ಮಕ್ಕಳ ಕಳ್ಳರ ವದಂತಿ-ಜಾಗೃತಿ
Team Udayavani, May 23, 2018, 5:34 PM IST
ಕೂಡಲಸಂಗಮ: ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ರಾಜಾದ್ಯಾಂತ ಹಬ್ಬಿರುವಾಗಲೇ ಮನೆಯಿಂದ ಕಾಣೆಯಾಗಿದ್ದ ಕೂಡಲಸಂಗಮದ ಸತೀಶ ಗಿರಿಯಪ್ಪ ಪೂಜಾರಿ (13) ಮೇ 18 ರಂದು ಶವವಾಗಿ ಪತ್ತೆಯಾಗಿದ್ದು,ಹಲವು ಸಂಶಗಳಿಗೆ ಕಾರಣವಾಗಿದೆ. ಈ ಘಟನೆಯಿಂದ ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಪಾಲಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡುತ್ತಿಲ್ಲ. ರಾತ್ರಿ ಮನೆಯ ಹೊರಭಾಗದಲ್ಲಿ ಮಲಗುತ್ತಿಲ್ಲ. ವಿವಿಧ ಕೆಲಸದ ನಿಮಿತ್ತ ಗ್ರಾಮಗಳಿಗೆ ಹೊಸದಾಗಿ ಆಗಮಿಸುವ ವ್ಯಕ್ತಿಗಳನ್ನು ಸಂದೇಹದಿಂದ ಕಾಣುವುವುದರ ಜೊತೆಗೆ ಗ್ರಾಮಸ್ಥರು ಅಮಾಯಕರನ್ನು ತಳಿಸಿದ ಘಟನೆ ಮರೋಳ ಗ್ರಾಮದಲ್ಲಿ ನಡೆದಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿಲ್ಲ, ಚಿಕ್ಕಮಕ್ಕಳನ್ನು ಅಪಹರಣ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ತಪ್ಪು ಸಂದೇಶ ಬಿತ್ತರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ತಂಡವಾಗಲಿ ಅಥವಾ ಗುಂಪಾಗಲಿ ಕಂಡು ಬಂದಿರುವುದಿಲ್ಲ ಎಂದು ಕೂಡಲಸಂಗಮ ಹೊರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲೇಶ ಲಮಾಣಿ, ಸಿದ್ದು ಬಿರಾದಾರ, ಮಹಾಂತೇಶ ಕುಂಬಾರ ಧ್ವನಿವರ್ಧಕದ ಮೂಲಕ ಠಾಣಾ ವ್ಯಾಪ್ತಿಯ 19 ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದರು. ಯಾವುದಾರರು ಸಂದೇಶ ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಸಂಪರ್ಕಿಸಿ 9480803952, 8880349666 ಎಂದು ಮಲ್ಲೇಶ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ