ಮಲಪ್ರಭಾ ನಾಲೆ ಕೆಳಭಾಗದಲ್ಲಿ ಜಲಭಾಗ್ಯಕ್ಕೆ ಹೆಜ್ಜೆ

ನೀರಿನ ಪೋಲು ತಡೆ, ಬೆಳೆ ಪದ್ಧತಿ ಶಿಸ್ತಿಗೆ ಆದ್ಯತೆ

Team Udayavani, Jul 4, 2020, 3:27 PM IST

ಮಲಪ್ರಭಾ ನಾಲೆ ಕೆಳಭಾಗದಲ್ಲಿ ಜಲಭಾಗ್ಯಕ್ಕೆ ಹೆಜ್ಜೆ

ಹುಬ್ಬಳ್ಳಿ: ಮಲಪ್ರಭಾ ಬಲದಂಡೆ ನಾಲೆ ನಮ್ಮ ಹೊಲಗಳಿಗೆ ಸಂಪರ್ಕ ಹೊಂದಿದೆ ಎಂಬುದು ಬಿಟ್ಟರೆ, ಬಹುತೇಕ ಕೆಳ ಭಾಗದ ರೈತರಿಗೆ ಇದರಿಂದ ನೀರು ಸಿಕ್ಕಿದ್ದೇ ಕಡಿಮೆ. ಒಣ ಕಾಲುವೆ ನೋಡುತ್ತಲೇ ಕೆಳಭಾಗದ ರೈತರು ಪರಿತಪಿಸಬೇಕಾಗಿದೆ. ಈ ನೋವು ಇಲ್ಲವಾಗಿಸಲು ಮೇಲ್ಭಾಗದಲ್ಲಿ ನೀರು ನಿರ್ವಹಣೆ, ಬೆಳೆ ಪದ್ಧತಿ ಇನ್ನಿತರ ವಿಚಾರದ ವಿಶೇಷ ಕಾರ್ಯಯೋಜನೆಯೊಂದು ರೂಪುಗೊಂಡಿದೆ.

ಬಲದಂಡೆ ನಾಲೆಯ ಮೇಲ್ಭಾಗದಲ್ಲಿ ನೀರಿನ ಸಮರ್ಪಕ ನಿರ್ವಹಣೆ ಕೊರತೆ, ಕೆಲವೊಂದು ದುರಸ್ತಿ ಕಾರ್ಯಗಳು ಇಲ್ಲದಿರುವುದು ನೀರು ಪೋಲಾಗುವ ಮೂಲಕ ಕೆಳ ಭಾಗದ ರೈತರಿಗೆ ಕಾಲುವೆ ನೀರು ಮರೀಚಿಕೆಯಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ನಿಗಮ, ವಾಲ್ಮಿ, ಕಾಡ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳು ಒಟ್ಟಾಗಿ ಮಹತ್ವದ ಹೆಜ್ಜೆ ಇರಿಸಿವೆ. ಮಲಪ್ರಭಾ ಬಲದಂಡೆ ನಾಲೆ ಸುಮಾರು 138 ಕಿಮೀ ಉದ್ದ ಇದ್ದು, 58 ಕ್ಯೂಬಿಕ್‌ಮೀಟರ್‌ ನೀರು ಪೂರೈಕೆ ಸಾಮರ್ಥ್ಯ ಹೊಂದಿದೆ. ಈ ನಾಲೆಯಡಿ ಅಂದಾಜು 1,39,921 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಗುರಿ ಹೊಂದಲಾಗಿದೆ.

ಮಲಪ್ರಭಾ ನದಿ ನೀರು ಬಳಸಿಕೊಂಡು ರೇಣುಕಾ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದರಡಿ ಸುಮಾರು 25,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿತ್ತು. ವಾಸ್ತವಿಕವಾಗಿ ಸುಮಾರು 15,000 ಎಕರೆಗೂ ಸಮರ್ಪಕ ನೀರು ದೊರೆಯದಾಗುತ್ತಿದೆ. ಇನ್ನು ಕೆಳಭಾಗದ ರೈತರ ಗೋಳು ಹೇಳತೀರದಾಗಿದೆ. ಇದೆಲ್ಲವುದನ್ನು ಸರಿಪಡಿಸುವ, ಮಲಪ್ರಭಾ ಬಲದಂಡ ನಾಲೆಯ ಕೊನೆ ಭಾಗಕ್ಕೂ ನೀರು ಮುಟ್ಟಿಸುವ ಮೂಲಕ ಅಲ್ಲಿನ ರೈತರ ಮೊಗದಲ್ಲೂ ನಗು ಮೂಡಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

0-40 ಕಿಮೀ ವ್ಯಾಪ್ತಿಯಲ್ಲಿ ಯೋಜನೆ: ಮಲಪ್ರಭಾ ಬಲದಂಡೆ ನಾಲೆಯಲ್ಲಿ ಕೆಳಭಾಗದ ರೈತರಿಗೆ ಕನಿಷ್ಠ ಪ್ರಮಾಣದ ನೀರು ತಲುಪಿಸುವ ಉದ್ದೇಶದೊಂದಿಗೆ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದ್ದು, ವಾಲ್ಮಿ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈಗಾಗಲೇ ರೈತರು, ನೀರು ಬಳಕೆದಾರರ ಸಹಕಾರ ಸಂಘಗಳೊಂದಿಗೆ ಸಮಾಲೋಚನೆ, ಹಳ್ಳಿಗಳಿಗೆ ಭೇಟಿ ಇನ್ನಿತರ ಕಾರ್ಯಗಳು ಆರಂಭಗೊಂಡಿವೆ. ಮಲಪ್ರಭಾ ಬಲದಂಡೆ ನಾಲೆಯ 0 ರಿಂದ 40 ಕಿಮೀ ವರೆಗೆ ನೀರಿನ ಹೆಚ್ಚಿನ ಬಳಕೆ, ನೀರು ಪೋಲಾಗುವುದು, ಬೆಳೆ ಪದ್ಧತಿಯಲ್ಲಿ ಶಿಸ್ತು ಇಲ್ಲದಿರುವುದು ಕಂಡುಬಂದಿದ್ದು, ಆಗಿರುವ ತಪ್ಪು-  ಲೋಪಗಳನ್ನು ಸರಿಪಡಿಸುವ ಕಾರ್ಯವೇ ವಿಶೇಷ ಕಾರ್ಯಯೋಜನೆಯ ಮುಖ್ಯ ಉದ್ದೇಶವಾಗಿದೆ. 0ದಿಂದ 40 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ಮುರಿದಿರುವ ಇಲ್ಲವೆ ಹಾಳಾಗಿರುವ ಕಾಲುವೆ ಗೇಟುಗಳ ದುರಸ್ತಿ, ಕಾಲುವೆಗಳ ರಿಪೇರಿ, ನೀರು ಬಳಕೆದಾರರ ಸಹಕಾರ ಸಂಘಗಳ ಸಕ್ರಿಯತೆ, ಬೆಳೆ ಪದ್ಧತಿ ಬದಲು, ಸಾಧ್ಯವಿದ್ದ ಕಡೆ ಹನಿನೀರಾವರಿ ಬಳಕೆ, ನೀರಿನ ಸಮರ್ಪಕ ಬಳಕೆ ಹಾಗೂ ನಿರ್ವಹಣೆಯಂತಹ ಕ್ರಮಗಳನ್ನು ನೀರು ಬಳಕೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಮಲಪ್ರಭಾ ಬಲದಂಡೆ ಮೇಲ್ಭಾಗದಲ್ಲಿ ನೀರಿನ ಸಮರ್ಪಕ ಬಳಕೆಗಿಂತ ಪೋಲಾಗುವುದೇ ಅಧಿಕವಾಗಿ ರುವುದು ಕೆಳ ಭಾಗಕ್ಕೆ ಸಮರ್ಪಕ ನೀರು ತಲುಪದಿರಲು ಕಾರಣ ಎಂದು ಹೇಳಲಾಗುತ್ತಿದೆ.

ಅನೇಕ ಕಡೆಗಳಲ್ಲಿ ಕಾಲುವೆಗಳ ದುರಸ್ತಿ ಇಲ್ಲದಿರುವುದು, ಗೇಟ್‌ಗಳು ಕಿತ್ತು ಹೋಗಿರುವುದು ಇಲ್ಲವೆ ನೀರು ಬಳಕೆಗೆಂದು ಕಿತ್ತು ಹಾಕಿರುವುದರಿಂದ ನೀರು ಕಾಲುವೆ ಮೂಲಕ ಕೆಳ ಭಾಗಕ್ಕೆ ಹರಿಯುವ ಬದಲು ಎಲ್ಲೆಂದರಲ್ಲಿ ಹರಿಯುತ್ತಿದೆ. ಇನ್ನೊಂದು ಕಡೆ ಹೊಲಗಳಿಗೆ ನೀರನ್ನು ಅಗತ್ಯಕ್ಕಿಂತ ಹೆಚ್ಚಿನ ಬಳಕೆ ಮಾಡಿದ್ದರಿಂದ ಸುಮಾರು 1,000 ಎಕರೆಯಷ್ಟು ಭೂಮಿ ಸವಳು-ಜವಳು ಆಗಿದ್ದು, ಅದನ್ನು ಸರಿಪಡಿಸಬೇಕಾಗಿದೆ. ನೀರಿನ ಸಮರ್ಪಕ ಬಳಕೆ ಇಲ್ಲವಾದರೆ ಏನೆಲ್ಲಾ ಸಮಸ್ಯೆ ಆಗುತ್ತವೆ, ನೀರು ಪೋಲಾಗದೆ ಉಳಿದರೆ ಕೆಳಗಿನ ಭಾಗದ ಅನೇಕ ರೈತರಿಗೆ ನೀರು ನೀಡಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ವಿಶೇಷ ಕಾರ್ಯಯೋಜನೆಯಲ್ಲಿ ಕೈಗೊಳ್ಳಲಾಗುತ್ತಿದೆ.

ರೈತರಲ್ಲಿ ನೆಮ್ಮದಿ ಮೂಡಿಸುವ ಯತ್ನ : ರೇಣುಕಾ ಏತನೀರಾವರಿ ಯೋಜನೆಯಿಂದ ಹೋಗುವ ನೀರು ಮುಂದೆ ಗದಗ ಜಿಲ್ಲೆಗೆ ರೋಣ ತಾಲೂಕಿಗೆ ತಲುಪಬೇಕು. ಅದರ ಬದಲು ಐದು ಗೇಟ್‌ಗಳು ಮುರಿದಿರುವುದರಿಂದ ನಾಲೆ ಬದಲು ವಾಪಸ್‌ ಬಂದು ಮತ್ತೆ ಮಲಪ್ರಭಾ ಜಲಾಶಯ ಸೇರುವಂತಹ ಸ್ಥಿತಿ ಇದೆಯಂತೆ. ಇದನ್ನು ಮೇಲ್ಭಾಗದ ರೈತರಿಗೆ ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ಮನವರಿಕೆ ಮಾಡುವ, ನೀರು ಸಮರ್ಪಕ ಬಳಕೆಗಚ್ಚುವ ಕಾರ್ಯವನ್ನು ಮಾಡುವ ಮೂಲಕ ಕೆಳ ಭಾಗದ ರೈತರಿಗೆ ನೀರು ತಲುಪಿಸುವ ಮಹತ್ವದ ಕಾರ್ಯ ಯಶಸ್ವಿಯಾದಲ್ಲಿ, ನೀರಾವರಿ ಸೌಲಭ್ಯ ಇದ್ದರೂ, ನೀರು ಕಾಣದೆ ಮುಗಿಲು ನೋಡುವ ರೈತರ ಮನದಲ್ಲಿ ಒಂದಿಷ್ಟು ನೆಮ್ಮದಿ ಮೂಡುವಂತಾಗಲಿದೆ.

ಮಲಪ್ರಭಾ ಬಲದಂಡೆ ನಾಲೆಯಲ್ಲಿ ಕೆಳ ಭಾಗದ ರೈತರಿಗೆ ನೀರು ತಲುಪದಿರುವುದು ಸವಾಲಿನ ಕೆಲಸವಾಗಿದೆ. ಸಂಘಟಿತ ಯತ್ನಕ್ಕೆ ಮುಂದಾದರೆ ಖಂಡಿತವಾಗಿಯೂ ಯಶಸ್ಸು ದೊರೆಯಲಿದೆ ಎಂಬ ವಿಶ್ವಾಸವಿದೆ. ರೈತರ  ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರವೂ ಅತ್ಯಂತ ಮುಖ್ಯವಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಒತ್ತು ನೀಡಲಾಗಿದೆ. ಡಾ| ರಾಜೇಂದ್ರ ಪೋದ್ದಾರ, ನಿರ್ದೇಶಕರು, ವಾಲ್ಮಿ

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad-joshi

BJP; ಈಶ್ವರಪ್ಪ ಅವರು ಬದ್ಧತೆ ಇರುವ ವ್ಯಕ್ತಿ: ಪ್ರಹ್ಲಾದ ಜೋಶಿ

ರೈತರ ಸಂಕಷ್ಟಕ್ಕೆ ನೆರವಾಗದ ರಾಜಕೀಯ ಪಕ್ಷಗಳು ಮತ ಕೇಳಲು ಬಂದರೆ ಛೀಮಾರಿ ಹಾಕಿ: ಕುರುಬೂರು

ರೈತರ ಸಂಕಷ್ಟಕ್ಕೆ ನೆರವಾಗದ ರಾಜಕೀಯ ಪಕ್ಷಗಳು ಮತ ಕೇಳಲು ಬಂದರೆ ಛೀಮಾರಿ ಹಾಕಿ: ಕುರುಬೂರು

ಧಾರವಾಡ: ದೇಶದ ರಾಜಕೀಯದಲ್ಲಿ ಮಹಿಳೆಗೆ ಮಹತ್ವದ ಸ್ಥಾನ

ಧಾರವಾಡ: ದೇಶದ ರಾಜಕೀಯದಲ್ಲಿ ಮಹಿಳೆಗೆ ಮಹತ್ವದ ಸ್ಥಾನ

Belagavi ಟಿಕೆಟ್‌ ಗೊಂದಲ: ಜಗದೀಶ್‌ ಶೆಟ್ಟರ್‌ ದಿಲ್ಲಿಗೆ

Belagavi ಟಿಕೆಟ್‌ ಗೊಂದಲ: ಜಗದೀಶ್‌ ಶೆಟ್ಟರ್‌ ದಿಲ್ಲಿಗೆ

Hubli; ಕೆ.ಎಸ್. ಈಶ್ವರಪ್ಪ ಬಂಡಾಯ ಶೀಘ್ರ ಶಮನ: ಪ್ರಲ್ಹಾದ ಜೋಶಿ

Hubli; ಕೆ.ಎಸ್. ಈಶ್ವರಪ್ಪ ಬಂಡಾಯ ಶೀಘ್ರ ಶಮನ: ಪ್ರಲ್ಹಾದ ಜೋಶಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.