ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಪಾಸಣೆ
Team Udayavani, May 25, 2020, 8:41 AM IST
ಕುಂದಗೋಳ: ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 24 ಮಕ್ಕಳಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಡಿಪಿಒ ಅನ್ನಪೂರ್ಣಾ ಸಂಗಳದ ಅವರು ಈ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿದರು.
ನಂತರ ಮಾತನಾಡಿ, ಅಂಗನವಾಡಿ ಕೇಂದ್ರದ ಮೂಲಕ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಲಾಕ್ಡೌನ್ನಿಂದಾಗಿ ಮಕ್ಕಳಿಗೆ ಮನೆಗೆ ಕಿಟ್ಗಳನ್ನು ವಿತರಿಸಲಾಗುತ್ತಿದೆ. 24 ಮಕ್ಕಳು ಬೆಳವಣಿಗೆಗೆ ತಕ್ಕಂತೆ ತೂಕದ ಕೊರತೆಯಿಂದಾಗಿ ಬಳಲುತ್ತಿರುವುದು ಕಂಡು ಬಂದಿರುವುದರಿಂದ 4 ಜನರ ಸಮಿತಿ ರಚಿಸಿ ಆ ಮಕ್ಕಳ ಮನೆಗೆ ತೆರಳಿ ಬೆಳ್ಳಿಗ್ಗೆ ಮೊಟ್ಟೆ, ಹಾಲು, ಮಧ್ಯಾಹ್ನ ಅಕ್ಕಿ ಹಾಗೂ ಹೆಸರು ಬೇಳೆಯಿಂದ ಸಿದ್ಧಪಡಿಸಿದ ಕಿಚಡಿ, 3 ಗಂಟೆಗೆ ರಾಗಿ ರೊಟ್ಟಿ ಹಾಗೂ ಸೊಪ್ಪಿನ ಪಲ್ಲೆ ಮತ್ತು ರಾಗಿ ಮಾಲ್ಟ್, ಸಂಜೆ 6ಕ್ಕೆ ಹಾಲು, ಹಣ್ಣು ಹಾಗೂ ಮೊಳಕೆ ಒಡೆದ ಕಾಳುಗಳನ್ನು ಖುದ್ದಾಗಿ ಸಮಿತಿಯವರು ಮಕ್ಕಳಿಗೆ ಉಣ್ಣಬಡಿಸುತ್ತಿದ್ದಾರೆ.
ಈ ಸಮಿತಿಯಲ್ಲಿ ಬಾಲ ವಿಕಾಸ ಸಮಿತಿ, ಕಿಶೋರಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಗುವಿನ ತಾಯಿ ಸೇರಿ 4 ಜನ ಇರುತ್ತಾರೆ. 24 ಮಕ್ಕಳಲ್ಲಿ 13 ಹೆಣ್ಣು ಮಕ್ಕಳು, 11 ಗಂಡು ಮಕ್ಕಳು ಇವೆ ಎಂದು ಹೇಳಿದರು. ಶಿಲ್ಪಾ ಪಟೇಲ್, ಎಂಟು ಜನ ಮೇಲ್ವಿಚಾರಕಿಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ