ಬದುಕಿನ ಬೇರುಗಳು ಗಟ್ಟಿಯಾಗಿರಲಿ

ಮಾಡೆಲ್‌ ಹೈಸ್ಕೂಲ್‌ 94ನೇ ಇಸ್ವಿ ಬ್ಯಾಚ್‌ ವಿದ್ಯಾರ್ಥಿಗಳಿಂದ ಗುರುವಂದನೆ-ಸ್ನೇಹ ಸಮ್ಮಿಲನ ಕಾರ್ಯಕ್ರಮ

Team Udayavani, Jun 6, 2022, 10:18 AM IST

4

ನವಲಗುಂದ: ಅಂದು ಶಿಕ್ಷಣ ಸೇವೆಯಾಗಿತ್ತು, ಇಂದು ವ್ಯಾಪಾರೀಕರಣವಾಗಿದೆ. ಸರಳತೆ, ಗೌರವ ನೀಡುವ ಮನೋಭಾವನೆ ಇವತ್ತಿನ ಮಕ್ಕಳಲ್ಲಿ ಇಲ್ಲವಾಗಿದೆ ಎಂದು ಸಾಹಿತಿ ಮತ್ತು ಜೀವನ ಶೈಲಿ ಸಲಹೆಗಾರ ಸಿದ್ದು ಯಾಪಲಪರವಿ ಹೇಳಿದರು.

ರವಿವಾರ ಪಟ್ಟಣದ ಮಾಡೆಲ್‌ ಹೈಸ್ಕೂಲ್‌ ಸಭಾಭವನದಲ್ಲಿ ನಡೆದ 1994ನೇ ಬ್ಯಾಚ್‌ ನಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದು ಮಾನವೀಯ ಸಂಬಂಧ ನಶಿಸಿ ಹೋಗುತ್ತಿದೆ. ಜೀವನ ಯಾವ ರೀತಿ ಇದೆಯೋ ಅದೇ ರೀತಿ ತೆಗೆದುಕೊಂಡು ಎದುರಿಸಬೇಕು. ಶ್ರೀಮಂತಿಕೆ, ಬಡತನ ಎರಡನ್ನೂ ಅಷ್ಟೇ ಸಮನಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಎಂಜಿನಿಯರ್‌, ಡಾಕ್ಟರ್‌ ಆಗಬೇಕೆಂಬ ವ್ಯಾಮೋಹ ಇದೇ ಹೊರತು ನಮ್ಮ ಮಕ್ಕಳು ರೈತನಾಗಲಿ, ಒಳ್ಳೆಯ ವ್ಯಾಪಾರಿಯಾಗಬೇಕೆಂಬ ಗುರಿ ಇಲ್ಲದಂತಾಗಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಸಂಸ್ಕೃತಿ ಮರೆತಿದ್ದಾರೆ. ಹಣ- ಅಹಂಕಾರ ನಮ್ಮ ಜೊತೆ ಬರುವುದಿಲ್ಲ, ಬದುಕಿನ ಬೇರುಗಳು ಗಟ್ಟಿಯಾಗಿರಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿಗಳು ಮಾತನಾಡಿ, ಹಿಂದಿನ ಕಾಲದ ಶಿಕ್ಷಕನಲ್ಲಿ ಶಿಸ್ತು, ಮೌಲ್ಯಗಳು ಇದ್ದವು. ಇಂದು ಅವೆಲ್ಲ ಕಡಿಮೆಯಾಗಿವೆ. ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಸಣ್ಣತನ ತೋರಿಸಬಾರದು. ಗುರುವನ್ನು ಮೀರಿ ಶಿಷ್ಯ ಬೆಳೆದರೆ ಗುರುವಿಗೆ ಅದೇ ಸಂತೋಷ ಎಂದರು.

ಮಾಡೆಲ್‌ ಹೈಸ್ಕೂಲ್‌ ಮುಖ್ಯಾಧ್ಯಾಪಕರಾದ ಎಸ್‌.ಕೆ. ಮಾಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿದರು. ನಿವೃತ್ತ ಹಿರಿಯ ಮುಖ್ಯಾಧ್ಯಾಪಕರಾದ ಎಸ್‌. ಎಂ.ಪಟ್ಟಣಶೆಟ್ಟಿ, ಕೆ.ಜಿ.ಸದರಜೋಶಿ, 94ನೇ ಸಾಲಿನ ವಿದ್ಯಾರ್ಥಿಗಳಾದ ಪಂಕಜ ಬಿಡಿ, ವೈ.ಜಿ. ಗದ್ದಿಗೌಡರ, ಶೌಕತ್ತಲಿ ಲಂಬೂನವರ ಹಾಗೂ ಶ್ರೀದೇವಿ ಅನಿಸಿಕೆ ವ್ಯಕ್ತಪಡಿಸಿದರು. ಅನಿಲ್‌ ಮೇತ್ರಿ ಸಂಗಡಿಗರು ಸಂಗೀತ ಸೇವೆ ನೀಡಿದರು. ಶಿವರಂಜನಿ ನಾಟ್ಯ ಸಂಘದ ವತಿಯಿಂದ ರಂಜನಾ ಕಾಮತ್‌ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು.

94ನೇ ಇಸ್ವಿಯ ವಿದ್ಯಾರ್ಥಿಗಳು ಶಿಕ್ಷಕರಾದ ಎಸ್‌.ಎಂ. ಪಟ್ಟಣಶೆಟ್ಟಿ, ಎನ್‌.ಎಚ್‌. ಪುರಾಣಿಕ, ಆರ್‌.ಬಿ. ಕಮತರ, ವಿ.ಎನ್‌. ಪತಕಿ ಎಂ.ಬಿ. ಮುಲ್ಲಾನವರ, ಕೆ.ಜಿ. ಸದರಜೋಶಿ, ಎಸ್‌.ಬಿ. ತೋಟಿ, ಎಸ್‌.ಎ. ಬಾರಕೇರ, ಎಸ್‌.ಡಿ. ಪಾಟೀಲ, ಸುನಿತಾ ಅಂಗಡಿ, ಕುಮುದಾ ರೊಟ್ಟಿ, ಎಸ್‌.ಆರ್‌. ಕುಲಕರ್ಣಿ, ಎಂ.ಎಸ್‌. ಕಡಕೋಳ, ದೇವರಮನಿ ಸರ್‌, ಪತ್ತಾರ ಸರ್‌, ಅಡಿವಿ ಸರ್‌, ಆರ್‌.ಜಿ. ಬಿಡೆ, ಶಿವಪ್ಪ ಚುಳಕಿ, ವೆಂಕಣ್ಣ ದೊಡಮನಿ, ಎಸ್‌.ಟಿ. ರೋಣದ, ಪಿ.ಎನ್‌. ಗುಳೇದ, ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು.

ದಿ| ಅನಂತ ಸುಂಕದ, ದಿ| ಎಸ್‌.ವಿ. ಮಧ್ವರಾಯನವರ, ದಿ| ಜೆ.ಡಿ.ದೊಡಮನಿ, ದಿ| ಎಸ್‌.ಎಂ.ಕದಂ, ದಿ| ಬಿ.ಬಿ.ಜಕ್ಕನಗೌಡರ, ದಿ| ವಾಸುದೇವ ಗುಡಿ, ದಿ| ಎಚ್‌.ಎ.ಗ್ರಾಮಪುರೋಹಿತ, ದಿ| ವಿ.ಎಸ್‌. ಕುಲಕರ್ಣಿ, ದಿ| ಪಿ.ಎಸ್‌. ದೇವಳೆ, ದಿ| ಟಿ.ಎ.ಹಳ್ಳಿಕೇರಿ, ದಿ| ಕೌಜಗೇರಿ ಹಾಗೂ ಅಗಲಿದ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿದ್ಯಾರ್ಥಿಗಳಾದ ಮಹೇಶ ಕೊಟ್ಟರಶೆಟ್ಟರ, ಶಿವಾನಂದ ಕಮ್ಮಾರ, ವಿಜಯ ನಾಗಾವಿ, ಮಹಾಂತೇಶ ಜಿನಗಾ, ರಮೇಶ ಕುಲಕರ್ಣಿ, ಅರುಣ ಸುಂಕಾಪುರ, ರಾಜು ಗದಗ, ಯಲ್ಲಪ್ಪ ಕಲಾಲ, ಅಪ್ಪಣ್ಣ ಕುಬಸದ, ಮುತ್ತು ಕಿರೇಸೂರ, ಅನೀಲ ಜಾಬೋಂಟಿ, ಶೌಕತ್ತ ಎಂಜಿನಿಯರ್‌, ವಿಶ್ವನಾಥ ದ್ಯಾವನಗೌಡರ, ಸಂತೋಷ ಪಾಟೀಲ, ಸಲೀಮ ಮುಲ್ಲಾ, ಲಕ್ಷ್ಮಣ ಬಂಡಿವಾಡ, ಜಮೀರ ಹುನಗುಂದ, ಗಂಗಾಧರ ಕಮ್ಮಾರ, ಜಯಪ್ರಕಾಶ ಮಾರನಬಸರಿ, ಮಂಜುನಾಥ ದ್ಯಾವನಗೌಡರ, ಸುನೀಲ ಸನ್ನಾಯಕ, ವಿಜಯಲಕ್ಷ್ಮೀ ಶಿದ್ರಾಮಶೆಟ್ಟರ, ಜ್ಯೋತಿ ಮಹೇಂದ್ರಕರ ಇನ್ನಿತರರಿದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.