ಪ್ರಕೃತಿ ಮಾತೆ ಉಳಿಸುವುದು ಅನಿವಾರ್ಯ
Team Udayavani, Apr 23, 2019, 11:45 AM IST
ಹುಬ್ಬಳ್ಳಿ: ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿ ಭೂಮಿ, ಪ್ರಕೃತಿ ಮಾತೆ ಉಳಿಸುವುದು ಇಂದಿನ ಅನಿವಾರ್ಯತೆ ಎಂದು ಪರಿಸರ ಪ್ರೇಮಿ ಆರ್.ಜಿ. ತಿಮ್ಮಾಪುರ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇಶಪಾಂಡೆ ಪ್ರತಿಷ್ಠಾನ ಸಹಯೋಗದಲ್ಲಿ ಇಲ್ಲಿನ ವಿದ್ಯಾನಗರ ಅಕ್ಷಯ ಕಾಲೊನಿಯ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವಗಳಿಗೆ ಅಗತ್ಯವಾಗಿರುವುದೆಲ್ಲವೂ ಭೂಮಿಯಲ್ಲಿದೆ. ಸಕಲ ಜೀವರಾಶಿಗಳಿಗೂ ಇರುವುದೊಂದೇ ಭೂಮಿ. ಜೀವೋತ್ಪತ್ತಿ ಮತ್ತು ಜೀವವಿಕಾಸಕ್ಕೆ ನೆರವಾದದ್ದು ಸಸ್ಯ ಸಂಕುಲ. ಮನುಷ್ಯನ ದುರಾಸೆಯಿಂದ ಸಸ್ಯ ಸಂಕುಲ, ನೈಸರ್ಗಿಕ ಸಂಪನ್ಮೂಲ ಕ್ಷೀಣಿಸುತ್ತಿದೆ. ಅದು ಜೈವಿಕ ಅಸಮತೋಲನ ಮತ್ತು ಭೂ ಉಷ್ಣತೆ ಹೆಚ್ಚಲು ಕಾರಣವಾಗಿದೆ ಎಂದರು.
ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ಹಸಿರಿನಿಂದ ಕಂಗೊಳಿಸುತ್ತಿದ್ದ ಭೂಮಿ ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ಮಾಲಿನ್ಯ, ಅತಿ ಜನಸಂಖ್ಯೆಯಿಂದ ಗೊಂದಲದ ಗೂಡಾಗುತ್ತಿದೆ. ಮನುಷ್ಯ ಅನ್ನ ಬೆಳೆಯುವ ಮಣ್ಣು, ಉಸಿರಾಡುವ ಗಾಳಿ, ಕುಡಿಯುವ ನೀರು ಸೇರಿದಂತೆ ಭೂಮಾತೆಯ ಒಡಲಿಗೆ ವಿಷವುಣಿಸಿ ಚಂದ್ರನ ಮೇಲೆ, ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿದ್ದಾನೆ ಎಂದರು.
ವಿದ್ಯಾರ್ಥಿಗಳಾದ ಯಶವಂತ ಕೋಡಬಾಳ, ಮೇಘಾ ಮಾಳಮ್ಮನವರ ಅತಿಥಿಯಾಗಿ ಮಾತನಾಡಿದರು. ಭೂಮಿ ಹಾಗೂ ಜೀವಿಗಳ ಉಗಮ, ಭೂಮಿ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ವಿಸ್ಮಯ, ಕುತೂಹಲಕಾರಿ ಸಂಗತಿಗಳ ಕುರಿತು ವೀಡಿಯೋ ಮತ್ತು ಪ್ರಜಂಟೇಶನ್ ಮೂಲಕ ಮಕ್ಕಳಿಗೆ ಶಿಕ್ಷಕ ಭರಮಪ್ಪ ಮೂಲಗಿ ತಿಳಿಸಿದರು.
ನಂತರ ನಡೆದ ಸಂವಾದದಲ್ಲಿ ಆರ್.ಜಿ. ತಿಮ್ಮಾಪುರ ವಿದ್ಯಾರ್ಥಿಗಳು ಕೇಳಿದ ಆಲದ ಮರಕ್ಕೆ ಬೀಳಲು ಬೇರುಗಳು ಏಕಿರುತ್ತವೆ? ಇತ್ತೀಚೆಗೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಏಕೆ? ಸೇರಿದಂತೆ ಇನ್ನಿತರೆ ಪ್ರಶ್ನೆಗಳಿಗೆ ಉತ್ತರಿಸಿದರು.
ಶಂಕರ ಕುರುಬರ, ಫಕ್ಕೀರೇಶ್ವರ ಮಡಿವಾಳರ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ಭಾಗ್ಯಶ್ರೀ ಗಂಡಿ, ಪುಂಡಲೀಕ ದೇವರಮನಿ, ದೀಪ್ತಿ ಗಾಯಕವಾಡ, ರಮೇಶ ಹನಸಿ, ಬಸವರಾಜ ಮುದಗಲ್ಲ, ನಾರಾಯಣ ಚವ್ಹಾಣ, ಜ್ಯೋತಿ ಕಾಪರೆ, ಹನ್ನಿಫಾ ಗೋಟೇಗಾರ, ನಿಂಗನಗೌಡ ಸತ್ತಿಗೌಡ್ರ, ಮಂಜುನಾಥ ಜಾನಣ್ಣವರ, ಸವಿತಾ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ