ಪ್ರಚಾರ ಗೀಳಿಗೆ ಹೆಬ್ಟಾಳಕರ ಸುಳ್ಳು ಆರೋಪ: ಜೋಶಿ
Team Udayavani, Sep 30, 2018, 6:05 AM IST
ಧಾರವಾಡ: ಆಪರೇಷನ್ ಕಮಲಕ್ಕಾಗಿ ತಮಗೆ 30 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಕಾಂಗ್ರೆಸ್ನ ಲಕ್ಷ್ಮೀ ಹೆಬ್ಟಾಳಕರ ಅವರ ಹೇಳಿಕೆ ನೋಡಿದರೆ ಅವರು ಪ್ರಚಾರದ ಗೀಳು ಹಚ್ಚಿಕೊಂಡಿದ್ದಾರೆ ಎನಿಸುತ್ತದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರ ಗೀಳು ಹಚ್ಚಿಕೊಂಡೇ ಈ ರೀತಿ ಮಾತನಾಡುತ್ತಿದ್ದಾರೆ. ಯಾರು, ಯಾವಾಗ ಹೆಬ್ಟಾಳಕರ ಅವರಿಗೆ ದುಡ್ಡು ಕೊಡುತ್ತಾರೆಂದು ಹೇಳಿದ್ದರು? ಅದಕ್ಕೆ ಸಾಕ್ಷಿಗಳು ಇವೆಯೇ? ಒಂದು ವೇಳೆ ಆಮಿಷ ಒಡ್ಡಿದ್ದರೂ ಇಷ್ಟು ದಿನ ಸುಮ್ಮನಿದ್ದ ಉದ್ದೇಶ ಏನು? ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲ. ಒಂದು ವೇಳೆ ಈ ಬಗ್ಗೆ ಕಾಲ್ ರೆಕಾರ್ಡ್ ಇದ್ದರೆ ಬಹಿರಂಗಪಡಿಸಲಿ ಎಂದರು.