ಮಹಾಜ್ವಾಲೆಗೆ ಉತ್ತರ ಕರ್ನಾಟಕ ಸ್ತಬ್ಧ
Team Udayavani, Dec 28, 2017, 9:12 AM IST
ಹುಬ್ಬಳ್ಳಿ: ಮಹದಾಯಿಗಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. “ಜಲ ರಾಜಕೀಯ’ಕ್ಕೆ ಬೇಸತ್ತು ಡಿ.27ರಂದು ನೀಡಲಾಗಿದ್ದ “ಉತ್ತರ ಕರ್ನಾಟಕ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದರೆ, ಉತ್ತರ ಕನ್ನಡ, ವಿಜಯಪುರ, ಹಾವೇರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ ಭಾಗದಲ್ಲಿ ಪ್ರತಿಭಟನೆಯ ಮೂಲಕ ಬೆಂಬಲ ದೊರೆತಿದೆ.
ಹುಬ್ಬಳ್ಳಿಯಲ್ಲಿ ಬಂದ್ ವೇಳೆ ಸಂಸದ ಪ್ರಹ್ಲಾದ ಜೋಶಿ ಕಚೇರಿ, ನಿವಾಸಕ್ಕೆ ಮುತ್ತಿಗೆ ಹಾಕಲಾಯಿತಲ್ಲದೆ, ಕಚೇರಿಯ ಕಿಟಕಿ ಗಾಜು ಒಡೆಯಲಾಗಿದೆ. ಸರ್ಕ್ನೂಟ್ ಹೌಸ್ ರಸ್ತೆಯಲ್ಲಿನ ಕಾμ ಡೇ ತೆರೆದುಕೊಂಡಿದ್ದನ್ನು ಕಂಡು ಒಳ ನುಗ್ಗಿದ ಪ್ರತಿಭಟನಾಕಾರರು ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ. ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕರವೇಯ ನಾಲ್ವರು ಕಾರ್ಯಕರ್ತರು ಬ್ಲೇಡ್ಗಳಿಂದ ತಮ್ಮ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯ ನೆಲದಲ್ಲಿ ಕಿಚ್ಚು: ಬಂಡಾಯದ ನೆಲ ನರ ಗುಂದ, ನವಲಗುಂದದಲ್ಲಿ ಪ್ರತಿಭಟನೆ ಜೋರಾಗಿತ್ತು. ನವಲಗುಂದದ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 888ನೇ ದಿನಕ್ಕೆ ಕಾಲಿಟ್ಟಿತು. ಪ್ರತಿಭಟನೆ ವೇಳೆ ಟೈರ್ಗೆ ಸುರಿದ ಪೆಟ್ರೋಲ್ ಸಿಪಿಐ ದಿವಾಕರ ಕಾಲಿಗೆ ಸಿಡಿದು ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು. ಪಟ್ಟಣದಲ್ಲಿ ರೈತರ ಮೇಲೆ ಪಿಎಸ್ಐ ಲಾಠಿ ಬೀಸಿದ್ದಾರೆಂಬ ವದಂತಿ ಹರಡಿದ್ದರಿಂದ ಸ್ವಲ್ಪ ಸಮಯ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಬಾಗಲಕೋಟೆಯಲ್ಲಿ ವೈನ್ಶಾಪ್ವೊಂದಕ್ಕೆ ಕಲ್ಲು ಎಸೆಯಲಾಯಿತು. ಬೆಳಗಾವಿ ಜಿಲ್ಲೆಯ ಹಲವೆಡೆಯೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಎನ್ಫಿಲ್ಡ್ ಏರಿದ ಕೋನರೆಡ್ಡಿ: ಬೆಳಗ್ಗೆಯೇ ರಾಯಲ್ ಎನ್ಫಿಲ್ಡ್ ಬೈಕ್ನಲ್ಲಿ ಧಾರವಾಡದ ನಗರದ ತುಂಬೆಲ್ಲಾ ಸಂಚರಿಸಿದ ನವಲಗುಂದದ ಶಾಸಕ ಎನ್. ಎಚ್.ಕೋನರೆಡ್ಡಿ ಹೋರಾಟಕ್ಕೆ ಸಾಥ್ ನೀಡಿದರು.
ರಸ್ತೆ ಮಧ್ಯೆಯೇ ಹೋಮ
ಮಹದಾಯಿ ವಿವಾದ ಶೀಘ್ರ ಬಗೆಹರಿಯಲಿ ಎಂದು ಕರ್ನಾಟಕ ಯುವ ಸೇನೆ ಕಾರ್ಯಕರ್ತರು ರಸ್ತೆ ನಡುವೆಯೇ ಸ್ನಾನ ಮಾಡಿ ಹೋಮ ಮಾಡಿದರು. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಭಜನೆ ಮಾಡಿದರು. ಮಹಿಳಾ ಹೋರಾಟಗಾರರು ಕುಂಟೆ ಬಿಲ್ಲೆ
ಆಡಿದರು. ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯಕರ್ತರು ತಲೆ ಮೇಲೆ ನೀರು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರ ಸಂಘದವರು ರಾಜಕಾರಣಿಗಳನ್ನು ಹರಾಜು ಹಾಕಿದರು.
ಹಾಲು ಹಂಚಿದ ಬಸವರಾಜ
ಧಾರವಾಡದ ನಗರಕ್ಕೆ ದಿನನಿತ್ಯ ಬೈಕ್ ಮೇಲೆ ಬಂದು ಎರಡು ಕ್ಯಾನ್ ಹಾಲು ಪೂರೈಸುವ ಸಮೀಪದ ಕ್ಯಾರಕೊಪ್ಪ ಗ್ರಾಮದ ಬಸವರಾಜ ಬುಧವಾರ ಮಹದಾಯಿ ಹೋರಾಟಕ್ಕೆ ಬಂದಿದ್ದ ಹೋರಾಟಗಾರರಿಗೆ ಕುಡಿಯಲು ಹಾಲು ನೀಡಿ ಹೋರಾಟಕ್ಕೆ ಸಾಥ್
ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ