ಸಿದ್ಧಾರೂಢ ಸಾಹಿತ್ಯ ಸೌರಭ ಕವಿಗೋಷ್ಠಿ
Team Udayavani, May 27, 2019, 2:49 PM IST
ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢರು, ಶ್ರೀ ಗುರುನಾಥಾರೂಢರು ಹಾಗೂ ಅದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿ ಶ್ರೀ ಸಿದ್ಧಾರೂಢ ಸಾಹಿತ್ಯ ಸೌರಭ ಕವಿಗೋಷ್ಠಿಯನ್ನು ಜೂ. 9ರಂದು ಸಂಜೆ 4 ಗಂಟೆಗೆ ಇಲ್ಲಿನ ಶ್ರೀ ಸಿದ್ಧಾರೂಢ ಮಠ ಆವರಣದ ನಿರಂಜನ ಭವನದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧಾರೂಢ ಸಾಹಿತ್ಯ ಸೌರಭದ ಕಾರ್ಯಾಧ್ಯಕ್ಷ ಡಾ| ಗೋವಿಂದ ಮಣ್ಣೂರ, ಸದ್ಗುರು ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಜೀವನ ಚರಿತ್ರೆ ಕೆಲವರಿಗೆ ಮಾತ್ರ ಗೊತ್ತಿದ್ದು, ಅದನ್ನು ಎಲ್ಲರಿಗೂ ತಲುಪಿಸಲು ಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದೆ. ಅತಿಥಿಯಾಗಿ ಸಾಹಿತಿ ರಂಜಾನ್ ದರ್ಗಾ ಆಗಮಿಸಲಿದ್ದಾರೆ. ಸಾಹಿತಿ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಿದ್ಧಾರೂಢ, ಗುರುನಾಥಾರೂಢರ ಕುರಿತು ಸಂಶೋಧನೆ, ಚಟುವಟಿಕೆಗಳು ಇನ್ನಷ್ಟು ಹೆಚ್ಚಿಸಲು ಸಾಹಿತ್ಯ ಚಿಂತಕರಿಗೆ ಅವಕಾಶ ನೀಡಲಾಗುವುದು. ಕವಿಗೋಷ್ಠಿಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು. ಸ್ವತಂತ್ರ ಸಾಹಿತ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ‘ಶ್ರೀಮದ್ ಜಗದ್ಗುರು ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಬಗೆಗೆ, ಅದ್ವೈತ ಸಿದ್ಧಾಂತ’ಕ್ಕೆ ಸಂಬಂಧಿಸಿದ ವಿಷಯವಾಗಿ ಇಲ್ಲವೆ ಯಾವುದೇ ಆಧ್ಯಾತ್ಮಿಕ ತಾತ್ವಿಕ ನೆಲೆಗಟ್ಟಿನ ಮೇಲೆ ರಚಿತವಾಗಿರುವ ತಮ್ಮ ಎರಡು ಸ್ವರಚಿತ ಕವನಗಳನ್ನು ಜೂ. 5ರೊಳಗೆ ಶ್ರೀಮಠದ ಟ್ರಸ್ಟ್ ಕಮಿಟಿಯಲ್ಲಿ ಕೊಟ್ಟು, ಇಲ್ಲವೆ ಇ-ಮೇಲ್: [email protected] ವೆಬ್ಸೈಟ್: www.srisiddharoodhaswamiji.comಗೆ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಯಾವುದೇ ಶುಲ್ಕ ಇಲ್ಲ. ಮಾಹಿತಿಗಾಗಿ ಮೊ: 9448116616, 9886371303 ಸಂಪರ್ಕಿಸಬೇಕು ಎಂದರು.
ನಾರಾಯಣಪ್ರಸಾದ ಪಾಠಕ, ಧರಣೇಂದ್ರ ಜವಳಿ, ಬಸವರಾಜ ಸಂಕನಗೌಡರ, ವಿಜಯಲಕ್ಷ್ಮೀ ಪಾಟೀಲ, ಈರಣ್ಣ ತುಪ್ಪದ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ