ಪಂ.ವೆಂಕಟೇಶಕುಮಾರ್ಗೆ ಪಂ.ರಾಜಗುರು ರಾಷ್ಟೀಯ ಪ್ರಶಸ್ತಿ
Team Udayavani, Oct 4, 2021, 8:36 PM IST
ಧಾರವಾಡ : ಸ್ವರ ಸಮ್ರಾಟ್ ಪಂ.ಬಸವರಾಜ ರಾಜಗುರು ರಾಷ್ಟೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪಂ.ಬಸವರಾಜ ರಾಜಗುರು 101ನೇ ಜನ್ಮದಿನಾಚರಣೆ ಅಂಗವಾಗಿ ನೀಡುವ ರಾಷ್ಟೀಯ ಪ್ರಶಸ್ತಿಯನ್ನು ಹಿರಿಯ ಗಾಯಕ, ಪದ್ಮಶ್ರೀ ಪಂಡಿತ ಎಂ.ವೆಂಕಟೇಶಕುಮಾರ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು.
ನಗರದ ಸೃಜನಾ ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವ್ಹಿ.ಶ್ರೀಶಾನಂದ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು, ಪಂಡಿತ ಎಂ.ವೆಂಕಟೇಶಕುಮಾರ ಅವರಿಗೆ ಪ್ರದಾನ ಮಾಡಿದರು. ಇದಲ್ಲದೇ ತಲಾ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಯುವ ಪ್ರಶಸ್ತಿಯನ್ನು ಕೊಲ್ಕತ್ತಾದ ರಿಂಪಾ ಶಿವಾ ಹಾಗೂ ವಿಜಯಪುರದ ಕೃತಿಕಾ ಜಂಗಿನಮಠ ಅವರಿಗೆ ನೀಡಲಾಯಿತು.
ಇನ್ನು ಸಂಗೀತೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತ ಪಂ.ಎಂ.ವೆಂಕಟೇಶಕುಮಾರ ಅವರಿಂದ ಹಿಂದೂಸ್ತಾನಿ ಶಾಸ್ತೀಯ ಗಾಯನ ಹಾಗೂ ಯುವ ಪ್ರಶಸ್ತಿ ವಿಜೇತ ಕಲಾವಿದರಾದ ರಿಂಪಾ ಶಿವಾ ಮತ್ತು ಕೃತಿಕಾ ಜಂಗಿನಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಚಂದ್ರಕಾಂತ ಬೆಲ್ಲದ, ಡಿಸಿ ನಿತೇಶ ಪಾಟೀಲ, ಟ್ರಸ್ಟನ ಸದಸ್ಯ ಕಾರ್ಯದರ್ಶಿ ಮಾಧವ ಗಿತ್ತೆ ಸೇರಿದಂತೆ ಗಣ್ಯರು ಇದ್ದರು.