ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
Team Udayavani, May 5, 2019, 11:10 AM IST
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ನಗರದ ಶ್ರೀಯಾ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ಸೂರಜ ಅಳವಂಡಿ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಸ್ವರ್ಣ ಸಮೂಹ ಸಂಸ್ಥೆ ಚೇರ್ಮನ್ ಡಾ|ಚಿಗುರುಪಾಟಿ ವಿ.ಎಸ್.ವಿ. ಪ್ರಸಾದ, ಕೆಎಸ್ಸಿಎ ಧಾರವಾಡ ವಲಯ ಚೇರ್ಮನ್ ವೀರಣ್ಣ ಸವಡಿ ಹಾಗೂ ಸಂಯುಕ್ತ ಕರ್ನಾಟಕ ಸಿಇಒ ಎ.ಸಿ. ಗೋಪಾಲ ಅವರು ಅಥಿತಿಗಳಾಗಿ ಪಾಲ್ಗೊಂಡರು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಉದಯವಾಣಿ ಸಂಪಾದಕ ವೆಂಕಟೇಶ ಪ್ರಭು, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ವಾಸುದೇವ ಹೆರಕಲ್, ಪ್ರಜಾವಾಣಿ ಬ್ಯುರೋ ಮುಖ್ಯಸ್ಥ ಬಿ.ಎನ್.ಶ್ರೀಧರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಡಾ| ಬಂಡು ಕುಲಕರ್ಣಿ, ಹೊಸ ದಿಗಂತದ ಸ್ಥಾನಿಕ ಸಂಪಾದಕ ರಘುಪತಿ ಯಾಜಿ, ಸಂಘದ ಪದಾಧಿಕಾರಿಗಳಾದ ಸುಶಿಲೇಂದ್ರ ಕುಂದರಗಿ, ಜಗದೀಶ ಬುರ್ಲಬಡ್ಡಿ, ಗಿರೀಶ ಪಟ್ಟಣಶೆಟ್ಟಿ, ಗುರುರಾಜ ಹೂಗಾರ, ಪರಶುರಾಮ ತಹಶೀಲ್ದಾರ, ವಿರೇಶ ಹಂಡಗಿ, ಕೃಷ್ಣ ದಿವಾಕರ, ಗುರು ಭಾಂಡಗೆ, ರಾಜ್ಯ ಸಮಿತಿ ಸದಸ್ಯ ಲೋಚನೇಶ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ಪಂದ್ಯದಲ್ಲಿ ಲೀಡ್ ಸ್ಟೋರಿ ಇಲೆವೆನ್ ತಂಡ ನ್ಯೂಸ್ ಇಲೆವೆನ್ ತಂಡವನ್ನು 9ವಿಕೆಟ್ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಸ್ ಇಲೆವೆನ್ ತಂಡ 6 ಓವರ್ಗಳಲ್ಲಿ 22 ರನ್ ಗಳಿಸಿದರೆ, 2.3 ಓವರ್ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಗುರಿ ತಲುಪಿದ ಲೀಡ್ ಸ್ಟೋರಿ ಇಲೆವೆನ್ ತಂಡ ಜಯ ಗಳಿಸಿತು.
ಪೇಜ್ 3 ಇಲೆವೆನ್ ತಂಡ ನೀಡಿದ 35 ರನ್ಗಳ ಗುರಿಯನ್ನು ಕ್ಲಿಕ್ ಕ್ಲಿಕ್ ಇಲೆವೆನ್ ತಂಡ ಒಂದು ವಿಕೆಟ್ ಕಳೆದುಕೊಂಡು 3.4 ಓವರ್ಗಳಲ್ಲಿ ತಲುಪಿ ಎರಡನೇ ಸುತ್ತಿಗೆ ಮುನ್ನಡೆಯಿತು.
ಸ್ಟಿಂಗ್ ಇಲೆವೆನ್ ತಂಡ ನೀಡಿದ 29 ರನ್ಗಳ ಗುರಿಯನ್ನು ಆ್ಯಂಕರ್ ಇಲೆವೆನ್ ತಂಡ 4.1 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪಿ ಜಯ ದಾಖಲಿಸಿತು.
ಸ್ಪೇಶಲ್ ಸ್ಟೋರಿ ಇಲೆವೆನ್ ತಂಡ 72 ರನ್ ಗಳಿಸಿದರೆ, ಫ್ಲೈಯರ್ ಇಲೆವೆನ್ ತಂಡ 6 ವಿಕೆಟ್ ಕಳೆದುಕೊಂಡು 30 ರನ್ಗಳನ್ನು ಗಳಿಸಿ ಸೋಲನುಭವಿಸಿತು.
ಎಕ್ಸ್ಕ್ಲ್ಯೂಸಿವ್ ಇಲೆವೆನ್ ತಂಡ ಎಡಿಟೋರಿಯಲ್ ಇಲೆವೆನ್ ವಿರುದ್ಧ ಒಂದು ರನ್ನ ರೋಚಕ ಜಯ ಗಳಿಸಿತು. ಮೊದಲು ಆಡಿದ ಎಕ್ಸ್ಕ್ಲ್ಯೂಸಿವ್ ಇಲೆವೆನ್ ತಂಡ 39 ರನ್ ಗಳಿಸಿದರೆ ಎಡಿಟೋರಿಯಲ್ ಇಲೆವೆನ್ ತಂಡ 38 ರನ್ ಮಾತ್ರ ಗಳಿಸಿತು.
ಹೆಡ್ಲೈನ್ ಇಲೆವೆನ್ ತಂಡ ನೀಡಿದ 55 ರನ್ಗುರಿ ಬೆನ್ನತ್ತಿದ ಬೈಲೈನ್ ತಂಡ 6 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿ ಸೋಲು ಕಂಡಿತು.
ಭಾನುವಾರ ಬೆಳಗ್ಗೆ ಕ್ವಾರ್ಟರ್ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಜರುಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ