ಶಿಕ್ಷಕರ ಮುಂಬಡ್ತಿ ಅನ್ಯಾಯ ಸರಕಾರಕ್ಕೆ ಶೋಭೆ ತರೋಲ್ಲ
Team Udayavani, Jun 3, 2019, 12:03 PM IST
ನವಲಗುಂದ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಯಿತು.
ನವಲಗುಂದ: ಹದಿನಾಲ್ಕು ವರ್ಷಗಳಿಂದ 1ರಿಂದ 8ನೇ ತರಗತಿವರೆಗೆ ಬೋಧನೆ ಮಾಡುತ್ತ ಬಂದಿದ್ದೇವೆ. ಇಲ್ಲಿಯ ವರೆಗೂ ನಮ್ಮ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು(6 ಮತ್ತು 8 ತರಗತಿ ಬೋಧನೆಗೆ) 2 ಬಾರಿ ನೇರವಾಗಿ ನೇಮಕ ಮಾಡಿ ಈಗ ಮತ್ತೆ 3ನೇ ಬಾರಿ ನೇಮಕ ಮಾಡಲು ಹೊರಟಿರುವುದು ಸರಕಾರಕ್ಕೆ ಶೋಭೆ ತರುವ ವಿಷಯವಲ್ಲ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಾ| ಸಿದ್ಧಲಿಂಗೇಶ ಹಂಡಗಿ ದೂರಿದರು.
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ತಾಲೂಕಾ ಘಟಕ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ 82 ಸಾವಿರಕ್ಕಿಂತ ಅಧಿಕ ಶಿಕ್ಷಕರು ಬಿಎ, ಬಿಎಸ್ಸಿ, ಎಂಎ, ಎಂಸ್ಸಿ, ಬಿಎಡ್, ಎಂಎಡ್, ಪಿಎಚ್ಡಿ ಮುಂತಾದ ಪದವಿ ಪಡೆದ ಅನುಭವಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ಈಗಿರುವ ಶಿಕ್ಷಕರನ್ನು ಪರಿಗಣಿಸದೆ ಹೋದರೆ ನಾವು ನೇಮಕವಾದ 1ರಿಂದ 5ನೇ ತರಗತಿಯನ್ನು ಮಾತ್ರ ಬೋಧಿಸಿ 6ರಿಂದ 8 ನೇ ತರಗತಿಯನ್ನು ಬಹಿಷ್ಕರಿಸಬೇಕಾಗುತ್ತೆದೆ ಎಂದು ಎಚ್ಚರಿಸಿದರು. ತಾಲೂಕಾಧ್ಯಕ್ಷ ಮಹಾಂತೇಶ ವಸ್ತ್ರದ ಮಾತನಾಡಿ, ಈಗಾಗಲೇ ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಮತ್ತು ಶಿಕ್ಷಣ ಸಚಿವರನ್ನು ಭೇಟಿ, ಉಪವಾಸ ಸತ್ಯಾಗ್ರಹ ನಡೆಸಿ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಡಿಕೆ ಈಡೇರುವ ವರೆಗೆ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ನಿರಂತರ ಧರಣಿ ಸತ್ಯಾಗ್ರಹ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದರು. ಕೆ.ಕೆ. ಚಿಪ್ಪಾಡಿ, ವಿ.ಪಿ. ದಂಡಿಗೆದಾಸರ, ಲಿಂಗರಾಜ ಕಮತ, ಪ್ರದೀಪ ಶೆಟ್ಟಿ, ಎಲ್.ಎಂ. ಗಡ್ಡಿ ಮತ್ತಿತರು ಮಾತನಾಡಿದರು. ವೆಂಕಟೇಶ ಭಜಂತ್ರಿ, ವಿ.ಪಿ. ಬಡಿಗೇರ, ಗಿರಿಜಾ ಹಿರೇಮಠ, ಎಂ.ಬಿ. ಪವಾಡಶೆಟ್ಟರ, ಎನ್.ಆರ್. ಕಟ್ಟಿಮನಿ, ಎಂ.ಎನ್. ವಗ್ಗರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ