ಊಟ ಬಿಟ್ಟು, ಕಣ್ಣೀರಿಟ್ಟು ನೆಚ್ಚಿನ ಟೀಚರ್ ಉಳಿಸಿಕೊಂಡ್ರು
•ಧಾರವಾಡ ಜಿಲ್ಲೆ ನರೇಂದ್ರ ಗ್ರಾಮದಲ್ಲೊಂದು ಅಪರೂಪದ ಘಟನೆ•ಮನವಿ ಪುರಸ್ಕರಿಸಿ ವರ್ಗಾವಣೆ ರದ್ದು ಮಾಡಿದ ಡಿಡಿಪಿಐ
Team Udayavani, Jun 19, 2019, 9:35 AM IST
ಧಾರವಾಡ: ಅಳುತ್ತಿರುವ ಮಕ್ಕಳು.
ಧಾರವಾಡ: ನೆಚ್ಚಿನ ಟೀಚರ್ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಲ್ಲದೇ ಮಧ್ಯಾಹ್ನದ ಊಟ ತ್ಯಜಿಸಿದ ಅಪರೂಪದ ಘಟನೆ ತಾಲೂಕಿನ ನರೇಂದ್ರ ಗ್ರಾಮದ ಮಂಗಳವಾರ ನಡೆದಿದೆ.
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಿಂದ ರೇಣುಕಾ ಜಾಧವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಈಗ ಹಿರಿತನದ ಮೇಲೆ ಬಡ್ತಿ ಹೊಂದಿದ್ದಾರೆ. ಹೀಗಾಗಿ ಅವರು ಕೌನ್ಸೆಲಿಂಗ್ದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಶಾಲಾ ಮಕ್ಕಳು ಗೋಳಿಟ್ಟಿದ್ದಾರೆ. ನಮ್ಮನ್ನು ಬಿಟ್ಟು ಹೋಗದಂತೆ ಕಣ್ಣೀರು ಹಾಕುತ್ತಾ ಟೀಚರ್ಗೆ ಮನವಿ ಮಾಡಿದ ಮಕ್ಕಳು, ಶಾಲೆಗೆ ಬಂದ ಬಿಸಿಯೂಟವನ್ನೂ ಮಾಡಲಿಲ್ಲ.
ವಿದ್ಯಾರ್ಥಿಗಳ ಪ್ರೀತಿ ಕಂಡು ನೋವಿನಿಂದಲೇ ವಿದಾಯ ಹೇಳಿದ ರೇಣುಕಾ ಅವರ ಕಣ್ಣುಗಳೂ ಒದ್ದೆಯಾಗಿದ್ದು, ಮಕ್ಕಳ ನೋವು ಕಂಡ ಪೋಷಕರು ಹಾಗೂ ಗ್ರಾಮಸ್ಥರ ಕಣ್ಣಾವಲಿಗಳೂ ತುಂಬಿ ಬಂದಿದ್ದವು. ಮಕ್ಕಳ ವಿರೋಧದ ಮಧ್ಯೆಯೇ ಶಾಲಾ ಮೇಲುಸ್ತುವಾರಿ ಸಮಿತಿ ರೇಣುಕಾ ಅವರನ್ನು ಬೀಳ್ಕೊಟ್ಟಿತು.
ವರ್ಗಾವಣೆ ರದ್ದು: ಇದಾದ ಬಳಿಕ ಕೌನ್ಸೆಲಿಂಗ್ಗಾಗಿ ಧಾರವಾಡಕ್ಕೆ ಬಂದಿದ್ದ ರೇಣುಕಾ ಅವರಿಗೆ ಕೋಟೂರು ಹಾಗೂ ಲೋಕೂರು ಗ್ರಾಮಗಳ ಪೈಕಿ ಒಂದು ಗ್ರಾಮದ ಶಾಲೆ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಇಷ್ಟರೊಳಗೆ ಡಿಡಿಪಿಐ ಅವರನ್ನು ಭೇಟಿ ಮಾಡಿದ ನರೇಂದ್ರ ಗ್ರಾಮಸ್ಥರು, ರೇಣುಕಾ ಅವರ ವರ್ಗಾವಣೆ ರದ್ದುಗೊಳಿಸಿ ಅಲ್ಲಿಯೇ ಉಳಿಸುವಂತೆ ಮನವಿ ಮಾಡಿದರು. ಕೊನೆಗೂ ಮಕ್ಕಳ ತೊಳಲಾಟ, ಗ್ರಾಮಸ್ಥರ ಮನವಿ ಪುರಸ್ಕರಿಸಿ ರೇಣುಕಾ ಅವರ ವರ್ಗಾವಣೆ ರದ್ದು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ