ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

2023-24ಕ್ಕೆ ಪ್ರವೇಶಗಳು ಆರಂಭ 1 ರಿಂದ 8ನೇ ತರಗತಿ ಪ್ರಸ್ತಾವಿತ ಸಿಬಿಎಸ್‌ಇ ಶಾಲೆ

Team Udayavani, Feb 9, 2023, 9:30 AM IST

add-thumb-2

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ. ಆದರೆ, ಸುಶಿಕ್ಷಿತ ಮಹಿಳೆಯೊಬ್ಬರು ವಿದ್ಯಾಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ? ವಿದ್ಯಾರ್ಥಿಗಳ ಭಾಗ್ಯಕ್ಕೆ ಎಣೆಯುಂಟೇ?

1927ರಲ್ಲಿ ಶೇಠ್ ಆನಂದಿಲಾಲ್‌ ಪೋದಾರ್‌ ಅವರಿಂದ ಪೋದಾರ್‌ ಎಜ್ಯುಕೇಶನ್‌ ಗ್ರೂಪ್‌ನಿಂದ ಚಾಲನೆ ಪಡೆದ ಪೋದಾರ್‌ ಎಜ್ಯುಕೇಶನ್‌ ನೆಟ್ವರ್ಕ್ ಇಂದು 136ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದೆ ಹಾಗೂ 98ಕ್ಕೂ ಹೆಚ್ಚು ಪೋದಾರ್‌ ಸಹಭಾಗಿತ್ವದ ಶಾಲೆಗಳಿವೆ. ಈವರೆಗೆ 1.90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಆನಂದಿಲಾಲ್‌ ಪೋದಾರ್‌ ಟ್ರಸ್ಟ್‌ನ ಪ್ರಥಮ ಅಧ್ಯಕ್ಷರಾಗಿದ್ದರು ಎನ್ನುವುದು ಉಲ್ಲೇಖನೀಯ. ಪರಂಪರೆ, ನಂಬಿಕೆ, ಶ್ರದ್ಧೆ, ಪ್ರಮಾಣಿಕತೆ, ಭಾವೈಕ್ಯ ಮತ್ತು ಸೇವೆಯಂತಹ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶ್ರಮಿಸುತ್ತಿದೆ. ಶಿಕ್ಷಣ, ಕ್ರೀಡೆ, ನೈತಿಕತೆ, ತಾಂತ್ರಿಕ ಪರಿಣಿತಿ ಸಹಿತ ಎಲ್ಲ ಜ್ಞಾನವನ್ನೂ ಧಾರೆ ಎರೆದು ಭವಿಷ್ಯದ ಜಾಗತಿಕ ನಾಯಕರನ್ನು ರೂಪಿಸುವ ಪ್ರಯತ್ನ ನಿರಂತರವಾಗಿರುತ್ತದೆ.

ಪಾಲಾಕ್ಷ ಪೋದಾರ್‌ ಲರ್ನ್ ಸ್ಕೂಲ್‌ನ ತರಗತಿಗಳಿಗೆ ನಾಲ್ಕು ಗೋಡೆಗಳನ್ನು ಮೀರಿದ ಕಲಿಕೆಯು ಸಾಧ್ಯವಾಗುತ್ತದೆ. ಜಗತ್ತಿನ ಅನಂತ ಸಾಧ್ಯತೆಗಳಿಗೆ ಈ ತರಗತಿಯ ಬಾಗಿಲುಗಳು ತೆರೆದುಕೊಂಡಿವೆ. ಕಲ್ಪನೆಗಳಿಗೆ, ಅಮೂಲ್ಯವಾದ ಚಿಂತನೆಗಳಿಗೆ ಮಿತಿಯೇ ಇಲ್ಲ. ಸೃಜನಶೀಲತೆಯನ್ನು ಬೆಳೆಸುವ ಸಂವಾದಾತ್ಮಕ ತರಗತಿಗಳು, ತಂತ್ರಜ್ಞಾನದ ಬಳಕೆ, ಭೇದ ತೋರದೇ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣುವ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವ ಮನಃಸ್ಥಿತಿ ಈ ಶಾಲೆಯನ್ನು ಎಲ್ಲಕ್ಕಿಂತ ಭಿನ್ನವಾಗಿಸುತ್ತದೆ. ಪಠ್ಯಕ್ಕೆ ಪೂರಕವಾಗಿ ಪರಿಸರದ ಜತೆಗಿನ ಕಲಿಕೆ ಮಕ್ಕಳಿಗೆ ಆಸಕ್ತಿದಾಯಕವಾಗುತ್ತದೆ. ತರಗತಿಗೆ ಸೀಮಿತವಾಗದೆ, ಜಗಲಿ, ಆಟದ ಮೈದಾನ ಮತ್ತು ಮನೆಗಳಲ್ಲೂ ಕಲಿಕೆಯು ನಡೆಯುತ್ತಲೇ ಇರುತ್ತದೆ. ಶಾಲೆಯ ಆಕರ್ಷಕ ಮತ್ತು ಉತ್ಸಾಹದಾಯಕ ಪರಿಸರವೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಪಾಲಾಕ್ಷ ಎಜ್ಯುಕೇಶನ್‌ ಟ್ರಸ್ಟ್‌ ಹಾಗೂ ಸದಸ್ಯರು ಧಾರವಾಡಕ್ಕೆ ವಿಶ್ವದರ್ಜೆಯ ಶಿಕ್ಷಣವನ್ನು ತರುವ ಉದ್ದೇಶದಿಂದ ಪೋದಾರ್‌ ಜಂಬೋ ಕಿಡ್ಸ್‌ ಸಂಸ್ಥೆಯನ್ನು 2015 ರಲ್ಲಿ ಆರಂಭಿಸಿದರು. ಪ್ರತಿ ವರ್ಷವೂ 200 ಮಕ್ಕಳು ಇಲ್ಲಿ ಸಂತೋಷದಿಂದ ಕಲಿಯುತ್ತಿದ್ದಾರೆ.

ಧಾರವಾಡ ಲಯನ್ಸ್‌ ಸ್ಕೂಲ್‌ ಆಡಳಿತವನ್ನೂ ತೆಕ್ಕೆಗೆ ತೆಗೆದುಕೊಂಡರು. 2020 ರಲ್ಲಿ ಪಾಲಾಕ್ಷ್ ಪೋದಾರ್‌ ಲರ್ನ್ ಸ್ಕೂಲ್‌ ಜೀವ ತಳೆಯಿತು.

ವೈಶಿಷ್ಟ್ಯಗಳ ಆಗರ
ಸುಸಜ್ಜಿತ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ತಾಂತ್ರಿಕವಾಗಿ ಶ್ರೀಮಂತವಾಗಿ ಸ್ಮಾರ್ಟ್‌ ಎನಿಸಿಕೊಂಡಿವೆ. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಿಸಿ ಟಿವಿ ನಿಗಾ (ಈ ಸುರಕ್ಷತಾ ಕ್ರಮವನ್ನು ಬಸ್‌ಗಳಲ್ಲೂ ಅಳವಡಿಸಲಾಗಿದೆ), ಆರೋಗ್ಯಕರ ಆಹಾರವನ್ನು ಒದಗಿಸಲು ಕ್ಯಾಂಪಸ್‌ ಒಳಗೆ ಕೆಫೆಟೀರಿಯಾ ಸೌಲಭ್ಯ(ಒಬ್ಬ ಆಹಾರ ತಜ್ಞರ ಮಾರ್ಗದರ್ಶನವೂ ಲಭ್ಯ). ಅಥ್ಲೆಟಿಕ್ಸ್‌, ಫ‌ುಟ್‌ಬಾಲ್‌, ಲಾನ್‌ ಟೆನಿಸ್‌, ಸ್ಕೇಟಿಂಗ್‌, ಕ್ರಿಕೆಟ್‌ ಮತ್ತಿತರೆ ಆಟಗಳನ್ನು ಆಡಲು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗಿದೆ. ಕಲೆ, ಸಂಗೀತ, ನೃತ್ಯ, ಝುಂಬಾ, ಯೋಗ, ಹೂದೋಟ ನಿರ್ಮಾಣಕ್ಕೂ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಫ್ರೆಂಚ್‌ ಭಾಷೆಯನ್ನೂ ಕಲಿಸಲಾಗುತ್ತಿದೆ. ಆಧುನಿಕ ಸೌಲಭ್ಯಗಳಿರುವ ಕಂಪ್ಯೂಟರ್‌ ಮತ್ತು ವಿಜ್ಞಾನ ಪ್ರಯೋಗಾಲಯಗಳು ಕಲಿಕೆಗೆ ಅನುಕೂಲ ಕಲ್ಪಿಸುತ್ತಿವೆ.

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಲಿ, ಸಂತೋಷದಿಂದ ಕಲಿಯಲು ಎಲ್ಲ ವಕಾಶಗಳು ಇಲ್ಲಿವೆ. ಅನ್ವೇಷಣೆ, ಅನುಭವ ಮತ್ತು ಅನುಷ್ಠಾನ ಈ ಮುರು ಮಾದರಿಗಳಲ್ಲಿ ಕಲಿಕೆಯು ಇಲ್ಲಿ ಪರಿಪೂರ್ಣವಾಗುತ್ತಿದೆ.

ಸೌಕರ್ಯಗಳು
– ಸುಸಜ್ಜಿತ ಪ್ರಯೋಗಾಲಯಗಳು
– ಟೆಕ್‌-ಫ್ರಂಡ್ಲಿ ಸ್ಮಾರ್ಟ್‌ ತರಗತಿ ಕೊಠಡಿಗಳು
– ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ.
– ಉದ್ಯಮದಲ್ಲಿ ಅತ್ಯುತ್ತಮ ಶಿಕ್ಷಕರು, ನಿಯಮಿತವಾದ ತರಬೇತಿಗಳು
– ಶಾಲಾ ಆವರಣದಲ್ಲಿ 24×7 ಸಿಸಿ ಕ್ಯಾಮರಾ ಕಣ್ಗಾವಲು.
– ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾ ಆರೋಗ್ಯಕರ ಆಹಾರ ನೀಡುತ್ತಿದೆ
– ನ್ಪೋರ್ಟ್ಸ್ ಕ್ಲಬ್‌, ಹವ್ಯಾಸ ತರಗತಿಗಳು ಮತ್ತು ಇನ್ನೂ ಅನೇಕ.
– ವಿದೇಶಿ ಭಾಷೆಯ ಪರಿಚಯ- 1ರಿಂದ 5ನೇ ತರಗತಿಗಳಿಗೆ ಫ್ರೆಂಚ್‌.

ಟಾಪ್ ನ್ಯೂಸ್

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

tdy-17

ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ಯಕ್ಷಗಾನ, ಕೋಲ ನಡೆಸಬಹುದೇ..? ಚುನಾವಣಾ ನೀತಿ ಸಂಹಿತೆ ಬಗ್ಗೆ ದ.ಕನ್ನಡ ಡಿಸಿ ಮಾಹಿತಿ

ಯಕ್ಷಗಾನ, ಕೋಲ ನಡೆಸಬಹುದೇ..? ಚುನಾವಣಾ ನೀತಿ ಸಂಹಿತೆ ಬಗ್ಗೆ ದ.ಕನ್ನಡ ಡಿಸಿ ಮಾಹಿತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…