ಎಚ್.ವೈ.ಮೇಟಿ ವಿರುದ್ಧ ಸ್ಪರ್ಧಿಸುವೆ: ವಿಜಯಲಕ್ಷ್ಮೀ
Team Udayavani, Apr 6, 2018, 6:50 AM IST
ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿರುವುದಾಗಿ ವಿಜಯಲಕ್ಷ್ಮೀ ಶಿರೂರು ತಿಳಿಸಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, “ರಾಜಕಾರಣಿಗಳ ದಬ್ಟಾಳಿಕೆಯಲ್ಲಿ ರಾಜ್ಯದಲ್ಲಿ ಅದೆಷ್ಟೋ ಮಹಿಳೆಯರು ಸಂತ್ರಸ್ತರಾಗಿದ್ದು, ಅವರೆಲ್ಲರ ಧ್ವನಿಯಾಗಿ ನಾನು ಕೆಲಸ ಮಾಡಲು ಮುಂದಾಗುತ್ತಿದ್ದೇನೆ. ನಾನೂ ಕೂಡಾ ಓರ್ವ ಸಂತ್ರಸ್ತೆಯಾಗಿಯೇ ಜನರ ಮನೆ ಬಾಗಿಲಿಗೆ ಹೋಗಿ ಮತಯಾಚಿಸಲಿದ್ದೇನೆ. ಇದುವರೆಗೂ ಯಾವುದೇ ರಾಷ್ಟ್ರೀಯ ಪಕ್ಷಗಳು ನನ್ನನ್ನು ಸಂಪರ್ಕಿಸಿಲ್ಲ. ಆದ್ದರಿಂದ ನಾನು ಪಕ್ಷೇತರಳಾಗಿಯೇ ಕಣಕ್ಕಿಳಿಯುತ್ತೇನೆ’ ಎಂದು ತಿಳಿಸಿದರು.