ಜನೌಷಧಿ ಕೇಂದ್ರ ಸ್ಥಗಿತ; ರೋಗಿಗಳ ಪರದಾಟ
Team Udayavani, Jun 14, 2020, 11:55 AM IST
ಕುಂದಗೋಳ: ಕೋವಿಡ್-19ನಿಂದ ಉದ್ಯೋಗ ದೊರೆಯದೆ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಈಗ ಗಾಯದ ಮೇಲೆ ಬರೆ ಎಳೆದಿರುವಾಗಲೇ ಪಟ್ಟಣದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಮುಚ್ಚಿದ್ದರಿಂದ ಬಡ ರೋಗಿಗಳು ಪರದಾಡುವಂತಾಗಿದೆ.
ಈ ಕೇಂದ್ರವು ಬಡ ರೋಗಿಗಳಿಗೆ ಕಲ್ಪವೃಕ್ಷವಾಗಿತ್ತು. ಮಾರುಕಟ್ಟೆಯಲ್ಲಿರುವ ಔಷಧಿ ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ಔಷಧಿ ಖರೀದಿಸಲಾಗದ ಬಹುತೇಕರು ಈ ಕೇಂದ್ರವನ್ನೇ ಅವಲಂಬಿಸಿದ್ದರು. ಶುಗರ್, ಬಿಪಿ ಇರುವ ರೋಗಿಗಳು ನಿತ್ಯ ಔಷಧಿ ಸೇವಿಸಬೇಕಿರುವುದರಿಂದ ಇದೇ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಿ ಖರೀದಿಸುತ್ತಿದ್ದರು. ಇದೀಗ ಕಳೆದ ಮೂರು ದಿನಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರಾಜೀನಾಮೆ ನೀಡಿದ್ದರಿಂದ ಈ ಕೇಂದ್ರ ಸ್ಥಗಿತಗೊಂಡಿದೆ. ಜನೌಷಧಿ ಕೇಂದ್ರ ತೆರೆಯದೇ ಇರುವುದರಿಂದ ಬಹುತೇಕ ಜನರು ಹುಬ್ಬಳ್ಳಿ ಮತ್ತಿತರ ಕಡೆಗೆ ಈ ಕೇಂದ್ರಕ್ಕೆ ತೆರಳಿ ಔಷಧಿ ಪಡೆಯಲಾಗದೇ ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿರುವ ಅಂಗಡಿಗಳಿಗೆ ತೆರಳಿ ಹೆಚ್ಚು ಹಣ ನೀಡಿ ಔಷಧ ಖರೀದಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಸಾಪೂರದ ಶಿವಪ್ಪ ಹರಿಜನ. ಬಡ ರೋಗಿಗಳಿಗೆ ಈ ಜನೌಷಧಿ ಕೇಂದ್ರ ಉಪಯುಕ್ತವಾಗಿದೆ. ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೇಂದ್ರ ತೆರೆಯಲು ಪ್ರಯತ್ನಿಸಬೇಕಿದೆ.
ಇಲ್ಲಿರುವ ಸಿಬ್ಬಂದಿ ರಾಜೀನಾಮೆ ನೀಡಿದ್ದರಿಂದ ಭಾರತೀಯ ಜನೌಷಧಿ ಕೇಂದ್ರವು ಸ್ಥಗಿತವಾಗಿದೆ. ಈ ಕೇಂದ್ರವನ್ನು ಎಂಎಸ್ಐಎಲ್ನವರು ನಿರ್ವಹಿಸುತ್ತಿದ್ದು ಅವರಿಗೆ ಈಗಾಗಲೇ ಈ ಕುರಿತು ಮಾತನಾಡಿದ್ದೇನೆ. ಸಿಬ್ಬಂದಿಯನ್ನು ನೇಮಿಸುತ್ತೇವೆಂದು ಹೇಳಿದ್ದಾರೆ. ಡಾ|ಭಾಗೀರಥಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ.
–ಶೀತಲ್ ಎಸ್ ಮುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ