ಜಲಾಮೃತ ಕೈಪಿಡಿ ದಾರಿದೀಪವಾಗಲಿ
•ವಾಲ್ಮಿಯಲ್ಲಿ ಜರುಗಿದ ಕಾರ್ಯಾಗಾರ ಸಮಾರೋಪ •ಜಲ ರಕ್ಷಣೆ ಜವಾಬ್ದಾರಿ ನಿರ್ವಹಣೆಗೆ ಕರೆ
Team Udayavani, Jul 31, 2019, 3:00 PM IST
ಧಾರವಾಡ: ವಾಲ್ಮಿಯಲ್ಲಿ ಜರುಗಿದ ಕಾರ್ಯಾಗಾರ ಸಮಾರೋಪದಲ್ಲಿ ಡಿಸಿ ದೀಪಾ ಚೋಳನ್ ಮಾತನಾಡಿದರು.
ಧಾರವಾಡ: ಜಲಾಮೃತ ಕೈಪಿಡಿ ರಾಜ್ಯದ ಜಲ ಕಾರ್ಯಕರ್ತರಿಗೊಂದು ದಾರಿದೀಪವಾಗಲಿ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ(ವಾಲ್ಮಿ)ಯಲ್ಲಿ ಮಂಗಳವಾರ ಜರುಗಿದ ಜಲಾಮೃತ ಯೋಜನೆಯ ತಾಂತ್ರಿಕ ಕೈಪಿಡಿ ಸಿದ್ಧಪಡಿಸುವ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಜಲ ಸಂಕಷ್ಟದ ಕುರಿತು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಾತನಾಡುತ್ತಾರೆ. ಆದರೆ ಕೆಲವರಷ್ಟೆ ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜಲಾಮೃತ ಕೈಪಿಡಿಯಲ್ಲಿ ಜಲ ಸಂರಕ್ಷಣೆಯಲ್ಲಿ ಪ್ರತಿ ಯೊಬ್ಬರ ಜವಾಬ್ದಾರಿಗಳೇನು ಎನ್ನುವುದನ್ನು ಅಳವಡಿಸಿಕೊಳ್ಳಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ ಕುಮಾರ ಮಾತನಾಡಿ, ಅರಣ್ಯ ಇಲಾಖೆ ರೈತರಿಗೆ ಗಿಡ ನೆಟ್ಟು ಬೆಳೆಸಲು ಪ್ರೋತ್ಸಾಹಧನ ನೀಡುತ್ತಿದೆ. ಇಂತಹ ಯೋಜನೆಗಳ ಮಾಹಿತಿಯನ್ನು ಕೈಪಿಡಿಯಲ್ಲಿ ಅಳವಡಿಸಬೇಕು. ಬೀದಿ ನಾಟಕಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನೀರಿನ ದುರ್ಬಳಕೆ ತಡೆಗಟ್ಟಲು ಕಾಯ್ದೆ ಜಾರಿಗೆ ಬರುವಂತಾಗಬೇಕು ಎಂದು ಹೇಳಿದರು.
ಜಲಾಮೃತ ನಿರ್ದೇಶಕ ಬಿ. ನಿಜಲಿಂಗಪ್ಪ ಮಾತನಾಡಿ, ತಾಂತ್ರಿಕ ಕೈಪಿಡಿ ತಯಾರಿಸಲು ಎಲ್ಲ ತಜ್ಞರು ಭಾಗವಹಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಮುಖ್ಯ ಸವಾಲುಗಳು, ಪರಿಹಾರಗಳು, ಕಾರ್ಯರೂಪಕ್ಕೆ ತರುವುದು ಮತ್ತು ಸಂಪೂರ್ಣ ಜೈವಿಕ ವ್ಯವಸ್ಥೆ ಮೇಲೆ ಇದರ ಪರಿಣಾಮಗಳ ವಿವರಗಳನ್ನು ಒಳಗೊಂಡ ಲೇಖನಗಳನ್ನು ಕಾರ್ಯಾಗಾರದ ತಾಂತ್ರಿಕ ತಂಡಗಳ ಮುಖ್ಯಸ್ಥರು ಸಿದ್ಧಪಡಿಸಿ ಸಲ್ಲಿಸುವಂತೆ ಕೋರಿದರು.
ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಮಹದೇವಗೌಡ ಹುತ್ತನಗೌಡರ ಸ್ವಾಗತಿಸಿದರು. ಕೃಷ್ಣಾಜಿರಾವ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ