ಪೇಢಾನಗರಿಯಲ್ಲಿ ಹಣ್ಣುಗಳ ರಾಜನ ಹಬ್ಬ ಆರಂಭ
Team Udayavani, May 26, 2019, 9:53 AM IST
ಧಾರವಾಡ: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮ ಹಾಗೂ ಜಿಪಂ ಸಹಯೋಗದಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ಕೂಡ ಲಭಿಸಿದೆ.
ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮಾವು ಮೇಳ ಮಾವು ಪ್ರಿಯರ ಗಮನ ಸೆಳೆಯುವಂತೆ ಮಾಡಿದೆ. ಬೆಳಗ್ಗೆಯೇ ಮೇಳ ಚಾಲನೆ ಪಡೆದುಕೊಂಡರೂ ಸಂಜೆ 4 ಗಂಟೆಗೆ ಜಿಪಂ ಸಿಇಓ ಡಾ| ಬಿ.ಸಿ. ಸತೀಶ ಅಧಿಕೃತ ಚಾಲನೆ ನೀಡಿದರು. ಇವರಿಗೆ ಅಪರ ಜಿಲ್ಲಾಧಿಕಾರಿ ಡಾ| ಸುರೇಶ ಇಟ್ನಾಳ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹಾಪಕಾಮ್ಸ್ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಸಾಥ್ ನೀಡಿದರು. ಬಳಿಕ ಮಾವು ಮಳಿಗೆಗಳಿಗೆ ಭೇಟಿ ನೀಡಿ ಹಣ್ಣಿನ ರುಚಿ ಕೂಡ ಸವಿದರು.
ದರ ನಿಗದಿ ಪದ್ಧತಿಗೆ ತಿಲಾಂಜಲಿ: ಪ್ರತಿ ಸಲ ಮೇಳದಲ್ಲಿ ಮಾವಿನ ತಳಿಯ ಅನುಸಾರವಾಗಿ ತೋಟಗಾರಿಕೆ ಇಲಾಖೆಯೇ ದರ ನಿಗದಿ ಮಾಡಿ, ಆ ದರಪಟ್ಟಿ ಅನುಸಾರ ಮಾವು ಬೆಳೆಗಾರರು ಮಾರಾಟ ಮಾಡಬೇಕಿತ್ತು. ಆದರೆ ಈ ಸಲ ತೋಟಗಾರಿಕೆ ಇದಕ್ಕೆ ತಿಲಾಂಜಲಿ ಹಾಕಿದೆ. ತಳಿ ಅನುಸಾರ ದರ ನಿಗದಿ ಮಾಡುವುದರಿಂದ ನಷ್ಟ ಆಗುತ್ತಿದೆ ಎಂಬ ಬೆಳೆಗಾರರ ಮಾತಿಗೆ ತೋಟಗಾರಿಕೆ ಇಲಾಖೆ ಮಣೆ ಹಾಕಿದೆ. ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆಯೇ ದರ ಹೊಂದಾಣಿಕೆ ನಡೆಯುತ್ತಿದೆ. ಹೀಗಾಗಿ ವಿವಿಧ ತಳಿಯ ಮಾವಿನ ಹಣ್ಣುಗಳು ಡಜನ್ಗೆ 100 ರಿಂದ 400 ರೂ.ವರೆಗೂ ಮಾರಾಟ ಆಗುತ್ತಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ