ಉತ್ತರ ಕರ್ನಾಟಕಕ್ಕಿದೆ ಸುಸ್ಥಿರ ಪ್ರವಾಸೋದ್ಯಮ ಸಾಮರ್ಥ್ಯ

ಇಂದು ವಿಶ್ವ ಪ್ರವಾಸೋದ್ಯಮ ದಿನ- "ಉತ್ಸವ ರಾಕ್‌ಗಾರ್ಡ್‌ನ್‌'ನ ವೇದರಾಣಿ ದಾಸನೂರು ಅಭಿಮತ

Team Udayavani, Sep 27, 2022, 2:19 PM IST

12

ಹುಬ್ಬಳ್ಳಿ: ಆರೋಗ್ಯಕರ, ಆರ್ಥಿಕ ಭದ್ರತೆಯ ಜತೆಗೆ ಸುಸ್ಥಿರ ಪ್ರವಾಸೋದ್ಯಮ ಇಂದಿನ ಅವಶ್ಯಕವಾಗಿದೆ. ಉತ್ತರ ಕರ್ನಾಟಕದಲ್ಲಿ ದೇವ(ನಿಸರ್ಗ)ನಿರ್ಮಿತ ಹಾಗೂ ಮಾನವ ನಿರ್ಮಿತ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಅದರ ಸಮರ್ಪಕ ಬಳಕೆಯ ಇಚ್ಛಾಶಕ್ತಿ ಬೇಕಾಗಿದೆ..

-ಇದು, ಕಲೆ, ಶಿಲ್ಪಕಲೆ ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸತನದ ಸ್ಪರ್ಶ ಕೊಟ್ಟಿರುವ ಹಾವೇರಿ ಜಿಲ್ಲೆ ಶಿಗ್ಗಾವಿಯ ಗೋಟಗೋಡಿ “ಉತ್ಸವ ರಾಕ್‌ ಗಾರ್ಡನ್‌’ ಮುಖ್ಯಸ್ಥೆ ವೇದಾರಾಣಿ ಪ್ರಕಾಶ ದಾಸನೂರು ಅವರ ಅನಿಸಿಕೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದಿಷ್ಟು:

ಒಟ್ಟಾರೆ ಪ್ರವಾಸೋದ್ಯಮವನ್ನು ಪರಿಗಣಿಸಿದರೆ ಶೇಕಡಾ 50ಕ್ಕಿಂತ ಹೆಚ್ಚಿನದ್ದು ನಿಸರ್ಗ ನಿರ್ಮಿತವಾಗಿದ್ದು, ಕೌತುಕತೆಯಿಂದ ಕೂಡಿದೆ. ಕಾಡು, ಸಮುದ್ರ, ನದಿ, ಜಲಪಾತ, ಸಸ್ಯ ಸಂಪತ್ತು, ಪ್ರಾಣಿಗಳು, ಮರುಭೂಮಿ, ಶೀತವಲಯ ಹೀಗೆ ನಿಸರ್ಗ ಸಂಪತ್ತು ಪ್ರವಾಸೋದ್ಯಮ ಆಕರ್ಷಣೆ, ಬೆಳವಣಿಗೆಗೆ ತನ್ನದೇ ಕೊಡುಗೆ ನೀಡಿದೆ. ಜತೆಗೆ ಮಾನವ ನಿರ್ಮಿತ ಪ್ರವಾಸೋದ್ಯಮ ತಾಣಗಳು ಸಹ ತಮ್ಮದೇಯಾದ ವೈಶಿಷ್ಟ್ಯವನ್ನು ಹೊಂದಿವೆ.

ಗುಜರಾತ್‌, ರಾಜಸ್ಥಾನ, ಗೋವಾ ಇನ್ನಿತರ ರಾಜ್ಯಗಳು ನಿಸರ್ಗದತ್ತ ಸಂಪತ್ತುಗಳನ್ನೇ ಬಳಸಿಕೊಂಡು ಪ್ರವಾಸೋದ್ಯಮದಲ್ಲಿ ಪ್ರಗತಿ ಕಂಡುಕೊಂಡಿವೆ. ನೀರು, ಮರುಭೂಮಿ, ಕಾಡು ಪ್ರದೇಶವನ್ನೇ ಪ್ರವಾಸಿ ತಾಣಗಳನ್ನಾಗಿಸಿಕೊಂಡು, ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನಿಸರ್ಗ ನಿರ್ಮಿತ, ಮಾನವ ನಿರ್ಮಿತ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಅನೇಕ ಐತಿಹಾಸಿಕ ತಾಣಗಳಿವೆ. ಆದರೆ, ಮೂಲ ಸೌಕರ್ಯ ಸಮಸ್ಯೆ, ನಿಸರ್ಗ ಸಂಪತ್ತು ಪ್ರವಾಸೋದ್ಯಮವಾಗಿ ಪರಿವರ್ತನೆಗೆ ಇಚ್ಛಾಶಕ್ತಿ ಕೊರತೆ, ತಾಣಗಳ ಬಗ್ಗೆ ಸಮರ್ಪಕ ಪ್ರಚಾರ ಇಲ್ಲದಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿಯಾಗಿವೆ.

ಉತ್ತರ ಕರ್ನಾಟಕದಲ್ಲಿ ಮಾನವ ನಿರ್ಮಿತ ಪ್ರವಾಸೋದ್ಯವನ್ನು ನೋಡುವುದಾದರೆ ಪ್ರಮುಖವಾಗಿ ವಾಸ್ತುಶಿಲ್ಪ, ಶಿಲ್ಪಕಲೆ ಕೇಂದ್ರಿತ ಪ್ರವಾಸೋದ್ಯಮ ತಾಣಗಳು ಕಾಣಸಿಗುತ್ತವೆ. ಹಂಪಿ, ವಿಜಯಪುರ, ಬಾದಾಮಿ, ಐಹೊಳೆ, ಪಟ್ಟಣಕಲ್ಲು ಇನ್ನಿತರ ತಾಣಗಳಿವೆ. ನಮ್ಮಲ್ಲಿನ ನೀರು, ನಿಸರ್ಗ ನಿರ್ಮಿತ ತಾಣಗಳು ಪ್ರವಾಸೋದ್ಯಮ ದೃಷ್ಟಿಯಿಂದ ಬೆಳೆಯಬೇಕಾಗಿದೆ. ಇದಲ್ಲದೆ ಅಧ್ಯಾತ್ಮಿಕ ಪ್ರವಾಸೋದ್ಯಮವೂ ಇಲ್ಲಿ ತನ್ನದೇ ಮಹತ್ವ ಪಡೆದುಕೊಂಡಿದೆ. ದೇವಸ್ಥಾನ, ಜಾತ್ರೆ, ದೈವಿಕ ತಾಣಗಳು ಸ್ಥಳ ಮಹಿಮೆಯೊಂದಿಗೆ ಪ್ರವಾಸೋದ್ಯಮ ರೂಪ ಪಡೆದುಕೊಂಡಿವೆ.

ಉದ್ಯೋಗ ಸೃಷ್ಟಿ ಸಾಧ್ಯ: ಪ್ರವಾಸೋದ್ಯಮ ಬೆಳೆದರೆ ಅದರ ಜತೆ ಜತೆಗೆ ಹತ್ತಾರು ವ್ಯಾಪಾರ-ವಹಿವಾಟು ಕ್ಷೇತ್ರವೂ ಬೆಳೆಯುತ್ತದೆ. ಹೊಟೇಲ್‌, ವಿವಿಧ ವಸ್ತುಗಳ ಖರೀದಿಯೊಂದಿಗೆ ಆರ್ಥಿಕತೆಗೆ ಬಲತುಂಬುತ್ತದೆ. ಅಷ್ಟೇ ಅಲ್ಲ ಇತರೆ ಉದ್ಯಮಗಳಿಗಿಂತಲೂ ಹೆಚ್ಚಿನ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದೆ. ಇದನ್ನು ಮನಗಾಣುವ ಮೂಲಕ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಸೋದ್ಯಮದಲ್ಲಿ ದೇಸಿಯ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ, ಆಹಾರ, ಆಟ, ಕಲೆ, ಸಂಪ್ರದಾಯಗಳನ್ನು ಮೈದಳೆಯುವಂತೆ ಮಾಡಬೇಕಿದೆ. ನಮ್ಮಲ್ಲಿನ ನೀರು, ನಿಸರ್ಗ ಸಂಪತ್ತು, ಸಾಕು ಪ್ರಾಣಿಗಳು, ನಮ್ಮ ಆಟಗಳು, ಜಾನಪದ ಕಲೆ, ಲಲಿತ ಕಲೆ ಇವುಗಳನ್ನು ಬಳಸಿಕೊಂಡರೆ ಅದ್ಭುತ ರೀತಿಯ ಪ್ರವಾಸೋದ್ಯಮ ರೂಪಿಸಬಹುದಾಗಿದೆ. ನಿಸರ್ಗ ಸಂಪತ್ತು ಹಾಳು ಹಾಗೂ ಹಾನಿ ಮಾಡದ ರೀತಿಯಲ್ಲಿ ಪ್ರವಾಸೋದ್ಯಮ ಬಳಕೆಗೆ ಸಾಕಷ್ಟು ಅವಕಾಶಗಳಿವೆ.

ವಿಶೇಷವಾಗಿ ಮಾನವ ನಿರ್ಮಿತ ಮ್ಯೂಸಿಯಂಗಳ ವಿಷಯಕ್ಕೆ ಬಂದರೆ ವಿದೇಶಿಯರಿಂದ ಕಲಿಯಬೇಕಾಗಿದ್ದು ಸಾಕಷ್ಟಿದೆ. ಅವರು ಸಣ್ಣ ಸಣ್ಣ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಸಂರಕ್ಷಿಸುತ್ತಾರೆ. ನಮ್ಮಲ್ಲಿ ಸಾಕಷ್ಟು ವಸ್ತುಗಳು ನಮ್ಮ ಸುತ್ತಮುತ್ತಲು ಇದ್ದರೂ ಅವುಗಳನ್ನು ಸಂರಕ್ಷಿ ಸುವ, ಮ್ಯೂಸಿಯಂ ವಸ್ತುಗಳನ್ನಾಗಿ ಮಾಡುವ ಮನೋಭಾವದ ಕೊರತೆ ಇದೆ. ಹೈದರಾಬಾದ್‌ನ ಸಾಲಾರ್‌ ಜಂಗ್‌ ಮ್ಯೂಸಿಯಂನಂತಹ ಹಲವು ಮ್ಯೂಸಿಯಂಗಳನ್ನು ರೂಪಿಸುವುದು ಅಸಾಧ್ಯ ವೆಂದೇನಲ್ಲ. ದೃಷ್ಟಿಕೋನ, ಮಾಡುವ ಮನಸ್ಸು ಬೇಕಷ್ಟೇ.

ಕುಟುಂಬ ಗಾರ್ಡನ್‌: ಪ್ರೊ| ಟಿ.ಬಿ.ಸೊಲಬಕ್ಕನವರ ಅವರ ಕಲಾತಪಸ್ಸಿನ ಪ್ರತೀಕವಾಗಿರುವ “ಉತ್ಸವ ರಾಕ್‌ ಗಾರ್ಡನ್‌’ನಲ್ಲಿ ಸಾಕಷ್ಟು ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಟುಂಬ ಮಹತ್ವ-ಮೌಲ್ಯಗಳ ಮನನ ನಿಟ್ಟಿನಲ್ಲಿ ವಿವಿಧ ಧರ್ಮ-ದೇಶಗಳ ಕುಟುಂಬ ವ್ಯವಸ್ಥೆಯ ಚಿತ್ರಣವನ್ನು ನೀಡಲು ಯೋಜಿಸಲಾಗಿದೆ. ಸುಮಾರು ಹತ್ತು ಎಕರೆ ಜಾಗದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜೈನ್‌, ಬೌದ್ಧ, ವಿವಿಧ ವೃತ್ತಿಯ, ಗ್ರಾಮೀಣ ಹಾಗೂ ಪ್ರಾದೇಶಿಕ ಸೊಗಡಿನ ಕುಟುಂಬ ವ್ಯವಸ್ಥೆಯನ್ನು ಶಿಲ್ಪಕಲೆಗಳ ಮೂಲಕ ಚಿತ್ರಿಸಲಾಗುತ್ತಿದೆ. ಮುಖ್ಯವಾಗಿ ನಮ್ಮ ಋಷಿ-ಮುನಿಗಳು, ಸಂತರ ನಿಸರ್ಗ ಪರಿಕಲ್ಪನೆ ಮೂಡಿಸಲಾಗುತ್ತದೆ.

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.