ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ
Team Udayavani, Sep 28, 2020, 11:58 AM IST
ಧಾರವಾಡ: ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ನಗರದ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಜತೆಗೆ ರೈತ ಸೇನಾ ಕರ್ನಾಟಕ, ಕೆಆರ್ಎಸ್ ಮತ್ತು ಗ್ರೀನ್ ಬ್ರಿಗೇಡ್, ದಲಾಲ್ ಮತ್ತು ವರ್ತಕರ ಸಂಘ, ಸಮಾಜ ಪರಿವರ್ತನ ಸಮುದಾಯ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಹೀಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಇದಲ್ಲದೇ ಬಂದ್ ಯಶಸ್ವಿ ಮಾಡಲು ಸಭೆ ಕೈಗೊಂಡು ರೂಪರೇಷೆ ಸಿದ್ದಪಡಿಸಿರುವ ಸಂಘಟನೆಗಳು, ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಆರಂಭಿಸಿವೆ.
ಬಹುತೇಕ ಎಲ್ಲಾ ಸಂಘಟನೆಗಳೂ ಜುಬಿಲಿ ವೃತ್ತದಲ್ಲಿ ಸಂಘಟನೆಗೊಂಡಿದ್ದು ಅಲ್ಲಿಯೇ ಧರಣಿ ರಸ್ತೆ ತಡೆ ನಡೆಸಿವೆ. ರೈತರು ಚಕ್ಕಡಿಯೊಂದಿಗೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ: ಮಂಡ್ಯ: ಸಂಘಟನೆಗಳಿಂದ ಪ್ರತಿಭಟನೆ, ಬಸ್ ಓಡಾಟ ಇದ್ದರೂ ಜನಸಂಚಾರ ವಿರಳ
ನಗರದ ಆಸ್ಪತ್ರೆ, ಔಷಧ ಮಳಿಗೆ, ಹಾಲು, ಹಣ್ಣು, ತರಕಾರಿ ಹೋಟೆಲ್ಗಳು ಸೇರಿ ಅಗತ್ಯ ವಸ್ತುಗಳ ಸೇವೆಗೆ ಯಾವುದೇ ಅಡಚಣೆಯಾಗಿಲ್ಲ. ಆದರೆ ನಗರ ಸಾರಿಗೆ, ಬಿಅರ್ಟಿಎಸ್, ಅಂತರ್ ಜಿಲ್ಲಾ ಬಸ್ ಸಂಚಾರ ಸದ್ಯ ಸ್ಥಗಿತಗೊಂಡಿದೆ. ಒಟ್ಟಾರೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ