ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ: ಬಸವರಾಜ ಹೊರಟ್ಟಿ
Team Udayavani, Mar 2, 2021, 12:41 PM IST
ಧಾರವಾಡ: ಬೆಳಗಾವಿಯಲ್ಲಿ ಮುಂದಿನ ಅಧಿವೇಶನ ನಡೆಸುವಂತೆ ಮುಖ್ಯಮಂತ್ರಿಗಳಿಗೆಮನವಿ ಮಾಡುತ್ತೇನೆ. ಅಲ್ಲದೇ ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸುವಂತೆಯೂ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿಧಾನ ಪರಿಷತ್ ಕಲಾಪದ ಒಳಗಡೆಮೊಬೈಲ್ ತರುವುದು ಹಾಗೂಬಳಸುವುದನ್ನು ನಿಷೇಧಿಸಲಾಗಿದ್ದು,ಮುಂಬರುವ ಅಧಿವೇಶನದಿಂದಲೇ ಇದು ಕಾರ್ಯರೂಪಕ್ಕೆ ಬರಲಿದೆ. ವಿಧಾನ ಪರಿಷತ್ನ ಕಾರ್ಯಕಲಾಪಗಳಿಗೆ ಬರುವ ಸದಸ್ಯರಮೊಬೈಲ್ಗಳನ್ನು ಪಡೆದುಲಾಕರ್ನಲ್ಲಿಟ್ಟು, ಅವರಿಗೆ ಕೀಕೊಡಲಾಗುವುದು. ನಂತರ ಹೊರಹೋಗುವಾಗ ತಮ್ಮ ಮೊಬೈಲ್ತೆಗೆದುಕೊಂಡು ಹೋಗುವ ವ್ಯವಸ್ಥೆಮಾಡಲಾಗಿದೆ ಎಂದರು.
ಸಭಾಪತಿ ಹುದ್ದೆ ಒಂದ ಸಾಂವಿಧಾನಿಕ ಹುದ್ದೆ. ಯಾವುದೇ ಮಂತ್ರಿ ಹಾಗೂಶಾಸಕರನ್ನು ಕರೆದು ವಿಚಾರ ಮಾಡುವ ಅ ಧಿಕಾರ ಇರುತ್ತದೆ. ಈ ಅಧಿಕಾರ ಸದುಪಯೋಗ ಮಾಡಿ ಕೊಂಡು ಸಂವಿಧಾನದ ಚೌಕಟ್ಟಿನಲ್ಲಕೆಲಸ ಮಾಡಲಾಗುವುದು. ಖಾಸಗಿ ಅನುದಾನ ರಹಿತ ಶಾಲೆಗಳಿಗೆ1990ರಿಂದ 2000ರವರೆಗಿನಅನುದಾನ ಬಿಡುಗಡೆ ಮಾಡಲಾಗುವುದು. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಇದರಲ್ಲಿರುವ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಸರ್ಕಾರಯಾವುದೇ ಕಾರಣಕ್ಕೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಬರಬೇಕಾದ ಅನುದಾನ ತಡೆ ಹಿಡಿಯಬಾರದು. ಶಾಲಾ ಆಡಳಿತ ಮಂಡಳಿಯವರು ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡಬಾರದು. ಇಬ್ಬರೂಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ