ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಜೋಶಿ ಒತ್ತಾಯ
Team Udayavani, May 29, 2018, 7:25 AM IST
ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಲ ಮನ್ನಾ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ ಹೊರ ಹೋಗಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿ, ನಾಡಿನ ಜನತೆಗೆ ಗುಲಾಮರಾಗಿ ಇರಬೇಕಾದ ನೀವು ಕಾಂಗ್ರೆಸ್ಗೆ ತಲೆಬಾಗಿದ್ದೀರಿ ಎಂದಾದರೆ ಆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ರಾಜೀನಾಮೆ ನೀಡಿ ಹೊರ ಹೋಗಬೇಕು ಎಂದರು.