ಶೈಕ್ಷಣಿಕ ಪ್ರಗತಿಗೆ ಐಜಿಎಸ್ ಸಹಕಾರಿ
Team Udayavani, May 18, 2018, 5:00 PM IST
ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಜ್ಞಾನ ವೃದ್ಧಿಗೆ ಐಜಿಎಸ್ ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಐಜಿಎಸ್ನ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು ಎಂದು ಬೆಂಗಳೂರಿನ ಐಜಿಎಸ್ ಚಾಪ್ಟರ್ನ ಕಾರ್ಯಾಧ್ಯಕ್ಷ ಡಾ| ಎಚ್.ಎನ್. ರಮೇಶ ಹೇಳಿದರು.
ಕೆಎಲ್ಇ ಸಂಸ್ಥೆಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂಡಿಯನ್ ಜಿಯೋಟೆಕ್ನಿನಲ್ ಸೊಸೈಟಿ(ಐಜಿಎಸ್)ಯ ಚಾಪ್ಟರ್ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರಥಮ ಚಾಪ್ಟರ್ ಅನ್ನು ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗಿದೆ. ಇದರ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.
ಸಿವಿಲ್ ವಿಭಾಗದ ಸಹಕಾರದೊಂದಿಗೆ ರಿಸೆಂಟ್ ಟ್ರೆಂಡ್ ಇನ್ ಜಿಯೋಟೆಕ್ನಿನಲ್ ಇಂಜಿನಿಯರಿಂಗ್ ವಿಷಯ ಮೇಲೆ ಮೂರು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ| ಶರದ ಜೋಶಿ, ಡಾ| ಎಸ್.ಎಸ್. ಖಾದ್ರಿ, ಡಾ| ವಿ.ಎಸ್. ಹೆಗಡೆ, ಇಂಜಿನಿಯರ್ ಪ್ರವೀಣ ಸಫಾರೆ, ಪ್ರೊ. ರಜತ್ ವೈದ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.
ಪ್ರಾಚಾರ್ಯ ಡಾ| ಬಸವರಾಜ ಎಸ್. ಅನಾಮಿ, ಡೀನ್ ಡಾ| ಆರ್.ಆರ್. ಬುರಬುರೆ, ಜಲವಾಹಿನಿ ಸಂಸ್ಥೆ ಮುಖ್ಯಸ್ಥ ಜಗದೀಶ ನಂದಿ, ಹು-ಧಾ ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ (ಐಜಿಎಸ್) ಕಾರ್ಯಾಧ್ಯಕ್ಷ ಡಾ| ಎಸ್.ಎಸ್. ಖಾದ್ರಿ, ಗೌರವ ಕಾರ್ಯದರ್ಶಿ ಡಾ| ಶರದ ಜಿ. ಜೋಶಿ, ಸಿವಿಲ್ ವಿಭಾಗದ ಪ್ರೊ| ರಜತ್ ವೈದ್ಯ, ಪ್ರೊ| ಶಬರೀಶ ಪಾಟೀಲ, ಐಜಿಎಸ್ನ ವಿದ್ಯಾರ್ಥಿ ಚಾಪ್ಟರ್ನ ಅಧ್ಯಕ್ಷ ಫಜಲ್ ಅಂಕಲಗಿ, ನಗರದ ವೃತ್ತಿನಿರತ ಇಂಜಿನಿಯರ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ