ಸಮಾಜೋದ್ಧಾರ ಕಾರ್ಯ ಮಾಡಿದ ಶಿವ ಶರಣರು
Team Udayavani, Apr 30, 2019, 11:45 AM IST
ಧಾರವಾಡ : ವೀರವಿರಾಗಿಣಿ ಅಕ್ಕಮಹಾದೇವಿ, ಬಸವಣ್ಣನವರು, ಅಲ್ಲಮಪ್ರಭುದೇವರು ಸೇರಿದಂತೆ ವಿವಿಧ ಶರಣರು ಹಿಂಸೆಯನ್ನು ದೂರ ಮಾಡಲೆತ್ನಿಸಿ ಈ ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಧಿಕ್ಕರಿಸಿ ಸಮಾಜೋದ್ಧಾರ ಕಾರ್ಯ ಮಾಡಿದ್ದಾರೆ ಎಂದು ಡಾ|ಶರಣಮ್ಮ ಗೋರೆಬಾಳ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬಸವಕೇಂದ್ರ ವತಿಯಿಂದ ಆಯೋಜಿಸಿದ್ದ ‘ಅರಿವಿನ ಅಂಗಳ’ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜೀವನ ಕುರಿತಾಗಿ ಅವರು ಉಪನ್ಯಾಸ ನೀಡಿದರು.
12 ನೇ ಶತಮಾನದ ಪೂರ್ವದಲ್ಲಿ ಮಹಿಳೆಯನ್ನು ನಾಲ್ಕ ಗೋಡೆಗಳ ಮಧ್ಯೆ ಬಂಧಿಸಿಡುತ್ತಿದ್ದರು. ಆಗ ಸ್ತ್ರೀಯರಿಗೆ ಸ್ವಾತಂತ್ರ್ಯವಿರಲಿಲ್ಲ. ಅಕ್ಕಮಹಾದೇವಿಯನ್ನು ಮದುವೆಯಾಗಿದ್ದ ಕೌಶಿಕ ಮಹಾರಾಜ ಆಕೆಯನ್ನು ತನ್ನ ಅಧೀನದಲ್ಲಿರಿಸಿಕೊಂಡು ಶೋಷಣೆ ಮಾಡುತ್ತಿದ್ದ. ಅದನ್ನು ಧಿಕ್ಕರಿಸಿ ಚೆನ್ನಮಲ್ಲಿಕಾರ್ಜುನ ದೇವರೇ ನನ್ನ ಗಂಡನೆಂದು ಆತನ ದರ್ಶನಕ್ಕೆ ಹೊರಟಳು. ಶ್ರಿಶೈಲಕ್ಕೆ ಹೋಗಿ ಚೆನ್ನಮಲ್ಲಿಕಾರ್ಜುನ ದರ್ಶನ ಪಡೆದು ನಂತರ ಕದಳಿ ವನದಲ್ಲಿ ಆಕೆ ಲಿಂಗೈಕ್ಯಳಾದಳು. ಅಕ್ಕಮಹಾದೇವಿ ಮನೆಯಿಂದ ಹೊರಟ ನಂತರ ಆಕೆಗೆ ದಾರಿಯುದ್ದಕ್ಕೂ ಕಷ್ಟಗಳೇ ಬಂದವು ಆದರೂ ಹೆದರದೆ ಮುನ್ನಡೆದಳು ಆಕೆಯ ಧೈರ್ಯ, ಸಾಹಿತ್ಯ, ನಡೆ ನುಡಿಗಳು ಮಹಿಳೆಯರ ಮನದಲ್ಲಿ ಮೂಡಿದ ಪರಿಣಾಮ ಇಂದು ಸ್ತ್ರೀ ಸ್ವತಂತ್ರಳಾಗಿ ಬದುಕುವಂತಾಗಿದೆ ಎಂದರು.
ಅಂತರಂಗದ ಅರಿವಿನ ಕಣ್ಣು ತೆರೆಸಿ ಕರುಣೆ-ವಿನಯ-ಸಮತೆಗಳನ್ನು ಸ್ಪುರಿಸುವರೋ ಅಂತಹವರು ಜಾತಿ ಮತ ಪಂಥಾತೀತವಾಗಿ ಶ್ರೇಷ್ಠರಾಗುತ್ತಾರೆ. ಧರ್ಮ ಎಂದಿಗೂ ಶೋಷಣೆ ಮಾಡಲ್ಲ. ಶೋಷಣೆ ಮಾಡುವ ಧರ್ಮ ಧರ್ಮವೇ ಅಲ್ಲ. ಸಕಲ ಜೀವಾತ್ಮರಿಗೂ ಲೇಸು ಬಯಸುವ ಧರ್ಮವೆಂದರೆ ಅದು ಬಸವಧರ್ಮ, ಶರಣ ಧರ್ಮ ಎಂಬುದನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕು ಎಂದರು.
ಬಸವಕೇಂದ್ರ ಅಧ್ಯಕ್ಷ ಶಿವಣ್ಣ ಶರಣ್ಣನವರ, ನಟರಾಜ ಮೂರಶಿಳ್ಳಿ, ಮಲ್ಲಿಕಾರ್ಜುನ ಚೌಧರಿ, ಶಿವಶರಣ ಕಲಬಶೆಟ್ಟರ, ಚನಬಸಪ್ಪ ಕಗ್ಗಣ್ಣವರ, ಉಮೇಶ ಕಟಗಿ, ಶಾರದಾ ಕೌದಿ, ಸುನಿತಾ ಮೂರಶಿಳ್ಳಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ