ಸೌಲಭ್ಯ ಪಾವತಿ ಬಾಕಿ; ಮತ್ತೆ ಬಸ್‌ ಏರಲು ನಿವೃತ್ತರ ಹಿಂದೇಟು


Team Udayavani, Apr 13, 2021, 11:23 AM IST

ಸೌಲಭ್ಯ ಪಾವತಿ ಬಾಕಿ; ಮತ್ತೆ ಬಸ್‌ ಏರಲು ನಿವೃತ್ತರ ಹಿಂದೇಟು

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಮೊರೆಹೋಗಿದ್ದು, ಓರ್ವ ನಿವೃತ್ತನೌಕರ ಕೂಡ ಕರ್ತವ್ಯಕ್ಕೆ ಬರಲುಮುಂದೆ ಬಂದಿಲ್ಲ. ನಿವೃತ್ತಿನಂತರದ ಆರೋಗ್ಯ ಸಮಸ್ಯೆಒಂದೆಡೆಯಾದರೆ, ನಿವೃತ್ತರಿಗೆ ಆರ್ಥಿಕ ಸೌಲಭ್ಯ ಪಾವತಿ ಮಾಡದಿರುವುದು ಹಿಂದೇಟಿಗೆ ಕಾರಣವಾಗಿದೆ.

62 ವರ್ಷ ಮೀರದ ನಿವೃತ್ತ ಚಾಲಕ,ನಿರ್ವಾಹಕರು ಕರ್ತವ್ಯಕ್ಕೆ ಆಹ್ವಾನ ನೀಡಲಾಗಿತ್ತು.ದಿನಕ್ಕೆ ಚಾಲಕರಿಗೆ 800, ನಿರ್ವಾಹಕರಿಗೆ 700ರೂ. ನೀಡುವುದಾಗಿ ಸೂಚಿಸಲಾಗಿತ್ತು. ಆದರೆಮೂರ್‍ನಾಲ್ಕು ದಿನ ಕಳೆದರೂ ಒಬ್ಬನಿವೃತ್ತ ನೌಕರ ಕೂಡ ಸೇವೆಗೆಬರಲು ಒಪ್ಪಿಗೆ ಸೂಚಿಸಿಲ್ಲ. 2019ರ ಅಕ್ಟೋಬರ್‌ನಿಂದ ಈಚೆಗೆ ನಿವೃತ್ತರಾಗಿರುವ ಸಿಬ್ಬಂದಿಗೆ ಸಂಸ್ಥೆಯಿಂದ 92ಕೋಟಿ ರೂ. ಗ್ರಾಚ್ಯುಟಿ, 118ಕೋಟಿ ರೂ. ರಜೆ ನಗದೀಕರಣ ಕೊಡುವುದು ಬಾಕಿಯಿದೆ  ಎನ್ನಲಾಗಿದೆ.

ಇನ್ನೂ ಚಾಲನೆ ಸಂದರ್ಭದಲ್ಲಿ ಏನಾದರೂ ಅಪಘಾತಗಳಾದರೆ ನಿವೃತ್ತಿಯ ನಂತರಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎನ್ನುವ ಅಳುಕು ನಿವೃತ್ತರದ್ದಾಗಿದೆ. ಕಳೆದ ಎರಡುವರ್ಷಗಳ ಈಚೆಗೆ ಸಂಸ್ಥೆಯಲ್ಲಿ ಸುಮಾರು 550 ಚಾಲಕ, ನಿರ್ವಾಹಕರು ನಿವೃತ್ತರಾಗಿದ್ದಾರೆ.

ತುದಿಗಾಲಿನಲ್ಲಿ: ಶಿಸ್ತು ಪ್ರಕರಣಗಳಲ್ಲಿ ಸೇವೆಯಿಂದ ವಜಾಗೊಂಡವರು ಕರ್ತವ್ಯಕ್ಕೆಬರಲು ತುದಿಗಾಲಲ್ಲಿದ್ದಾರೆ. ತಮ್ಮ ಮೇಲಿರುವಪ್ರಕರಣಗಳನ್ನು ರದ್ದುಗೊಳಿಸುವುದಾದರೆಬರುವುದಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಕಾನೂನು ತೊಡಕು ಇರುವುದರಿಂದಅಸಾಧ್ಯವಾಗಿದೆ. ದಿನಗೂಲಿ ಆಧಾರದ ಮೇಲೆಬರುವಂತೆ ಸೂಚನೆ ನೀಡಲಾಗಿದೆ.ತರಬೇತಿ ಸಿಬ್ಬಂದಿ ಆಗಮನ: ನಾಲ್ಕು ದಿನಗಳಹಿಂದೆ ಸುಮಾರು 280 ತರಬೇತಿ ಸಿಬ್ಬಂದಿಗೆಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ನೀಡಲಾಗಿತ್ತು. ಹೀಗಾಗಿ 110 ಸಿಬ್ಬಂದಿ ಕರ್ತವ್ಯಕ್ಕೆಆಗಮಿಸಿದ್ದಾರೆ. ಆದರೆ ಬಂದವರಲ್ಲಿ 20 ಸಿಬ್ಬಂದಿಮಾತ್ರ ಚಾಲನಾ ಸಿಬ್ಬಂದಿಯಾಗಿದ್ದಾರೆ. ಇನ್ನೂ ಕೆಲವರಿಗೆ ನೋಟಿಸ್‌ ನೀಡಲಾಗುತ್ತಿದೆ.

ಕದ ತಟ್ಟುತ್ತಿರುವ ಅಧಿಕಾರಿಗಳು: ತಮ್ಮ ವಿಭಾಗವ್ಯಾಪ್ತಿಯಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಅಧಿಕಾರಿಗಳ ಗುರಿ ನೀಡಲಾಗಿದೆ. ಹೀಗಾಗಿ ಕೆಲಅಧಿಕಾರಿಗಳು ಬೆಳಗಿನ ಜಾವವೇ ನೌಕರರ ಮನೆಬಾಗಿಲು ತಟ್ಟಿ ಕರೆದುಕೊಂಡು ಹೋಗುತ್ತಿದ್ದಾರೆ.ಗ್ರಾಮಗಳಿಗೆ ಹೋಗಿ ಚಾಲನಾ ಸಿಬ್ಬಂದಿಯನ್ನುಕರೆದುಕೊಂಡು ಬಂದು ಬಸ್‌ ಹತ್ತಿಸುತ್ತಿದ್ದಾರೆ. ಇನ್ನೂವಿವಿಧ ಪ್ರಕರಣಗಳಲ್ಲಿ ಅಮಾನತುಗೊಂಡಿರುವಸಿಬ್ಬಂದಿ ಮನವೊಲಿಸಿ ಬಸ್‌ಗಳನ್ನು ಹತ್ತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿವೃತ್ತರಾದರೂ ಅವರ ಕರ್ತವ್ಯ ಪ್ರಶ್ನಿಸುವಂತಿಲ್ಲ. ಸಂಸ್ಥೆ ಮೇಲಿನ ಸ್ವಾಭಿಮಾನ, ಸಾಮರ್ಥ್ಯ ಇದ್ದವರುಕರ್ತವ್ಯಕ್ಕೆ ಹೋಗಬಹುದು. ಇತರೆ ಇಲಾಖೆ ನಿವೃತ್ತರಂತೆಚಾಲಕ-ನಿರ್ವಾಹಕರಲ್ಲ. ಅವರ ಸಾಮರ್ಥ್ಯದ ಮೇಲೆಸಂಸ್ಥೆಗೆ ಲಾಭವೋ, ನಷ್ಟವೋ ಎಂಬುದನ್ನು ಅಲ್ಲಿನ ಆಡಳಿತವರ್ಗ ನಿರ್ಧರಿಸಬೇಕು.ಆರ್‌.ಎಸ್‌. ಸುಖಸಾರೆ, ನಿವೃತ್ತ ಮುಖ್ಯ ಕಾನೂನಾಧಿಕಾರಿ, ಸಾರಿಗೆ ಇಲಾಖೆ

ನಿವೃತ್ತ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ನಷ್ಟದ ಹೆಸರಲ್ಲಿ ಸತಾಯಿಸುತ್ತಿದ್ದಾರೆ. ಯಾವುದೇಕಾರಣಕ್ಕೂ ನಿವೃತ್ತ ನೌಕರರು ಕರ್ತವ್ಯಕ್ಕೆ ಹೋಗಬಾರದು.ಹಾಲಿ ನೌಕರರ ಹೋರಾಟಕ್ಕೆ ನಮ್ಮ ಬೆಂಬಲವಿದೆ. –ಎಚ್‌.ಜಿ. ಕೊಪ್ಪದ, ವಾಕರಸಾಸಂ ನಿವೃತ್ತ ನೌಕರರ ಸಂಘ

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.