ಹುಯ್ಯೋ ಹುಯ್ಯೋ ಮಳೆರಾಯ

•ಮುಗೀತು ಮುಂಗಾರಿ ಕಥೆ-ಶುರುವಾಯ್ತು ವ್ಯಥೆ•ಮೊಳಕೆಯೊಡಲು ಬೀಜಗಳ ಒದ್ದಾಟ

Team Udayavani, Jun 21, 2019, 7:39 AM IST

hubali-tdy-2..

ಧಾರವಾಡ: ಮುಂಗಾರು ಕೈ ಕೊಟ್ಟಿದ್ದರಿಂದ ಶೇಂಗಾ, ಹೆಸರು, ಆಲೂಗಡ್ಡೆ ಬೀಜ ಬಿತ್ತನೆಯಾಗದೆ ಬರದ ಕುರುಹಾಗಿ ಕಾಣುವ ಲಕಮಾಪುರ ಗ್ರಾಮದ ಹೊಲ.

ಧಾರವಾಡ: ಬೀಸುವ ಗಾಳಿಯೊಡನೆ ಹಾರಿ ಹೋಗುತ್ತಿರುವ ಮೋಡಗಳು.. ಹಕ್ಕಿ ಆರಿಸಿಕೊಳ್ಳಲು ಒಂದು ಕಾಳು ಇರದಂತೆ ಸ್ವಚ್ಛವಾಗಿ ಹಂಗಾಮಿಗೆ ಹದ ಮಾಡಿಟ್ಟ ಯರಿ ಭೂಮಿ… ಒಣ ಬಿತ್ತಿಗೆಯಾದ ಭೂಮಿಯಲ್ಲಿ ಮೊಳಕೆಯೊಡಲು ಒದ್ದಾಡುತ್ತಿರುವ ಬಿತ್ತಿದ ಬೀಜಗಳು.. ಇನ್ನು ಮಳೆಯಾದರೂ ಬಿತ್ತುವಂತಿಲ್ಲ.. ಬಿತ್ತಿದರೆ ಮತ್ತಷ್ಟು ಹೊರೆ ಎನ್ನುತ್ತಿರುವ ಅನ್ನದಾತರು.. ಒಟ್ಟಿನಲ್ಲಿ ಜಿಲ್ಲೆಯ ರೈತರಿಗೆ ಮತ್ತೂಂದು ಬರದ ಬರೆಯ ಅನುಭವವಾಗುತ್ತಿದೆ.

ಕಾರ ಹುಣ್ಣಿಮೆಗೆ ಮಲೆನಾಡಿನ ರೈತರು ತಮ್ಮ ಭತ್ತದ ಹೊಲದಲ್ಲಿ ಮಣ್ಣಿನ ಗಡಗಿ(ಬೆಚ್ಚು) ಇಟ್ಟು ಭೂ ನಮನ ಸಲ್ಲಿಸಬೇಕಿತ್ತು. ಇನ್ನು ಕರಿಭೂಮಿಯ ಬೆಳವಲದವರ ಹೊಲದಲ್ಲಿ ಶೇಂಗಾ, ಉದ್ದು, ಹೆಸರು, ಆಲುಗಡ್ಡೆ, ಜೋಳ ಸೇರಿ ಎಂಟಕ್ಕೂ ಹೆಚ್ಚು ಬೆಳೆಗಳು ರಂಗೋಲಿ ಹಾಕಿದಂತೆ ಮೊಳಕೆಯೊಡೆಯಬೇಕಿತ್ತು. ಆದರೆ ಎಲ್ಲವೂ ಮಳೆರಾಯನ ಅವಕೃಪೆಯಾಗಿ ಕಾರ ಹುಣ್ಣಿಮೆ ಮುಗಿದು ಮಣ್ಣೆತ್ತಿನ ಅಮಾವಾಸ್ಯೆ ಸಮೀಪಿಸಿದ್ದು, ಇನ್ನು ಮಳೆಯಾದರೂ ರೈತರು ಹಿಡಿ ಕಾಳನ್ನು ಕೂಡ ಹೊಲಗಳಲ್ಲಿ ಹಾಕುವುದಿಲ್ಲ. ಹೀಗಾಗಿ ಈ ವರ್ಷದ ಮುಂಗಾರಿ ಬೆಳೆ ಕಥೆ ಹೆಚ್ಚು ಕಡಿಮೆ ಇಲ್ಲಿಗೆ ಮುಗಿದಂತೆಯೇ.

ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು ರೈತರು ಭೂಮಿಯನ್ನು ಬಿತ್ತನೆಗೆ ಹದ ಮಾಡಿಕೊಂಡಿದ್ದಾರೆ. ಜೂ. 15ರ ವರೆಗೂ ಉತ್ತಮ ಮಳೆಯಾಗಿದ್ದರೂ ಸಾಕಾಗಿತ್ತು ರೈತರು ದೇವರನ್ನು ನಂಬಿ ಭೂಮಿಗೆ ಬೀಜ ಬಿತ್ತುತ್ತಿದ್ದರು. ಆದರೆ ಇದೀಗ ಜೂ. 20 ದಾಟಿದ ಮೇಲೆ ಮುಂಗಾರಿ ಬಿತ್ತನೆ ಮಾಡಿದರೆ, ಅಕ್ಟೋಬರ್‌ನಲ್ಲಿ ಬಿತ್ತನೆಯಾಗುವ ಹಿಂಗಾರು ಬೆಳೆಗಳಿಗೂ ಇದು ಅಡ್ಡಿಯಾಗುತ್ತದೆ. ಹೀಗಾಗಿ ರೈತರು ಮುಂಗಾರಿ ಬೀಜ ಬಿತ್ತನೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಅರೆಮಲೆನಾಡಿಗೆ ಬಂದ ಸೋಯಾ-ಗೊಂಜಾಳ: ಜಿಲ್ಲೆಯಲ್ಲಿ 2,57,899 ಹೆಕ್ಟೇರ್‌ ಭೂ ಪ್ರದೇಶವಿದ್ದು ಮುಂಗಾರಿನಲ್ಲಿ ಭತ್ತ, ಸೋಯಾಬಿನ್‌, ಶೇಂಗಾ, ಹೆಸರು, ಉದ್ದು, ಆಲುಗಡ್ಡೆ, ಜೋಳ, ಮೆಣಸಿನಕಾಯಿ, ಹತ್ತಿ ಬೆಳೆಯಲಾಗುತ್ತಿತ್ತು. ಆದರೆ ಮುಂಗಾರು ಮಳೆ ವಿಳಂಬವಾಗಿದ್ದರಿಂದ ಬಿತ್ತನೆ ಪ್ರಮಾಣ ಅತೀ ಕಡಿಮೆಯಾಗಿದೆ. ಈ ವರೆಗೂ ಜಿಲ್ಲೆಯಲ್ಲಿ ಒಟ್ಟು 2,487 ಕ್ವಿಂಟಲ್ನಷ್ಟು ಬೀಜ ವಿತರಣೆಯನ್ನು ಕೃಷಿ ಇಲಾಖೆ ಮಾಡಿದೆ. 1,19,026 ಟನ್‌ ಗೊಬ್ಬರದ ದಾಸ್ತಾನು ಕೂಡ ಇದ್ದು ರೈತರು ಕೊಂಡುಕೊಂಡಿದ್ದಾರೆ.

ಈ ವರೆಗೂ ಪಶ್ಚಿಮಘಟ್ಟದ ಸೆರಗಿನುದ್ದಕ್ಕೂ ಉತ್ತಮ ಮಳೆಯಾಗುತ್ತಿದ್ದರಿಂದ ಇಲ್ಲಿ ದೇಶಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷದಿಂದ ಇಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಬಯಲು ಸೀಮೆಯಲ್ಲಿ ಕಡಿಮೆ ಮಳೆ ಆಧಾರಿತವಾಗಿ ಬೆಳೆಯಲಾಗುತ್ತಿದ್ದ ಸೋಯಾ ಅವರೆ ಮತ್ತು ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ವರ್ಷ ಕೂಡ ಜಿಲ್ಲೆಯಲ್ಲಿ ಈ ವರೆಗೂ ಬಿತ್ತನೆಯಾದ ಬೆಳೆಗಳ ಪೈಕಿ ಶೇ.40 ಬರೀ ಸೋಯಾ ಮತ್ತು ಗೋವಿನಜೋಳವೇ ಬಿತ್ತನೆಯಾಗಿದೆ. ಧಾರವಾಡ, ಕಲಘಟಗಿ ತಾಲೂಕಿನಲ್ಲಿ ದೇಶಿ ಭತ್ತಕ್ಕೆ ಪರ್ಯಾಯವಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೋಯಾ ಮತ್ತು ಗೋವಿನಜೋಳದ ಬೀಜ ಬಿತ್ತನೆ ಮಾಡಿದ್ದಾರೆ. ಕಡಿಮೆ ಮಳೆ ಮತ್ತು ಅತೀ ಬೇಗವಾಗಿ ಬೆಳೆದು ನಿಲ್ಲುವ ದೊಡಗ್ಯಾ, ಚಂಪಾಕಲಿ ಮತ್ತು ಸಾಳಿ ಭತ್ತದ ತಳಿಯನ್ನೇ ರೈತರು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿದರೂ ಮಳೆ ಕೊರತೆ ಎದುರಾಗಿದ್ದರಿಂದ ಆ ಬೆಳೆಗಳು ಸರಿಯಾಗಿ ಹುಟ್ಟಿಲ್ಲ.

ಜಾನುವಾರು ಮೇವು ತಲೆನೋವು: ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮುಂಗಾರು ವಿಳಂಬ ಜಾನುವಾರುಗಳಿಗೆ ಮೇವಿನ ಕೊರತೆಯ ಆತಂಕವನ್ನುಂಟು ಮಾಡಿದೆ. ರೈತರು ಈಗಾಗಲೇ ತಮ್ಮ ಜಾನುವಾರುಗಳನ್ನು ರಸ್ತೆ, ಹೊಲದ ಬದುಗಳಲ್ಲಿ ಮೇಯಿಸುತ್ತಿದ್ದಾರೆ. ಮುಂಗಾರಿನಲ್ಲಿ ಭತ್ತ, ಸೋಯಾ ಅವರೆ, ಶೇಂಗಾ ಹೊಟ್ಟು, ಜಾನುವಾರುಗಳಿಗೆ ಉತ್ತಮ ಮೇವಾಗುತ್ತದೆ. ಆದರೆ ಮುಂಗಾರು ಕೈ ಕೊಟ್ಟರೆ ರೈತರಿಗೆ ಮೇವಿನ ಕೊರತೆ ಉಂಟಾಗಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆರು ಕಡೆ ಮೇವು ಬ್ಯಾಂಕ್‌ ಇದ್ದು ಇನ್ನಷ್ಟು ಮೇವು ಬ್ಯಾಂಕ್‌ ಹೆಚ್ಚಿಸುವ ಅನಿವಾರ್ಯತೆ ಜಿಲ್ಲಾಡಳಿತದ ಮುಂದಿದೆ.

 

•ಬಸವರಾಜ ಹೊಂಗಲ್

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.