪುಸ್ತಕದಲ್ಲಿ ನಮೋದಿಸಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದೀಗ ನಿತ್ಯ ಬಳಸುತ್ತಿದ್ದ
ಜಾವಕ ದಾಖಲೆ ಪುಸ್ತಕ ಮಾತ್ರ ತನಿಖಾಧಿಕಾರಿಗಳಿಗೆ ದೊರೆತಿದೆ ಎನ್ನಲಾಗಿದೆ.
ಈಗಲಾದರೂ ಎಚ್ಚೆತ್ತುಕೊಳ್ತಾರಾ?
ಅಕ್ರಮಗಳಿಗೆ ಕಡಿವಾಣ, ಕಚೇರಿ ಕರ್ತವ್ಯದಲ್ಲಿ ವ್ಯವಸ್ಥೆ ಹಾಗೂ ನಿಖರತೆ ಉದ್ದೇಶದಿಂದ ಜಾರಿಗೆ ತಂದಿದ್ದ ಲೆಸ್ ಪೇಪರ್ ಕಚೇರಿ ವ್ಯವಸ್ಥೆ ಅಗತ್ಯವಾಗಿದೆ. ಈ ತಂತ್ರಾಂಶದ ಪೂರ್ಣ ಹತೋಟಿಯನ್ನು ವ್ಯವಸ್ಥಾಪಕರಿಗೆ ನೀಡಲಾಗಿತ್ತು. ಪ್ರತಿಯೊಂದು ಶಾಖೆಯ ಕೆಲಸ ಕಾರ್ಯಗಳನ್ನು ಇದರಲ್ಲೇ ವೀಕ್ಷಿಸಬಹುದಾಗಿತ್ತು. ಅಕ್ರಮಗಳಿಗೆ ಇದು ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಈ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿ ಓಬೇರಾಯನ ಕಾಲದ ಪದ್ಧತಿಯನ್ನೇ ಪುನಃ ರೂಢಿಸಿಕೊಂಡಿರುವುದು ಅವ್ಯವಹಾರಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಅವ್ಯವಸ್ಥೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಲೆಸ್ ಪೇಪರ್ ವ್ಯವಸ್ಥೆ ಅನುಷ್ಠಾನಗೊಳಿಸುವ ಕುರಿತು ಚಿಂತಿಸಬೇಕು ಎನ್ನುವುದು ಸಿಬ್ಬಂದಿ ಅಭಿಪ್ರಾಯವಾಗಿದೆ.
ಕಳ್ಳಾಟದ ಕರಾಮತು
ಇದೀಗ 55ರಲ್ಲಿ ಬಹುತೇಕ ಆದೇಶಗಳು ಸಂಚಾರಿ ಶಾಖೆಯಿಂದ ಸಿಬ್ಬಂದಿ ಶಾಖೆಗೆ ರವಾನಿಸಿದ ಬಗ್ಗೆ ಸಾಕ್ಷ್ಯಗಳೇ ಇಲ್ಲದಂತಾಗಿದೆ. ವರ್ಗಾವಣೆ ಪ್ರಕರಣ ಬಯಲಾಗುತ್ತಿದ್ದಂತೆ ಮಹತ್ವದ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿರುವ ಭದ್ರತಾ ಮತ್ತು ಜಾಗೃತ ದಳ ಅಧಿಕಾರಿಗಳು ಸಂಚಾರ ಶಾಖೆಯ ಜಾವಕ ದಾಖಲೆ ಪುಸ್ತಕದಲ್ಲಿ ವರ್ಗಾವಣೆ ಆದೇಶಗಳ ಸಂಖ್ಯೆ ಮೂದಾಗದಿರುವ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ, ಹೇಗೆ ಎನ್ನುವ ಪ್ರಶ್ನೆ ತನಿಖಾಧಿಕಾರಿಗಳನ್ನು ಕಾಡುತ್ತಿದೆ.
ಅಮಾಯಕರಿಗೆ ಶಿಕ್ಷೆ
ವರ್ಗಾವಣೆ ದಂಧೆಕೋರರ ವ್ಯವಸ್ಥಿತ ಪಿತೂರಿಗೆ ಅಮಾಯಕ ಸಿಬ್ಬಂದಿ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುವ ಮಾತುಗಳು ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿವೆ. ಸಿಬ್ಬಂದಿ ಶಾಖೆಯ ಪತ್ರ ವಿಭಾಗದ ಪುಸ್ತಕದಲ್ಲಿ ಆದೇಶಗಳ ಸಂಖ್ಯೆಗಳು ನಮೂದಾಗಿದ್ದು, ಸಂಚಾರ ಶಾಖೆಯ ಪುಸ್ತಕದಲ್ಲಿ ಈ ಆದೇಶಗಳು ನಮೂದಾಗಿಲ್ಲ ಎನ್ನುವ ಕಾರಣಕ್ಕೆ ಸಿಬ್ಬಂದಿ ಶಾಖೆಯ ಸಿಬ್ಬಂದಿಯನ್ನು ಕರ್ತವ್ಯ ನಿರ್ಲಕ್ಷéದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ. ದಂಧೆಕೋರರ ಮೇಲಾಟಕ್ಕೆ ಯಾವುದೇ ತಪ್ಪು ಮಾಡದ ಸಿಬ್ಬಂದಿ ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ.
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್