ಸಿಎಂಗೆ ಅವಮಾನ : ಶಿಕ್ಷಕ ಅಮಾನತು
Team Udayavani, May 6, 2018, 8:10 AM IST
ಧಾರವಾಡ: ಸಿಎಂ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿರುವ ವಿಡಿಯೋ ವೈರಲ್ ಮಾಡಿರುವ ಕಾರಣ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಡಿ.ಸಿ.ಉರಾನ ಅವರನ್ನು ಅಮಾನತುಗೊಳಿಸಲಾಗಿದೆ.
ಉಪೇಂದ್ರ ಚಿತ್ರದಲ್ಲಿ ನಟ ಉಪೇಂದ್ರ ವ್ಯಕ್ತಿಯೊಬ್ಬನಿಗೆ ಹೊಡೆಯುವ ದೃಶ್ಯವಿದ್ದು, ಆ ದೃಶ್ಯದಲ್ಲಿ ಹೊಡೆಸಿಕೊಳ್ಳುವ ವ್ಯಕ್ತಿಗೆ ಸಿಎಂ ಸಿದ್ದರಾಮಯ್ಯ ಅವರ ಮುಖ ಬರುವಂತೆ ಮರು ಸೃಷ್ಟಿಸಿ ವಿಡಿಯೋ ತಯಾರಿಸಲಾಗಿದೆ. ಇದಲ್ಲದೇ ಸಚಿವರಾದ ಕೆ.ಜೆ. ಜಾರ್ಜ್, ಆಂಜನೇಯ ಅವರನ್ನು ಅವಮಾನಿಸುವಂತಹ ದೃಶ್ಯವಿದೆ.
ಈ ವಿಡಿಯೋವನ್ನು ದೈಹಿಕ ಶಿಕ್ಷಕ ಉರಾನ, ಚಿಲಕವಾಡ ಶಿಕ್ಷಕರ ವಾಟ್ಸ್ಅಪ್ ಗ್ರೂಪ್ಗೆ ಹಾಕಿದ್ದರು. ಇದಲ್ಲದೇ ಅರೆಕುರಹಟ್ಟಿ ಕ್ಲಸ್ಟರ್ ಮಟ್ಟದಲ್ಲಿ ಬರುವ ಎಲ್ಲಾ ಶಾಲೆಗಳ ಶಿಕ್ಷಕರ ವಾಟ್ಸ್ಅಪ್ ಗ್ರೂಪ್ಗೆ ಹಾಕಿ ಆ ವಿಡಿಯೋ ವೈರಲ್ ಆಗುವಂತೆ ಮಾಡಿದ್ದರಿಂದ ಈ ಕುರಿತು ಕರುನಾಡು ಸೇನೆ ಉತ್ತರ ಕರ್ನಾಟಕ ಸಂಘಟನೆ ದೂರು ನೀಡಿತ್ತು. ವಿಚಾರಣೆ ವರದಿಯಲ್ಲಿ ದೈಹಿಕ ಶಿಕ್ಷಕ ಉರಾನ ಅವರ ಮೊಬೈಲ್ನಿಂದಲೇ ವಿಡಿಯೋ ವೈರಲ್ ಆಗಿದ್ದು ಗೊತ್ತಾಗಿದೆ. ಈ ಕಾರಣದಿಂದ ಸೈಬರ್ ಕ್ರೈಂ ಇಲಾಖೆಯಿಂದ ವರದಿಯ ಮೇರೆಗೆ ಡಿಡಿಪಿಐ ಎನ್.ಎಚ್. ನಾಗೂರ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ