ಮರೇವಾಡ ಬಸವಣ್ಣ ಅದ್ಧೂರಿ ರಥೋತ್ಸವ
Team Udayavani, May 20, 2019, 11:11 AM IST
ಧಾರವಾಡ: ಮಳಿ-ಬೆಳಿ ಸಂಪೈತ್ರಿಪಾ..ಗುಡುಗು ಸಿಡ್ಲು ಭಾಳ ಐತ್ರಿಪಾ..ರಕ್ತದ ಕಾವಲಿ ಹರಿತೇತ್ರಿಪಾ..ನನ್ನ ತಂಗೀಗೆ ಐದು ವಾರಾ ಬಿಡ್ರಿಪಾ..ಹುಟ್ಟಿದ ಮಗೂಗೆ ಬಲಾ ಇಲ್ರಿಪಾ..
ಇದು ಮರೇವಾಡ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಕೊನೆಯಲ್ಲಿ ಕೇಳಿ ಬಂದ ಕಾರ್ಣಿಕ. ರಥೋತ್ಸವ ಸಂಪನ್ನಗೊಂಡ ಬಳಿಕ ಅಮ್ಮಿನಬಾವಿಯ ಬಸವಣ್ಣ ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಧರ್ಮಪ್ಪ ಪೂಜಾರ ಅವರು ಕಾರ್ಣಿಕ ಹೇಳಿ ವರ್ಷದ ಭವಿಷ್ಯ ನುಡಿದರು.
ಇದಕ್ಕೂ ಮುನ್ನ ಬೆಳಗ್ಗೆ ಬಸವಣ್ಣ (ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿಯು ಹಿರಿಯ ವೈದಿಕರಾಗಿರುವ ತಿಪ್ಪಯ್ಯಸ್ವಾಮಿ ಯರಗಂಬಳಿಮಠ ಮತ್ತು ಶೇಖಯ್ಯಸ್ವಾಮಿ ಹಿರೇಮಠ ಸೇರಿದಂತೆ ದೇವಾಲಯದ ಅರ್ಚಕ ಬಳಗದ ವೈದಿಕತ್ವದಲ್ಲಿ ನಡೆದವು.
ಸಂಜೆ 5:30 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಅಲಂಕೃತ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತಗಣ ಉತ್ತತ್ತಿ, ಬಾಳಿಹಣ್ಣು, ಲಿಂಬೆಹಣ್ಣುಗಳನ್ನು ರಥಕ್ಕೆ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಜಾತ್ರೆ ಅಂಗವಾಗಿ ಅಹೋರಾತ್ರಿ ಆನಂದ ಕರಾಡೆ ಹಾಗೂ ಮಹಾಂತೇಶ ಹಡಪದ ಜಂಟಿ ನೇತೃತ್ವದಲ್ಲಿ ಸವಾಲ್-ಜವಾಬ್ ಭಜನಾ ಸ್ಪರ್ಧೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ