ಕ್ಷತ್ರೀಯ ಸಮುದಾಯದ ಶಕ್ತಿ ತೋರಿಸಿ: ಉದಯಸಿಂಗ್‌


Team Udayavani, Jul 8, 2019, 9:39 AM IST

hubali-tdy-3..

ಹುಬ್ಬಳ್ಳಿ: ನಗರದ ಈದ್ಗಾ ಮೈದಾನ ಹೋರಾಟದಲ್ಲಿ ಗುಂಡು ತಿಂದವರು ಕ್ಷತ್ರೀಯರು, ನ್ಯಾಯಾಲಯಕ್ಕೆ ಅಲೆದಾಡಿದವರು ನಮ್ಮ ಸಮುದಾಯದವರು. ಆದರೆ ಈಗ ನಗರದಲ್ಲಿ ಕ್ಷತ್ರೀಯ ಸಮುದಾಯದ ಒಬ್ಬ ಶಾಸಕರು, ಸಂಸದರೂ ಇಲ್ಲದಂಥ ಸ್ಥಿತಿಯಿದೆ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯಸಿಂಗ್‌ ಹೇಳಿದರು.

ವಿದ್ಯಾನಗರ ಶ್ರೀ ಭಾರತಿ ಮರಾಠಾ ಭವನದಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ಜಿಲ್ಲಾ ಘಟಕದ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಈದ್ಗಾ ಮೈದಾನದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕ್ಷತ್ರೀಯ ಸಮಾಜದವರು. ಅಂದು ಹೋರಾಟದಲ್ಲಿದ್ದವರು, ನ್ಯಾಯಾಲಯ ಅಲೆದಾಡಿ, ಪೊಲೀಸರಿಂದ ಹೊಡೆಸಿಕೊಂಡು, ಗುಂಡೇಟು ತಿಂದು ಇಂದಿಗೂ ಕೂಡಾ ಹಿಂದೆ ಇದ್ದಾರೆ. ಆದರೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದವರು ಶಾಸಕರಾಗಿ, ಸಂಸದರಾಗಿ ಮೆರೆಯುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಸುಮಾರು 1.48 ಕೋಟಿ ಜನಸಂಖ್ಯೆ ಹೊಂದಿರುವ ಕ್ಷತ್ರೀಯ ಸಮಾಜ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದಿದೆ. ನಮ್ಮ ಸಮಾಜ ಬೆಳೆಸಲು ಯಾವುದೇ ಪಕ್ಷಗಳು ಮುಂದೆ ಬರುವುದಿಲ್ಲ. ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ನೀಡುವುದು ಕೇವಲ ಸಿಎ ಸೈಟ್ ಹಾಗೂ ಅಲ್ಪ ಅನುದಾನ. ಇದರಿಂದ ಏನೂ ಸಾಧ್ಯವಿಲ್ಲ. ಬದಲಾಗಿ ನಮ್ಮ ಸಮಾಜಕ್ಕೆ ಒಂದು ಶಕ್ತಿ ಬೇಕು. ಅದಕ್ಕಾಗಿ ಕ್ಷತ್ರೀಯ ಸಮಾಜ ಸಂಘಟನೆ, ಒಗ್ಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಕ್ಷತ್ರೀಯ ಸಮಾಜ ಒಂದಾದರೆ, ಸಮಾಜದ ಚಿತ್ರಣವನ್ನೇ ಬದಲಿಸಬಹುದು. ಶೇ.18ರಷ್ಟಿರುವ ನಮ್ಮ ಸಮಾಜ ಒಗ್ಗೂಡಿದರೆ ಅದರಲ್ಲಿರುವ ಶಕ್ತಿಯನ್ನು ಎಲ್ಲರಿಗೂ ತೋರಿಸಬಹುದು ಎಂದರು.

ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಇಂದು ಯಾವುದೇ ಕ್ಷೇತ್ರದಲ್ಲೂ ಕ್ಷತ್ರೀಯ ಸಮಾಜಕ್ಕೆ ಆದ್ಯತೆ ಇಲ್ಲದಂತಾಗಿದೆ. ಒಂದು ವೇಳೆ ಇದ್ದಿದ್ದೇ ಆದಲ್ಲಿ ಎಸ್‌.ಆರ್‌. ಮೋರೆ ಅವರಿಗೆ, ವಿಧಾನ ಪರಿಷತ್‌ ಸದಸ್ಯರಾಗಿರುವ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಎಸ್‌.ಆರ್‌. ಮೋರೆ, ರಾಜಶ್ರೀ ಜಡಿ, ಸರಳಾ ಬಾಂಢಗೆ, ಪೂರ್ಣಿಮಾ ಶಿಂಧೆ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಪಾಂಡುರಂಗ ಪಮ್ಮಾರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ ಚಿಕ್ಕೋರ್ಡೆ, ಸುಭಾಸಸಿಂಗ್‌ ಜಮಾದಾರ, ನಾರಾಯಣ ವೈದ್ಯ, ಸರಳಾ ಬಾಂಢಗೆ ಇದ್ದರು.

ವಿವಿಧ ಘಟಕಕ್ಕೆ ನೇಮಕ: ಜಿಲ್ಲಾ ಹಿರಿಯ ಸಲಹಾಗಾರ ಸಮಿತಿ ಸದಸ್ಯರಾಗಿ ವಿಠuಲಸಾ ಲದ್ವಾ, ಕೆ.ಜಿ.ಟಿಕಾರೆ, ನೀಲಕಂಠಸಾ ಜಡಿ, ಟಿ.ವೈ. ಕಲಾಲ, ಶಂಕರರಾವ್‌ ಸಫಾರೆ, ಅಶೋಕ ಪಾಲಕರ. ಜಿಲ್ಲಾ ಘಟಕ: ಜಿಲ್ಲಾಧ್ಯಕ್ಷರಾಗಿ ಕೇಶವ ಯಾದವ, ಉಪಾಧ್ಯಕ್ಷರಾಗಿ ಕೃಷ್ಣ ಊರಣಕರ, ಸಂಘಟನಾ ಕಾರ್ಯದರ್ಶಿಯಾಗಿ ಸುಭಾಶ ಧಾರವಾಡ. ಜಿಲ್ಲಾ ಯುವ ಘಟಕ: ಜಿಲ್ಲಾಧ್ಯಕ್ಷರಾಗಿ ಶಂಭು ಆರೇರ್‌, ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ಲದ್ವಾ. ಜಿಲ್ಲಾ ಮಹಿಳಾ ಘಟಕ: ಜಿಲ್ಲಾಧ್ಯಕ್ಷೆಯಾಗಿ ರಾಜಶ್ರೀ ಜಡಿ, ಉಪಾಧ್ಯಕ್ಷರಾಗಿ ಲೀಲಾಬಾಯಿ ಪಾಸ್ತೆ. ಹುಬ್ಬಳ್ಳಿ ನಗರ ಘಟಕ: ಅಧ್ಯಕ್ಷರಾಗಿ ಹನುಮಂತಸಾ ನಿರಂಜನ, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿಧರ ರೇಣಕೆ. ನಗರ ಯುವ ಘಟಕ: ಅಧ್ಯಕ್ಷರಾಗಿ ಪ್ರಕಾಶ ಬುರಬುರೆ, ಉಪಾಧ್ಯಕ್ಷರಾಗಿ ಶ್ರೀನಿವಾಸ ತಪಾಸ್ಕರ, ಕಾರ್ಯದರ್ಶಿಯಾಗಿ ಪ್ರಕಾಶ ಗಿತ್ತೆ. ನಗರ ಮಹಿಳಾ ಘಟಕ: ಅಧ್ಯಕ್ಷರಾಗಿ ಸಂತೋಷಿ ಕಾಪಸೆ, ಕಾರ್ಯದರ್ಶಿಯಾಗಿ ಪುಷ್ಪಾ ಪವಾರ ಅಧಿಕಾರ ವಹಿಸಿಕೊಂಡರು.

2ಎ ಸೇರ್ಪಡೆಗೆ ಮೊದಲ ಆದ್ಯತೆ:

ಕ್ಷತ್ರೀಯ ಮರಾಠಾ ಸಮಾಜದಿಂದ ಕಳೆದ ಹಲವು ವರ್ಷಗಳಿಂದ ಮೀಸಲಾತಿಯನ್ನು 3ಬಿಯಿಂದ 2ಎ ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದು, ಈಗಾಗಲೇ ಮರಾಠಾ ಸಮಾಜದಿಂದ ಎಕ್‌ ಮಾರಾಠಾ, ಲಾಕ್‌ ಮಾರಾಠಾ ಹೋರಾಟ ರಾಜ್ಯಾದ್ಯಂತ ಮಾಡಿದ್ದಾರೆ. ಇದುವರೆಗೂ ಯಾವುದೇ ಸ್ಪಂದನೆ ಇಲ್ಲ. ಈದೀಗ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ಈ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಉದಯಸಿಂಗ್‌ ಹೇಳಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.