ಯರಗುಪ್ಪಿಯಲ್ಲಿ ಶ್ರದ್ಧಾ-ಭಕ್ತಿಯ ಮೊಹರಂ


Team Udayavani, Sep 10, 2019, 9:50 AM IST

huballi-tdy-2

ಕುಂದಗೋಳ: ತಾಲೂಕಿನ ಹಲವು ಹಳ್ಳಿಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಇಡೀ ರಾಜ್ಯದ ಗಮನ ಸೆಳೆದಿವೆ. ತಾಲೂಕಿನ ಯರಗುಪ್ಪಿಯಲ್ಲಿ ನಡೆಯುವ ಮೊಹರಂ ಗಮನ ಸೆಳೆದಿದೆ.

4 ಗ್ರಾಮಗಳ 7 ಡೋಲಿಗಳು ಇಲ್ಲಿ ಸೇರುವುದು ನೋಡುವುದೇ ಒಂದು ಭಾಗ್ಯ. ಸೂರ್ಯಾಸ್ತ ಆಗುವುದರೊಳಗೆ ಯರಗುಪ್ಪಿಯ ಹೈಸ್ಕೂಲ್ ಮೈದಾನದಲ್ಲಿ ಯರಗುಪ್ಪಿಯ 3, ಚಿಕ್ಕನರ್ತಿಯ 2, ಯರಿನಾರಾಯಣಪುರ ಮತ್ತು ಮುಳ್ಳೊಳ್ಳಿಯ ತಲಾ ಒಂದು ಸೇರಿ 7 ಡೋಲಿಗಳು ಕೂಡುತ್ತವೆ. ಅಲ್ಲಿ ಯುವಕರ ಹೆಜ್ಜೆಮೇಳ ಗಮನ ಸೆಳೆಯುತ್ತದೆ. ಅಲ್ಲಿಂದ ದೇವರು ಹೊಳಿಗೆ ಹೋಗುತ್ತವೆ.

ಕುಂದಗೋಳ ಪಟ್ಟಣದ ಸ್ಥಳೀಯ ಗಾಣಿಗ ಮನೆತನದ ರೇವಣಸಿದ್ದಪ್ಪ ಬಸಪ್ಪ ಹೊಳಿಯವರ ಮುಂದಾಳತ್ವದಲ್ಲಿ ಪಂಜಾ ದೇವರ ಸ್ಥಾಪಿಸಿ ಮುಸ್ಲಿಂ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಾರೆ. ತಾಲೂಕಿನಾದ್ಯಂತ ಸೆ.10ರಂದೇ ದೇವರು ಹೊಳಿಗೆ ಹೋದರೆ, ಯರಗುಪ್ಪಿ ಗ್ರಾಮದಲ್ಲಿ ಮಾತ್ರ ಒಂದು ದಿನ ತಡವಾಗಿ ಸೆ.11ರಂದು ದೇವರು ಹೋಗುತ್ತವೆ.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಮೊಹರಂ ಆಚರಣೆಗೊಂಡರೆ, ತಾಲೂಕಿನಲ್ಲಿ ಮುಸ್ಲಿಂ ಬಾಂಧವರಿಲ್ಲದ ಅನೇಕ ಗ್ರಾಮಗಳಿದ್ದು, ಅಲ್ಲಿ ಮೊಹರಂನ್ನು ಹಿಂದೂಗಳೇ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಮುಸ್ಲಿಮರೇ ಇಲ್ಲದ ಗೌಡಗೇರಿ, ಕೊಡ್ಲಿವಾಡ, ರಟಗೇರಿ, ಹೊಸಕಟ್ಟಿ, ವಿಠಲಾಪೂರಗಳಲ್ಲಿ ಸಂಭ್ರಮದ ಮೊಹರಂ ಜರುಗುತ್ತದೆ.

ಗೌಡಗೇರಿ ಗ್ರಾಮದ ಮಧ್ಯಭಾಗದಲ್ಲಿ ಮಕಾನ್‌ ನಿರ್ಮಿಸಿದ್ದಾರೆ. ಪ್ರತಿವರ್ಷ ಇದರಲ್ಲೇ ಡೋಲಿಯನ್ನು ಬಿಂಗು, ಕಾಗದಗಳಿಂದ ಶೃಂಗರಿಸಿ, ಲೋಹದ ಪಂಜಾಗಳನ್ನು ವಸ್ತ್ರಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ, ಶ್ರೀಗಂಧದಿಂದ ಪೂಜಿಸುತ್ತಾರೆ. ಮಕಾನನ್ನು ದೀಪಾಲಂಕಾರದಿಂದ ಶೃಂಗರಿಸಿ, ರಾತ್ರಿ ಗ್ರಾಮದ ಜನ ಸಕ್ಕರೆ ಬೆಲ್ಲ ನೈವೇದ್ಯಗೈದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬೇಡಿಕೊಳ್ಳುತ್ತಾರೆ. ಹಲವರು ಹರಕೆ ತೀರಿಸುತ್ತಾರೆ.

ಮುಸ್ಲಿಂರಿಲ್ಲದ ಈ ಗ್ರಾಮಗಳಲ್ಲಿ ಹಿಂದೂಗಳೇ ಮಸೂತಿಗಳನ್ನು ಕಟ್ಟಿಸಿ, ಹಬ್ಬದಂದು ಮುಸ್ಲಿಂ ಗುರುಗಳೊಬ್ಬರನ್ನು ಕರೆದುಕೊಂಡು ಬಂದು ಕೈ ದೇವರುಗಳನ್ನು ಪ್ರತಿಷ್ಠಾಪಿಸಿ, ಡೋಲಿಗಳನ್ನು ಮಿಂಚು ಮಿಂಚಿನ ಬಿಂಗುಗಳಿಂದ ಶೃಂಗರಿಸಿ ಹೊತ್ತುಕೊಂಡು, ಮಸೂತಿ ಮುಂದಿನ ಅಗ್ನಿಕುಂಡದಲ್ಲಿ ಹಾಯ್ದು, ಪ್ರತಿಮನೆಮನೆಗಳಿಗೆ ಭೇಟಿ ಕೊಟ್ಟು ಕೊನೆಗೆ ದೇವರುಗಳೆಲ್ಲ ಹೊಳಿಗೆ ಹೋಗುವುದರೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.

ಜಾನಪದ ಕಲೆಗಳ ಸಿರಿವಂತಿಕೆ ಅನಾವರಣ:

ಮೊಹರಂ ಶೋಕಾಚರಣೆ ಅನ್ನೋದನ್ನು ಐತಿಹ್ಯವೇ ಸಾರಿ ಹೇಳುತ್ತೆ. ಆದರೆ, ಕಾಲಾಂತರದಲ್ಲಿ ಶೋಕಾಚರಣೆಯೇ ಸಂಭ್ರಮ ಸ್ವರೂಪ ಪಡೆದುಕೊಂಡಿದೆ. ಯರಗುಪ್ಪಿ ಜಾತ್ರೆಯಲ್ಲಂತೂ ತಲೆತಲಾಂತರದಿಂದಲೂ ಜಾನಪದ ಸೊಗಡು ಹೆಚ್ಚಿಸಿಕೊಳ್ಳುತ್ತ ಬಂದಿರೋದು ಇಲ್ಲಿನ ವಿಶೇಷ. ಜಾತ್ರೆಯ ಕೊನೆಯ ದಿನ 3:00 ಗಂಟೆ ಹೊತ್ತಿಗೆ ಊರ ಕೆರೆಯ ಮೈದಾನದಲ್ಲಿ ಜನಪದ ಆಟೋಟಗಳ ಪ್ರಕಾರಗಳಾದ ಹೆಜ್ಜೆಮೇಳ, ಕೋಲುಮೇಳ, ಸ್ವೇಟರ್‌ ಕುಣಿತ, ಕಡೆಗೋಲು ಕುಣಿತ, ಜತ್ತಿಗೆ ಕುಣಿತ, ಮುಳ್ಳು ಹೆಜ್ಜೆ ಕುಣಿತಗಳ ಸ್ಪರ್ಧೆ ಆಯೋಜಿಸಲಾಗುತ್ತೆ. ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಹೆಜ್ಜೆಮೇಳದ ಕಲಾತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಪ್ರಸ್ತುತ ಸನ್ನಿವೇಶಗಳಿಗೆ ತಕ್ಕಂತೆಯೇ ಹೆಜ್ಜೆಮೇಳಕ್ಕಾಗಿ ಹಾಡು ರಚಿಸಲಾಗಿರುತ್ತೆ. ಯಾವ ತಂಡ ಪ್ರೇಕ್ಷಕರ ಹಾಗೂ ನಿರ್ಣಾಯಕರ ಮನಸ್ಸು ಗೆಲ್ಲುತ್ತೋ ಆ ತಂಡಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
•ಶೀತಲ ಮುರಗಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.