ಮಹದಾಯಿ: ನಾಲ್ಕು ದಶಕಗಳ ¬ಬಳಿಕ ನೀರಿನ ಸದ್ದು
Team Udayavani, Aug 15, 2018, 6:00 AM IST
ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಜನ್ಮ ತಳೆದು ಮುಂದೆ ಗೋವಾ ಸೇರುವ ಮಹದಾಯಿ, ರಾಜ್ಯದಲ್ಲಿ ಸುಮಾರು 29 ಕಿಮೀ ದೂರ ಹರಿದರೆ, ಗೋವಾದಲ್ಲಿ ಸುಮಾರು 52 ಕಿಮೀ ಉದ್ದ ಹರಿದು ನಂತರ ಅರಬ್ಬಿ ಸಮುದ್ರ ಸೇರುತ್ತದೆ. ಮಹದಾಯಿ ನದಿ ಒಟ್ಟು 2032 ಚದರ ಕಿಮೀ ಜಲಾನಯನ ವ್ಯಾಪ್ತಿ ಹೊಂದಿದೆ. ಮಹದಾಯಿ ತಿರುವ ಯೋಜನೆ ಮೂಲಕ ರಾಜ್ಯದ ಗಡಿ ಭಾಗ ಕೊಟ್ನಿ ಬಳಿ ಜಲಾಶಯ ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಹಾಗೂ ನೀರನ್ನು ಮಲಪ್ರಭಾಕ್ಕೆ ಸೇರಿಸಬೇಕೆಂಬ ಚಿಂತನೆ ಹೊಂದಲಾಗಿತ್ತು. ಈ ಕುರಿತು 1976ರಲ್ಲಿ ಗುಳೇದಗುಡ್ಡದ
ಶಾಸಕರಾಗಿದ್ದ ಬಿ.ಎಂ.ಹೊರಕೇರಿಯವರು ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಖ್ಯಾತ ಎಂಜಿನಿಯರ್ ಬಾಳೆಕುಂದ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ನೀಲನಕ್ಷೆ ಸಿದಟಛಿಪಡಿಸುವಲ್ಲಿ ತಮ್ಮದೇ ಶ್ರಮ ಹಾಕಿದ್ದರು.
ಪ್ರಸ್ತಾಪಕ್ಕೆ ಸ್ಪಂದಿಸಿದ್ದ ಅಂದಿನ ಸರ್ಕಾರ, 1978ರಲ್ಲಿ ಎಸ್. ಆರ್. ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅಧ್ಯಯನ ನಡೆಸಿ ಸಮಿತಿ ವರದಿ ನೀಡಿತ್ತು. 1988ರಲ್ಲಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಗೋವಾ ವಿರೋಧ ತೋರಿತ್ತು. ಮುಂದೆ ಎಸ್.ಆರ್.ಬೊಮ್ಮಾಯಿ 1989ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣಾ ಅವರೊಂದಿಗೆ ಮಾತುಕತೆ ನಡೆಸಿ, ಯೋಜನೆ ಜಾರಿಗೆ ಸೌಹಾರ್ದ ಪರಿಹಾರ ಕಂಡುಕೊಂಡಿದ್ದರು. ನಂತರ ತನ್ನ ನಿಲುವು ಬದಲಾಯಿಸಿದ್ದ ಗೋವಾ, ಮೊಂಡುತನಕ್ಕೆ
ಅಂಟಿಕೊಂಡಿತ್ತು. ರಾಜ್ಯ ಸರ್ಕಾರ 2000ರಲ್ಲಿ ನಮ್ಮದೇ ಆದ ಕಳಸಾ-ಬಂಡೂರಿ ಹಳ್ಳಗಳನ್ನು ಬಳಸಿಕೊಂಡು ಒಟ್ಟು 7.56 ಟಿಎಂಸಿ ನೀರು ಪಡೆದುಕೊಳ್ಳುವ ಯೋಜನೆಗೆ ಮುಂದಾಗಿತ್ತು. 2002ರಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ ಈ ಯೋಜನೆಗೆ ಚಾಲನೆ
ನೀಡಿದ್ದರು. ಯೋಜನೆಗೆ ಅರಣ್ಯ ಇಲಾಖೆ, ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತಾದರೂ, ಗೋವಾದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಾನೇ ನೀಡಿದ್ದ ಒಪ್ಪಿಗೆಯನ್ನು ತಡೆ ಹಿಡಿಯಿತು. ಆ ಮೂಲಕ ಕಳಸಾ-ಬಂಡೂರಿ ನಾಲಾ ಕೂಡ ನನೆಗುದಿಗೆ ಬಿದ್ದಿತ್ತು.
ನ್ಯಾಯಾಧಿಕರಣ ರಚನೆ: 2006ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸಿಎಂಗಳ ಸಭೆ ಕರೆದು ಚರ್ಚಿಸಿತ್ತಾದರೂ ಗೋವಾ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಬದಲಾಗಿ ನ್ಯಾಯಾಧಿಕರಣಕ್ಕೆ ಒತ್ತಾಯಿಸಿತ್ತು. ಜತೆಗೆ ಸುಪ್ರೀಂಕೊರ್ಟ್ ಮೊರೆ ಹೋಗಿದ್ದರಿಂದ ಕೇಂದ್ರ ಸರ್ಕಾರ 2010, ನ.16ರಂದು ನ್ಯಾಯಮೂರ್ತಿ ಜೆ.ಎಂ.ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚನೆ ಮಾಡಿತ್ತು. ನ್ಯಾಯಾಧಿಕರಣದ ಅವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತಾದರೂ ತೀರ್ಪು ನೀಡಲು ಎಂಟು ವರ್ಷಗಳೇ ಬೇಕಾಯಿತು. ಈ ನಡುವೆ 2015ರಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ನೀರು ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ 2016ರಲ್ಲಿ ತಿರಸ್ಕರಿಸಿತ್ತು.
● ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ