ಮಹಿಳಾ ಉದ್ಯಮಿಗಳಿಗೆ ಸಖಿ ಬೆಳಕು


Team Udayavani, Apr 12, 2021, 2:06 PM IST

ಮಹಿಳಾ ಉದ್ಯಮಿಗಳಿಗೆ ಸಖಿ ಬೆಳಕು

ಹುಬ್ಬಳ್ಳಿ: ಮಹಿಳಾ ಉದ್ಯಮಿಗಳ ಕೌಶಲ ಹೆಚ್ಚಳದ ತರಬೇತಿ, ವಹಿವಾಟು ವೇಗವರ್ಧನೆ, ರಫ್ತು ಚಿಂತನೆಯ ಮಹತ್ವದ ಕನಸಿನೊಂದಿಗೆ ಉದಯಿಸಿರುವ ಸ್ವಾವಲಂಬಿ ಸಖಿ ಉತ್ಪಾದಕರ ಕಂಪನಿ, ಕರ್ನಾಟಕ-ತೆಲಂಗಾಣ ರಾಜ್ಯಗಳಲ್ಲಿ ಸೀಮಿತ ವಹಿವಾಟಿನಲ್ಲಿದ್ದ ಸಾವಿರಾರು ಮಹಿಳಾ ಉದ್ಯಮಿಗಳಿಗೆ ಭರವಸೆಯ ಬೆಳಕಾಗಿ ಪ್ರಜ್ವಲಿಸುತ್ತಿದೆ.

ಉತ್ತರ ಕರ್ನಾಟಕದ ಮಟ್ಟಿಗೆ ಸಾಮಾಜಿಕ ಉದ್ಯಮಕ್ಕೊಂದು ಹೊಸ ಭಾಷ್ಯೆ ಬರೆದ ದೇಶಪಾಂಡೆ ಫೌಂಡೇಶನ್‌, ಉದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿಮಹಿಳೆಯರು ಹಾಗೂ ಸಣ್ಣ-ಸೂಕ್ಷ್ಮ ಉದ್ಯಮದಾರರ ಕೌಶಲ ಹೆಚ್ಚಳ, ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿದೆ. ಹೊಲಿಗೆ, ಎಂಬ್ರಾಯಿಡರ್‌ ಕೆಲಸ, ಟೆರಾಕೋಟಾ, ಕಸೂತಿ ಕಲೆ, ಆಹಾರ ಪದಾರ್ಥಗಳತಯಾರಿಕೆ, ಹ್ಯಾಂಡಿಕ್ರಾಫ್ಟ್‌, ಲೋಹದ ಉತ್ಪನ್ನಗಳು ಹೀಗೆ ವಿವಿಧ ವೃತ್ತಿಯಲ್ಲಿದ್ದರೂ ತಮ್ಮದೇ ಸೀಮಿತ ಸ್ಥಿತಿಯಲ್ಲಿದ್ದ, ಕೌಶಲ, ಹೊಸ ವಿನ್ಯಾಸ, ಮಾರುಕಟ್ಟೆ ಕೊರತೆ ಎದುರಿಸುತ್ತಿದ್ದ ಸಣ್ಣ-ಸೂಕ್ಷ್ಮ ಮಹಿಳಾಉದ್ಯಮದಾರರನ್ನು ಗುರುತಿಸಿ ಅವರಿಗೆ ತರಬೇತಿ,ಮಾರ್ಗದರ್ಶನ, ಸಾಲ ಸಂಪರ್ಕ, ಮಾರುಕಟ್ಟೆ ಬೆಂಬಲ ಕಾರ್ಯವನ್ನು ಕೈಗೊಳ್ಳ ಲಾಗಿದ್ದು,ಇದೆಲ್ಲದರ ಪರಿಣಾಮವಾಗಿ ತರಬೇತಿ ಪಡೆದಮಹಿಳಾ ಉದ್ಯಮದಾರರ ಒಟ್ಟಾರೆ ವಹಿವಾಟು18-19 ಲಕ್ಷ ರೂ.ಗಳಿಂದ 1.50 ಕೋಟಿ ರೂ.ಗೆ ನೆಗೆತಕಾಣುವಂತಾಗಿದೆ.

ಮಹಿಳಾ ಉದ್ಯಮದಾರರ ಮಾಸಿಕ ವಹಿವಾಟು 10,000ದಿಂದ 40,000 ಸಾವಿರ ರೂ.ವರೆಗೆಹೆಚ್ಚಳವಾಗಿದೆ. 24 ಮಹಿಳೆಯರು 40 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ವಹಿವಾಟುವಿಸ್ತರಿಸಿಕೊಂಡಿದ್ದಾರೆ. ಮಹಿಳಾ ಉದ್ಯಮದಾರರತರಬೇತಿ-ಮಾರ್ಗದರ್ಶನಕ್ಕೆ ರಾಜ್ಯದ ಧಾರವಾಡ,ಹಾವೇರಿ, ಗದಗ, ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳುಹಾಗೂ ತೆಲಂಗಾಣದ ನಿಜಾಮಬಾದ್‌, ಕರೀಂನಗರಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ.

ಯುಎನ್‌ಡಿಪಿ ಯೋಜನೆ: ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಉದ್ಯಮಶೀಲತೆ, ಉದ್ಯಮಬೆಳವಣಿಗೆ ಕೌಶಲ, ಮೌಲ್ಯವರ್ಧನೆ, ಮಾರುಕಟ್ಟೆ,ಬ್ರಾಂಡಿಂಗ್‌, ಹೊಸ ವಿನ್ಯಾಸ ಇನ್ನಿತರ ವಿಷಯಗಳಸುಮಾರು 15 ಸಾವಿರಕ್ಕೂ ಅಧಿ ಕ ಮಹಿಳೆಯರನ್ನುಅರ್ಜಿ ಹಾಕಿದ್ದರು. ಅದರಲ್ಲಿ ಸುಮಾರು 4,000ಮಹಿಳೆಯರನ್ನು ತರಬೇತಿಗೆ ಗುರುತಿಸಲಾಗಿತ್ತು.ಇದರಲ್ಲಿ ಅಂತಿಮವಾಗಿ 1,000 ಜನರನ್ನು ಆಯ್ಕೆ ಮಾಡಿ ಅವರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗಿತ್ತು. ಉದ್ಯಮಶೀಲತೆ ಜಾಗೃತಿ ಯೋಜನೆ ಅಡಿಯಲ್ಲಿಶೇ.50ರಷ್ಟು ಸೂಕ್ಷ್ಮ ಉದ್ಯಮದಾರರು, ಶೇ.30ರಷ್ಟುಸ್ವಯಂ ಉದ್ಯೋಗಿಗಳು, ಶೇ.20ರಷ್ಟು ಮಹತ್ವಾಕಾಂಕ್ಷಿ ಉದ್ಯಮಿದಾರರು ಎಂದು ವಿಂಗಡಿಸಿ ಅವರ ವೃತ್ತಿ ಹಾಗೂ ಉದ್ಯಮದಲ್ಲಿನ ಕೊರತೆಗಳನ್ನು ಗುರುತಿಸಿ ಅದರ ನಿವಾರಣೆಗೆ ಪೂರಕ ತರಬೇತಿ ಹಾಗೂ ಮಾರ್ಗದರ್ಶನ ಕೈಗೊಳ್ಳಲಾಗಿತ್ತು. ಮೊದಲ ಹಂತದಲ್ಲಿಹೊಸ ವಿನ್ಯಾಸ, ಡಿಜಿಟಲ್‌ ಮಾರ್ಕೆಟಿಂಗ್‌, ಸುಸ್ಥಿರತೆಕುರಿತಾಗಿ ತರಬೇತಿ ನೀಡಲಾಗಿದ್ದು, ಮೊದಲಹಂತದಲ್ಲಿ ತರಬೇತಿ ನೀಡಿದವರಿಗೆ ಎರಡನೇ ಹಂತದಲ್ಲಿಸಮುದಾಯ ನಾಯಕತ್ವದ ಜವಾಬ್ದಾರಿ ನಿರ್ವಹಣೆಗೆ ಆಯ್ಕೆ ಮಾಡಲಾಗಿತ್ತು.

100 ಬಿಜ್‌ ಸಖೀಯರು: ಉದ್ಯಮಶೀಲತೆ ಜ್ಞಾನ, ಚಿಂತನೆ,ಹೊಸತವನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ 100 ಜನಸಮುದಾಯ ನಾಯಕರು( ಬಿಜ್‌ ಸಖೀ)ನ್ನು ಗುರುತಿಸಿಅವರಿಗೆ ಐದು ದಿನಗಳ ವಿಶೇಷ ತರಬೇತಿ ನೀಡಲಾಗಿತ್ತು.ಸಮುದಾಯ ನಾಯಕತ್ವದ ಜವಾಬ್ದಾರಿ ಹೊತ್ತ ಸಖಿಯರಿಗೆ ಒಬ್ಬರಿಗೆ 10 ಜನ ಮಹಿಳಾ ಉದ್ಯಮಿಗಳ ತರಬೇತಿ, ಬೆಳವಣಿಗೆ ಜವಾಬ್ದಾರಿ ನೀಡಲಾಗಿದ್ದು, 100ಜನರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯ 1,000 ಜನಮಹಿಳಾ ಉದ್ಯಮಿದಾರರು ತಮ್ಮ ಉದ್ಯಮ ಬೆಳವಣಿಗೆಜತೆಗೆ ಸಮುದಾಯ ನಾಯುಕತ್ವದ ಗುಣ ಹೊಂದುವ ರೀತಿಯಲ್ಲಿ ತರಬೇತಿಯಲ್ಲಿ ತೊಡಗಿದ್ದಾರೆ.

ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ: ಉದ್ಯಮಶೀಲತೆ, ಉದ್ಯಮ ಬೆಳವಣಿಗೆ, ಹೊಸ ವಿನ್ಯಾಸ ಹಾಗೂ

ಕೌಶಲತೆ ತರಬೇತಿ-ಮಾರ್ಗದರ್ಶನ ಪಡೆದ ಮಹಿಳಾ ಉದ್ಯಮದಾರರು ತಮ್ಮದೇ ಉತ್ಪಾದಕ ಕಂಪನಿ ಆರಂಭಿಸಿ ಒಂದೇ ಬ್ರಾಂಡ್‌ನ‌ಡಿ ಮಾರಾಟಕ್ಕೆ ಚಿಂತಿಸಿದ ಪರಿಣಾಮಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ ಅಸ್ತಿತ್ವಕ್ಕೆ ಬಂದಿದೆ.

2020ರ ಅ.9ರಂದು ಕಂಪನಿ ನೋಂದಣಿ ಮಾಡಲಾಗಿದ್ದು, ಕಂಪನಿಯಲ್ಲಿ ಸುಮಾರು 200 ಜನಷೇರುದಾರರು ಇದ್ದಾರೆ. ಕಂಪನಿ ಸದಸ್ಯತ್ವ ಶುಲ್ಕವಾಗಿ ಪ್ರತಿ ಸದಸ್ಯರಿಂದ 100 ರೂ. ಪಡೆಯಲಾಗಿದ್ದು,ಷೇರು ಹಣವಾಗಿ ಒಬ್ಬರಿಂದ 500 ರೂ.ಗಳನ್ನು ಪಡೆಯಲಾಗಿದ್ದು, 1.20 ಲಕ್ಷ ರೂ. ಷೇರು ಬಂಡವಾಳಶೇಖರಣೆಯಾಗಿದೆ. ಕಂಪನಿಯಲ್ಲಿ ಪ್ರತಿಯೊಬ್ಬ ಷೇರುದಾರರಿಗೆ ಒಂದು ಷೇರು, ಒಂದು ಮತದ ಅವಕಾಶಕ್ಕೆ ಸೀಮಿತಗೊಳಿಸಲಾಗಿದೆ.

ಕಂಪನಿ ಮಾಡುವುದರಿಂದ ಒಂದೇ ಬ್ರಾಂಡ್‌ನ‌ಡಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಮಾರಾಟಕ್ಕೆ ಸುಲಭವಾಗಲಿದೆ. ಜತೆಗೆ ಕಚ್ಚಾ ಸಾಮಗ್ರಿಗಳನ್ನುಸಾಮೂಹಿಕವಾಗಿ ಖರೀದಿಸುವುದರಿಂದ ಕಡಿಮೆದರದಲಿ ದೊರೆಯುಲಿದೆ. ಈಗಾಗಲೇ ಕಂಪನಿಜತೆ ಒಡಂಬಡಿಕೆ ಮಾಡಿಕೊಂಡಿರುವ ಮುಂಬೆ„ನ ಕಂಪನಿಯೊಂದು ಬೈ ಬ್ಯಾಕ್‌ ಗ್ಯಾರೆಂಟಿ ಅಡಿಯಲ್ಲಿಬ್ಯಾಗ್‌ಗಳನ್ನು ತಯಾರಿಸಿಕೊಡಲು ಕೇಳಿದ್ದು, ಈಗಾಗಲೇ ಬ್ಯಾಗ್‌ಗಳನ್ನು ತಯಾರಿಸಿ ಕಳುಹಿಸಲಾಗಿದೆ. ಬರುವ ದಿನಗಳಲ್ಲಿ ಕೆಲವೊಂದು ಉತ್ಪನ್ನಗಳನ್ನು ರಫ್ತು ಮಾಡುವಚಿಂತನೆಯನ್ನು ಹೊಂದಲಾಗಿದೆ. ನಬಾರ್ಡ್‌ ನೆರವು ಸಹ ದೊರೆಯತೊಡಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಸುಮಾರು 1.72ಲಕ್ಷ ಮಾಸ್ಕ್ಗಳನ್ನು ತಯಾರಿಸಲಾಗಿದ್ದು, ಮೂರುಲೇಯರ್‌ನ ಸ್ಟೆರಲೈಡ್‌ ಮಾಸ್ಕ್ಗಳನ್ನು ಮಾರುಕಟ್ಟೆಗೆನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಗಿಸಿದಬಾಳೆಹಣ್ಣು(ಸುಕೇಳಿ) ತಯಾರಿಕೆಗೆ ಮಹಿಳೆಯರಿಗೆತರಬೇತಿ ನೀಡಲಾಗಿದ್ದು, ಪುಣೆ-ಮುಂಬೈ ಇನ್ನಿತರಕಡೆಯಿಂದ ಪ್ರಸ್ತುತ ಮಾಸಿಕ 5 ಕ್ವಿಂಟಲ್‌ನಷ್ಟುಮಾರಾಟವಾಗುತ್ತಿದ್ದು, ಅದನ್ನು 12-15 ಕ್ವಿಂಟಲ್‌ಗೆಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ಮಹಿಳಾ ಉದ್ಯಮದಾರರನ್ನು ಕೌಶಲಯುತಗೊಳಿಸುವ ಆಮೂಲಕ ಸುಸ್ಥಿರ ಉದ್ಯಮ ನಿರ್ಮಾಣದ ಮಹತ್ವದ ಕಾರ್ಯವನ್ನು ದೇಶಪಾಂಡೆ ಫೌಂಡೇಶನ್‌ ಮಾಡುತ್ತಿದೆ.

ಕರ್ನಾಟಕದಲ್ಲಿ ಮಹಿಳೆಯರ ಉದ್ಯಮಬೆಳವಣಿಗೆಗೆ ಉತ್ತಮ ಅವಕಾಶ ಇದ್ದು,ಬರುವ ದಿನಗಳಲ್ಲಿ ಉತ್ಪಾದಕರ ಕಂಪನಿಯನ್ನು ಪ್ರತಿ ಜಿಲ್ಲೆಯಲ್ಲೂ ಕೈಗೊಳ್ಳಲು, ಒಂದೇಬ್ರಾಂಡ್‌ನ‌ಡಿ ಉತ್ಪನ್ನಗಳ ಮಾರಾಟದ ಜತೆಗೆ ರಫ್ತುಗೆ ಗಮನ ನೀಡಲಾಗುತ್ತದೆ. ಲಿಜ್ಜತ್‌ಪಾಪಡ್‌ ಮಾದರಿಯಲ್ಲಿ ಸ್ವಂತ ಕಂಪನಿ, ಸ್ವಂತಉತ್ಪಾದನೆ ಮಾದರಿಯಲ್ಲಿ ಉತ್ತರ ಕರ್ನಾಟಕಮಹಿಳೆಯರನ್ನು ಸಜ್ಜುಗೊಳಿಸಲಾಗುತ್ತಿದೆ. ಸಂದೀಪ ಬಿ., ಕಾರ್ಯನಿರ್ವಾಹಕ, ದೇಶಪಾಂಡೆ ಫೌಂಡೇಶನ್‌ ಸಿಇಒ ಕಚೇರಿ

ಮಹಿಳಾ ಉದ್ಯಮದಾರರಲ್ಲಿ ತರಬೇತಿನಂತರ ಮಹತ್ವದ ಬದಲಾವಣೆಕಂಡು ಬಂದಿದೆ. ಹೊಸ ವಿನ್ಯಾಸ, ಗುಣಮಟ್ಟದ ಉತ್ಪನ್ನದ ಜತೆಗೆ ಆದಾಯದಲ್ಲಿಬೆಳವಣಿಗೆಯಾಗಿದ್ದು, ಅನೇಕ ಮಹಿಳೆಯರು ಯಶಸ್ವಿನತ್ತ ಸಾಗುತ್ತಿದ್ದಾರೆ. – ಈರಣ್ಣ ರೊಟ್ಟಿ, ಇಡಿಪಿ ಯೋಜನೆ ಮುಖ್ಯಸ್ಥ

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.