ಆರ್ಟಿಒ ಕಚೇರಿಗೆ ವಾಹನಿಗರ ಲಗ್ಗೆ
Team Udayavani, Sep 14, 2019, 10:14 AM IST
ಹುಬ್ಬಳ್ಳಿ: ವಾಯುಮಾಲಿನ್ಯ ತಪಾಸಣಾ ಕೇಂದ್ರದ ನೋಟ. (ಸಂಗ್ರಹ ಚಿತ್ರ)
ಹುಬ್ಬಳ್ಳಿ: ಕೇಂದ್ರ ಸರಕಾರದ ಮೋಟಾರು ವಾಹನ ನೂತನ ಕಾಯ್ದೆ ಜಾರಿಗೆ ಬಂದಾಗಿನಿಂದ ವಾಹನ ಖರೀದಿ ಪತ್ರ, ಚಾಲನಾ ಪರವಾನಗಿ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ಇನ್ನಿತರೆ ದಾಖಲೆಗಳನ್ನು ಜನರು ಹುಡುಕಾಡುವುದು ಹಾಗೂ ದಾಖಲಾತಿ ಪಡೆಯಲು ಆರ್ಟಿಒ ಕಚೇರಿಗೆ ಅಲೆದಾಡುವುದು ಹೆಚ್ಚಿದೆ.
ಧಾರವಾಡ ಜಿಲ್ಲಾ ಹಾಗೂ ಹು-ಧಾ ಪೂರ್ವ ಆರ್ಟಿಒ ಕಚೇರಿ ವ್ಯಾಪ್ತಿಯಲ್ಲಿ ಅಂದಾಜು 4 ಲಕ್ಷಕ್ಕೂ ಅಧಿಕ ವಾಹನಗಳಿವೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಖ್ಯೆ ಅಧಿಕವಾಗಿದೆ. ವಾಹನಗಳಿಂದ ಮಾಲಿನ್ಯ ತಡೆಗೆ ಜಿಲ್ಲೆಯಲ್ಲಿ 36ಕ್ಕೂ ಅಧಿಕ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿವೆ.
ನೂತನ ವಾಹನ ಕಾಯ್ದೆ ಜಾರಿಗೆ ಬಂದಿದ್ದೇ ತಡ ಪೊಲೀಸರು ವಾಹನಗಳ ಎಲ್ಲ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಹೀಗಾಗಿ ವಾಹನಗಳ ಮಾಲೀಕರು ವಾಹನಕ್ಕೆ ಸಂಬಂಧಿಸಿದ ನೋಂದಣಿ, ಲೈಸನ್ಸ್, ವಿಮೆ ಸೇರಿದಂತೆ ಇನ್ನಿತರೆ ದಾಖಲಾತಿಗಳ ಹುಡುಕಾಟ ನಡೆಸಿದ್ದಾರೆ. ದಾಖಲೆಗಳಿಲ್ಲದಿದ್ದರೆ ಅವನ್ನು ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ)ಗೆ ಹೋಗುವವರ ಸಂಖ್ಯೆ ಅಧಿಕವಾಗಿದೆ.
ಹು-ಧಾ ಪೂರ್ವ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ನೋಂದಣಿ ಸಂಖ್ಯೆ ಏರುತ್ತಲೇ ಸಾಗಿದೆ. ಲಾರಿ/ಗೂಡ್ಸ್ ಕ್ಯಾರಿಯರ್ 24,667, ಓಮ್ನಿ ಬಸ್ 2074, ರಾಜ್ಯ ಸಾರಿಗೆ ಬಸ್ 4086, ಶಿಕ್ಷಣ ಸಂಸ್ಥೆ ಬಸ್ 158, ಎಕ್ಸಾವಾಟರ್ (ವಾಣಿಜ್ಯ) 251, ಮ್ಯಾಕ್ಸಿ ಕ್ಯಾಬ್ 1409, ಮೋಟರ್ ಕ್ಯಾಬ್ 2689, ಖಾಸಗಿ ಸೇವಾ ವಾಹನ 148, ಮೂರು ಚಕ್ರದ ಗೂಡ್ಸ್ ವಾಹನ 2923, ಆಟೋ ರಿಕ್ಷಾ ಸೇರಿ ಮೂರು ಚಕ್ರದ ಪ್ರಯಾಣಿಕರ ವಾಹನ 16,525, ಟ್ರ್ಯಾಕ್ಟರ್ 264, ಟ್ರೇಲರ್ 472, ಆಂಬ್ಯುಲೆನ್ಸ್ 116, ಆರ್ಟಿಕ್ಯುಲೇಟೆಡ್ ವೆಹಿಕಲ್ 96, ಕ್ಯಾಂಪರ್ ವ್ಯಾನ್/ಟ್ರೇಲರ್ 99, ಕ್ಯಾಶ್ ವ್ಯಾನ್ 17, ಇ-ರಿಕ್ಷಾ 4 ವಾಹನಗಳು ಆ. 31ರ ವರೆಗೆ ನೋಂದಣಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ