ಪೇದೆ ಮೇಲೆ ಕಾರು ಚಾಲಕನಿಂದ ಹಲ್ಲೆ
Team Udayavani, Jun 6, 2021, 5:50 PM IST
ಹುಬ್ಬಳ್ಳಿ: ಹೊಸೂರು ಚೆಕ್ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಗರ ಠಾಣೆ ಪೇದೆ ಮೇಲೆ ಕಾರು ಚಾಲಕ ಹಲ್ಲೆ ಮಾಡಿದ ಘಟನೆ ಶನಿವಾರ ನಡೆದಿದ್ದು, ಪೊಲೀಸರು ಆತನನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.
ಕಾರು ಚಾಲಕ ಉತ್ತರ ಪ್ರದೇಶ ಗೋರಖಪುರದ ವೀರೇಂದ್ರ ಪ್ರಕಾಶ ಸಿಂಗ್ ಎಂಬಾತ ಪೇದೆ ಶ್ರೀಶೈಲ ನರಗುಂದ ಮೇಲೆ ಹಲ್ಲೆ ಮಾಡಿದ್ದಾನೆ. ಪೇದೆ ಶ್ರೀಶೈಲ ಅವರು ಚೆಕ್ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದಾಗ ಮಾಸ್ಕ್ ಧರಿಸದೆ ಕಾರು ಚಲಾಯಿಸಿಕೊಂಡು ಬಂದ ವೀರೇಂದ್ರನನ್ನು ತಡೆದು ಪ್ರಯಾಣದ ಪರವಾನಗಿ ಕುರಿತು ವಿಚಾರಿಸಿದ್ದಾರೆ.
ಆಗ ಚಾಲಕನು ವಾಹನ ತಡೆಯಲು ನಿನಗೇನು ಅಧಿಕಾರವಿದೆ ಎಂದು ಕೇಳಿದ್ದಲ್ಲದೆ, ಮುಖ ಮತ್ತು ಭುಜಕ್ಕೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ತಕ್ಷಣ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ವೀರೇಂದ್ರನನ್ನು ಕಾರು ಸಹಿತ ವಶಕ್ಕೆ ಪಡೆದಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ