ವೈದ್ಯರ ಹತ್ಯೆಗೆ ಸುಪಾರಿ ನೀಡಿದ್ದು ಪತ್ನಿ, ಅಳಿಯ!
Team Udayavani, Mar 17, 2018, 6:20 AM IST
ಹುಬ್ಬಳ್ಳಿ: ನಗರದ ಖ್ಯಾತ ಎಲುಬು, ಕೀಲು ತಜ್ಞ ಡಾ| ಬಾಬು ಹುಂಡೇಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಶಶಿಕಲಾ, ಅಳಿಯ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವೈದ್ಯರ ಹತ್ಯೆ ತನಿಖೆ ಕೈಗೊಂಡು ಅವರ ಪತ್ನಿ ಶಶಿಕಲಾ ಹಾಗೂ ನವೀನ ಮುಲ್ಕಿಗೌಡರ (ಪತ್ನಿಯ ಕಿರಿಯ ಸಹೋದರ), ಉತ್ತರ ಭಾರತ ಮೂಲದ ರಾಕೇಶ ಯಾದವ, ಧಾರವಾಡದ ನಂದೀಶ ಬೆಟಗೇರಿ ಹಾಗೂ ಹಳೇ ಹುಬ್ಬಳ್ಳಿಯ ಇಸ್ಮಾಯಿಲ್ ಖಾನಾಪುರಿಯನ್ನು ಬಂಧಿಸಲಾಗಿದೆ. ಕೊಲೆಗೆ ಹಣಕಾಸು, ಆಸ್ತಿ ವಿವಾದದ ಜತೆಗೆ ಅನೈತಿಕ ಸಂಬಂಧವೂ ಕಾರಣ ಎಂದರು.
ವಿದ್ಯಾನಗರದ ಸುಶ್ರೂತ ನರ್ಸಿಂಗ್ ಹೋಂನ ನಿರ್ದೇಶಕ ಹಾಗೂ ಶಿವಶಕ್ತಿ ಆಸ್ಪತ್ರೆಯ ಡಾ.ಬಾಬು ಹುಂಡೇಕರ (48) ಅವರು ನಾಪತ್ತೆಯಾದ ಬಗ್ಗೆ ಅವರ ತಂದೆ ಬಸಪ್ಪ ಅವರು ಸೋಮವಾರ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ವೈದ್ಯರ ಕೊಲೆಯಾದ ಬಗ್ಗೆ ಗೊತ್ತಾಗಿತ್ತು. ಬೆಳಗಾವಿಯ ಸೀರಾಲಾಜಿ ವಿಭಾಗದವರನ್ನು ಕರೆಸಿ ಕೊಠಡಿ ತಪಾಸಣೆ ಮಾಡಿದಾಗ ಕೊಲೆಯಾದ ಕುರುಹು ಸಿಕ್ಕಿತು. ನಂತರ ಖಚಿತ ಮಾಹಿತಿ ಮೇರೆಗೆ ನವೀನ ಮುಲ್ಕಿ ಗೌಡರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿ
ಸಿದಾಗ ಕೊಲೆ ಮಾಡಿರುವುದು ಪತ್ತೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ