ಮಾನಸಿಕ ಕಾಯಿಲೆ ಜಾಗೃತಿ ಅಗತ್ಯ: ಪ್ರೊ| ಶರ್ಮಾ
ಕವಿಸಂದಲ್ಲಿ ಜ್ಯೋತಿಷಿ ದಿ| ಎನ್.ಕೆ. ಜೋಗಳೇಕರ ಸ್ಮರಣೆ
Team Udayavani, Jun 12, 2019, 9:25 AM IST
ಧಾರವಾಡ: ಕವಿಸಂನಲ್ಲಿ ಖ್ಯಾತ ಜ್ಯೋತಿಷಿ ದಿ| ಎನ್.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಪ್ರೊ| ಕೆ.ಎಸ್. ಶರ್ಮಾ ಮಾತನಾಡಿದರು.
ಧಾರವಾಡ: ಮಾನಸಿಕ ರೋಗವೂ ಸಹ ದೈಹಿಕ ರೋಗದ ಹಾಗೆಯೇ ಎಂಬ ತಿಳಿವಳಿಕೆ ಸಾರ್ವತ್ರಿಕವಾಗಿ ಬರಬೇಕಾಗಿದೆ ಎಂದು ಚಿಂತಕ ಪ್ರೊ| ಕೆ.ಎಸ್. ಶರ್ಮಾ ಹೇಳಿದರು.
ಕವಿಸಂನಲ್ಲಿ ಖ್ಯಾತ ಜ್ಯೋತಿಷಿ ದಿ| ಎನ್.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾಗೃತಿಯಿಂದ ಢಂಬಾಚಾರ ಹಾಗೂ ಅಸಾಂಪ್ರದಾಯಿಕ ಜ್ಯೋತಿಷ, ದೇವಪೂಜೆಗಳು ನಿಯಂತ್ರಣಕ್ಕೆ ಬರಬಹುದು ಎಂದರು.
ನೊಂದು ಬೆಂದವರಿಗೆ ಸಾಂತ್ವನ ನೀಡಿ ಅವರ ಬಾಳ ಪಥದಲ್ಲಿ ನವೋಲ್ಲಾಸ ಮತ್ತು ನವೋತ್ಸಾಹವನ್ನು ನೀಡುತ್ತಿದ್ದ ಜ್ಯೋತಿಷಿ ಎನ್.ಕೆ. ಜೋಗಳೇಕರ ಅವರು ಜ್ಯೋತಿಷ್ಯಕ್ಕಿಂತ ಹೆಚ್ಚಾಗಿ ಮನೋವಿಜ್ಞಾನಿಯಂತೆ ವರ್ತಿಸುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಜ್ಯೋತಿಷಿಗಳಿಗೆ ತಮ್ಮ ಕಾರ್ಯ ಚಟುವಟಿಕೆ ಹಾಗೂ ಅನುಪಮ ಮಾನವೀಯ ಸೇವೆಯೊಂದಿಗೆ ಮಹತ್ವದ ಸ್ಥಾನ ನೀಡಿದವರು ಅವರಾಗಿದ್ದರು ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹಿರಿಯ ನ್ಯಾಯವಾದಿ ವಿ.ಡಿ. ಕಾಮರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಕ್ಷೇತ್ರದಲ್ಲಿ ಎನ್. ಕೆ. ಜೋಗಳೇಕರ ಅವರಂತ ಮೇಧಾವಿ ಮತ್ತು ಆದರ್ಶ ಜ್ಯೋತಿಷಿಗಳ ಸಂಖ್ಯೆ ಇಳಿಮುಖವಾಗಿದೆ. ಬದಲಿಗೆ ಢೋಂಗಿ ಜ್ಯೋತಿಷಿಗಳ ಸಂಖ್ಯೆ ಹೆಚ್ಚಾಗಿದ್ದು, ಜನರ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಂಡು ವ್ಯವಸ್ಥಿತವಾಗಿ ಸುಲಿಯುವ ಜ್ಯೋತಿಷಿಗಳು ಹುಟ್ಟಿಕೊಂಡಿದ್ದಾರೆ. ನೈಜ ಜ್ಯೋತಿಷ್ಯಶಾಸ್ತ್ರದವರು ಇದಕ್ಕೆ ಸೂಕ್ತ ಪರಿಹಾರ ಹುಡುಕಬೇಕಾಗಿದೆ ಎಂದು ಹೇಳಿದರು.
ಮನೋಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದಿ| ಗಿರೀಶ ಕಾರ್ನಾಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದತ್ತಿದಾನಿ ಸುಹಾಸ ಜೋಗಳೇಕರ, ಶಿವಣ್ಣ ಬೆಲ್ಲದ ಇದ್ದರು. ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ