ಲಾಭದ ದಾರಿ ಹಿಡಿದ ಖಾಸಗಿ ವಾಹನಗಳು


Team Udayavani, Apr 11, 2021, 5:53 PM IST

ಲಾಭದ ದಾರಿ ಹಿಡಿದ ಖಾಸಗಿ ವಾಹನಗಳು

ಹುಬ್ಬಳ್ಳಿ: ಖಾಸಗಿ ವಾಹನಗಳ ಮೂಲಕ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎನ್ನುವ ಗುಂಗಿನಲ್ಲಿ ಸರಕಾರವಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಗ್ರಾಮೀಣ ಸಾರಿಗೆ,ನಗರ ಸಾರಿಗೆ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಓಡಿಸಬೇಕು ಎನ್ನುವ ಆರ್‌ ಟಿಒ ಅಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

ಖಾಸಗಿ ವಾಹನಗಳಿಗೆ ಯಾವುದೇ ನಿರ್ಬಂಧ ಹೇರದೆ ಬೇಕಾದ ಮಾರ್ಗಗಳಲ್ಲಿ ಸಂಚಾರ ಮಾಡುವುದಕ್ಕಸರಕಾರ ಅನುಮತಿ ನೀಡಿದೆ. ಲಾಭದಾಯಕ ಮಾರ್ಗಗಳಲ್ಲಿ  ಮಾತ್ರ ಖಾಸಗಿ ವಾಹನಗಳ ಸಂಚಾರ ಸೀಮಿತವಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಾರಿಗೆಸೇವೆ ಇಲ್ಲದಂತಾಗಿದೆ. ಹೊರ ರಾಜ್ಯ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ.

ಗ್ರಾಮೀಣ ಸಾರಿಗೆ ಸ್ಥಗಿತ: ಹುಬ್ಬಳ್ಳಿ ವಿಭಾಗದಿಂದ ಗ್ರಾಮೀಣ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಸ್‌, ಟೆಂಪೊ, ಟಂಟಂವಾಹನಗಳು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದವು. ಇದೀಗ ಪರಿಸ್ಥಿತಿ ಬದಲಾಗಿದ್ದು, ಚಾಕಲಬ್ಬಿ, ದ್ಯಾವನೂರು,ಯರಗುಪ್ಪಿ, ಯರೇಬೂದಿಹಾಳ, ಕೊಂಕಣ ಕುರಹಟ್ಟಿ, ತಡಸ ಭಾಗದ ಮುಕ್ಕಲ, ತಬಕದ ಹೊನ್ನಳ್ಳಿ, ಕುಂಕೂರು, ಯಲಿವಾಳ, ಕರಡಿಕೊಪ್ಪ, ಕಲಘಟಗಿ ಭಾಗದ ಮಿಶ್ರಿಕೋಟಿ, ಕಾಮಧೇನು,ಹಿರೇಹೊನ್ನಳ್ಳಿ, ಬೇಗೂರು, ನವಲಗುಂದ ಭಾಗದತಿರ್ಲಾಪುರ, ಬ್ಯಾಲಾಳ, ಬಳ್ಳೂರು, ಮೊರಬ, ಇಬ್ರಾಹಿಂಪುರ,ಅಣ್ಣಿಗೇರಿಯ ಮಜ್ಜಿಗುಡ್ಡ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಟ್ನೂರು,ಅಂತೂರ-ಬೆಂತೂರು, ನಲವಡೆ ಭಾಗದ ಕೋಳಿವಾಡ,ಮಣಕವಾಡ ಸೇರಿದಂತೆ ಗ್ರಾಮೀಣ ಭಾಗದ ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.

ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಗ್ರಾಮಸ್ಥರು ಬೈಕ್‌,ಬಾಡಿಗೆ ವಾಹನಗಳ ಮೊರೆ ಹೋಗಿದ್ದಾರೆ. ಸಾರಿಗೆ ಸಂಸ್ಥೆಬಸ್‌ಗಳನ್ನು ನಂಬಿಕೊಂಡು ತಿಂಗಳ ಪಾಸ್‌ ಪಡೆದವರು ಕಷ್ಟ ಅನುಭವಿಸುವಂತಾಗಿದೆ.

ದಿನದಿಂದ ದಿನಕ್ಕೆ ವಾಹನಗಳ ಹೆಚ್ಚಳ :

ಸುಮಾರು 2100 ಖಾಸಗಿ ವಾಹನಗಳು ಲಾಭದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಬೆಳಗಾವಿ, ಗದಗ,ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಕಲಘಟಗಿ, ನರಗುಂದ, ವಿಜಯಪುರ, ಕುಂದಗೋಳ, ಶಿಗ್ಗಾವಿ,ನವಲಗುಂದ, ಹಾನಗಲ್ಲ, ಕಾರವಾರ, ಮುಂಡಗೋಡ ಮಾರ್ಗಗಳಲ್ಲಿ ಮಾತ್ರ ಸಂಚಾರ ಮಾಡುತ್ತಿವೆ. ಆರ್‌ಟಿಒ,ಸಂಚಾರ ಪೊಲೀಸರ ಯಾವುದೇ ನಿರ್ಬಂಧ ಇಲ್ಲದಿರುವಕಾರಣ ದಿನದಿಂದ ದಿನಕ್ಕೆ ಹಳೇ ಬಸ್‌ ನಿಲ್ದಾಣದಲ್ಲಿ ಖಾಸಗಿವಾಹನಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಕೆಲ ಸಾರಿಗೆ ಬಸ್‌ಗಳು ಓಡಾಡಿದರೂ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ.

ನಿಲ್ದಾಣಗಳಲ್ಲಿ ಪ್ರಯಾಣಿಕರ ಕೊರತೆ :  ನಾಲ್ಕು ದಿನಗಳಿಂದ ನಗರದ ಮೂರು ಬಸ್‌ ನಿಲ್ದಾಣಗಳಲ್ಲಿಪ್ರಯಾಣಿಕರು ಇಲ್ಲದಂತಾಗಿದೆ. ನಿತ್ಯ ಹಳೇ ಬಸ್‌ನಿಲ್ದಾಣದಿಂದ 80,000 ಪ್ರಯಾಣಿಕರು ಹಾಗೂ 1650ಅನುಸೂಚಿಗಳು, ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ25,000 ಪ್ರಯಾಣಿಕರು 1000 ಸಾವಿರ ಅನುಸೂಚಿಗಳು,ಹೊಸೂರು ಬಸ್‌ ನಿಲ್ದಾಣದಿಂದ 30,000 ಪ್ರಯಾಣಿಕರುಹಾಗೂ 640 ಅನುಸೂಚಿಗಳು ಕಾರ್ಯಾಚರಣೆಗೊಳ್ಳುತ್ತಿವೆ.ಹಳೇ ಬಸ್‌ ನಿಲ್ದಾಣದಿಂದ ಮಾತ್ರ ಖಾಸಗಿ ಹಾಗೂ ಒಂದಿಷ್ಟುಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರ ಸಂಖ್ಯೆ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

ಆಟೋ ರಿಕ್ಷಾಗಳದ್ದೇ ದರ್ಬಾರು :

ನಗರ ಸಾರಿಗೆ ಸೇವೆ ಸ್ಥಗಿತಗೊಂಡಿರುವ ಪರಿಣಾಮಆಟೋ ರಿಕ್ಷಾಗಳದ್ದೇ ದರ್ಬಾರು ಆಗಿದೆ. ಅವರು ಹೇಳಿದದರ ಪಾವತಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೋರ್ಟ್‌ ವೃತ್ತ-ಗೋಪನಕೊಪ್ಪಕ್ಕೆ ಒಬ್ಬರಿಗೆ 10-15 ರೂ.ಇದ್ದದ್ದು ಈಗ 25-30 ರೂ. ಕೇಳುತ್ತಿದ್ದಾರೆ. ಇದರಂತೆಬಹುತೇಕ ಕಡೆಗಳಲ್ಲಿ ದರ ದುಪ್ಪಟ್ಟಾಗಿದೆ. ಆಟೋ ರಿಕ್ಷಾಗಳಿಗೆ ಹೋಗಬೇಕು ಇಲ್ಲವೇ ನಡೆದುಕೊಂಡು ಹೋಗುವಂತಾಗಿದೆ.

ಎಲ್ಲಾ ಮಾರ್ಗಗಳಲ್ಲಿ ಖಾಸಗಿವಾಹನಗಳು ಸಂಚಾರ ಮಾಡಬೇಕು.ಯಾವುದೇ ಕಾರಣಕ್ಕೂ ನಿಗದಿಪಡಿಸಿದದರಕ್ಕಿಂತ ಹೆಚ್ಚಿಗೆ ಪಡೆಯಬಾರದು ಎಂದುಸೂಚಿಸಲಾಗಿದೆ. ದೂರುಗಳ ಬಂದ ತಕ್ಷಣಸೂಚನೆ ನೀಡುವ ಕೆಲಸ ಮಾಡಲಾಗುತ್ತಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. -ಅಪ್ಪಯ್ಯ ನಾಲತ್ವಾಡಮಠ,

ಪ್ರಾದೇಶಿಕ ಸಾರಿಗೆ ಅಧಿಕಾರಿ

ಆಕಸ್ಮಿಕವಾಗಿ ಸ್ವೀಕರಿಸಿದ್ದ ರಾಜ್ಯ ಪ್ರಶಸ್ತಿಯನ್ನು ಅಧಿಕಾರಿಗಳಿಗೆ ಮರಳಿಸಲು ಗ್ರಾಮದಿಂದ 300 ರೂ. ಕೊಟ್ಟು ಬಾಡಿಗೆ ವಾಹನ ತಂದಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಾರಿಗೆಸೌಲಭ್ಯ ನಿಂತು ಹೋಗಿದೆ. ಅವರಿವರ ಬೈಕ್‌ ಆಶ್ರಯಿಸಬೇಕು. ಇಲ್ಲವೇ ಬಾಡಿಗೆ ವಾಹನಮಾಡಿಕೊಂಡು ಹೋಗಬೇಕು. ಬಸವರಾಜ ಯರಗೊಪ್ಪ, ಗುಡೇನಕಟ್ಟಿ ನಿವಾಸಿ

ಸಾವಿರಾರು ಖಾಸಗಿ ವಾಹನಗಳನ್ನು ಬಿಟ್ಟಿದ್ದೇವೆ ಎಂದು ಸರಕಾರ ಸುಳ್ಳುಹೇಳುತ್ತಿದೆ. ಬಸ್‌ ನಿಂತಾಗಿನಿಂದ ನಮ್ಮೂರುಜನ ಪ್ಯಾಟಿ ಮರೆತಿದ್ದಾರೆ. ಗ್ರಾಮೀಣ ಭಾಗಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ನಿಂತಿದೆ.ಸರಕಾರ ಆದಷ್ಟು ಬೇಗ ಪ್ರತಿಭಟನೆ ಮುಗಿಸುವಕೆಲಸ ಮಾಡಬೇಕು. ಬಸವರಾಜ ಜಾಲಿಹಾಳ, ಗ್ರಾಪಂ ಮಾಜಿ ಸದಸ್ಯ, ಮೊರಬ

 

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.