ಶಾಮ್‌ಸುಂದರ್‌ ಕೊಲೆಗೆ 3 ತಿಂಗಳ ಹಿಂದೆ ಸ್ಕೆಚ್‌

ರಾಜಕೀಯ ವೈಷಮ್ಯ-ಅಕ್ಕಪಕ್ಕದ ಮನೆ ಜಗಳ ವೈಷಮ್ಯಕ್ಕೆ ಕಾರಣ

Team Udayavani, Sep 30, 2019, 10:08 AM IST

huballi-tdy-3

ಧಾರವಾಡ : ತಾಲೂಕಿನ ಸಲಕಿನಕೊಪ್ಪದ ಬಳಿ ದಾಂಡೇಲಿಯ ಶ್ಯಾಮ್‌ಸುಂದರ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯದ ಪೊಲೀಸ್‌ ಮಹಾನಿರೀಕ್ಷಕ ಎಚ್‌.ಜಿ.ಆರ್‌.ಸುಹಾಸ ಹೇಳಿದರು.

ನಗರದ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ರವಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಂಡೇಲಿಯ ಸುಬ್ರಮಣ್ಯ ಸಮರೂ (39), ರಾಜೇಶ ರುದ್ರಪಾಟಿ (33), ಗೌರೀಶ ಸುಳ್ಳದ (29), ಉಮೇಶ ಎಸ್‌. (39) ಬಂಧಿತರು. ಈ ಪೈಕಿ ಸುಬ್ರಮಣ್ಯನೇ ನಾಡಪಿಸ್ತೂಲ್‌ನಿಂದ ಶ್ಯಾಮಸುಂದರ್‌ಗೆ ಗುಂಡಿಕ್ಕಿದ್ದು, ರಾಜೇಶ ಪಿಸ್ತೂಲ್‌ ಪೂರೈಸಿದಾತ. ಇದು ಹಳೆಯ ರಾಜಕೀಯ ವೈಷಮ್ಯ, ಕೆಲ ಗಲಾಟೆಗಳ ಹಿನ್ನೆಲೆಯಲ್ಲಿ ಈ ಕೊಲೆ ಆಗಿದ್ದು, ಕೊಲೆಯಾದ 72 ಗಂಟೆಯೊಳಗೆ ನಾವು ರಚಿಸಿದ್ದ 7 ತನಿಖಾ ತಂಡಗಳು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ ಎಂದರು.

ಸೆ.25 ರಂದು ಬೆಳಿಗ್ಗೆ ದಾಂಡೇಲಿಯಿಂದಲೇ ಬೈಕ್‌ ಮೇಲೆ ಬಂದಿದ್ದ ಸುಬ್ರಮಣ್ಯ, ಗೌರೀಶ, ಉಮೇಶ ಬೆನ್ನಟ್ಟಿಕೊಂಡು ಬಂದಿದ್ದು, ಕೊಲೆ ಮಾಡಿದ ಬಳಿಕ ಕಲಘಟಗಿಗೆ ತೆರಳಿ ಅಲ್ಲಿ ಬಟ್ಟೆ ಬದಲಿಸಿದ್ದರು.

ಇದಲ್ಲದೇ ದಾಡಿ, ಕಟಿಂಗ್‌ ಮಾಡಿಸಿಕೊಂಡು ಚಹರೆ ಬದಲಾಯಿಸಿಕೊಂಡು ಮತ್ತೆ ದಾಂಡೇಲಿಗೆ ಬಂದು ಸೇರಿದ್ದರು. ಈ ಆರೋಪಿಗಳು ಬಳಸಿದ್ದ ಬೈಕ್‌, ಕಾರು ವಶಪಡಿಸಿಕೊಂಡಿದ್ದು, ಕೊಲೆಗೆ ಬಳಸಿರುವ ನಾಡ ಪಿಸ್ತೂಲ್‌ ಇನ್ನಷ್ಟೇ ಪತ್ತೆ ಹಚ್ಚಿ ವಶಪಡಿಸಿಕೊಳ್ಳಬೇಕಿದೆ ಎಂದರು.

ಎಲ್ಲ ಆರೋಪಿಗಳ ಮೇಲೆ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಿಲ್ಲ. ರಾಜಕೀಯ ವೈಷಮ್ಯ, ಅಕ್ಕಪಕ್ಕದ ಮನೆಯ ಜಗಳಗಳು ವೈಯಕ್ತಿಕ ವೈಷಮ್ಯಕ್ಕೆ ಕಾರಣವಾಗಿತ್ತು. ಹೀಗಾಗಿ ರಾಜೇಶ ಹಾಗೂ ಕೊಲೆಯಾದ ಶ್ಯಾಮಸುಂದರ ಕುಟುಂಬ ಮಧ್ಯೆ ಗಲಾಟೆಗಳು ಆಗಿದ್ದವು. ಈ ಮಧ್ಯೆಹಣದ ಅಡಚಣೆಯಲ್ಲಿದ್ದ ಉಳಿದ ಆರೋಪಿಗಳಿಗೆ ರಾಜೇಶ ಹಣ ಸಹಾಯ ಮಾಡಿದ್ದ. ಈ ವೇಳೆ ಕೊಲೆಗೂ ಮುನ್ನ 2-3 ತಿಂಗಳ ಹಿಂದೆ ಶ್ಯಾಮಸುಂದರ್‌ನ ಕೈ-ಕಾಲು ಮುರಿಯಲು ಪ್ಲಾನ್‌ ಹಾಕಲಾಗಿತ್ತು. ಆದರೆ ಕೊನೆಗೆ ರಾಜೇಶನ ಅಣತಿಯಂತೆ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಎರಡು ಟೆಕ್ನಿಕಲ್‌ ತಂಡ ಸೇರಿ ಒಟ್ಟು 7 ತಂಡಗಳನ್ನು ಪ್ರಕರಣದ ಪತ್ತೆ ಹಚ್ಚಲು ರಚಿಸಲಾಗಿತ್ತು. ಈ ತಂಡಗಳು ದಾಂಡೇಲಿಯಲ್ಲಿ ಮೊಕ್ಕಾಂ ಹೂಡಿ, ಕಾರು ಬೆನ್ನಟ್ಟಿದ ಬೈಕ್‌ ಸೆರೆ ಆಗಿರುವ ಸಿಸಿ ಕ್ಯಾಮರಾ ಪರಿಶೀಲಿಸಿತ್ತು. ಈ ಪರಿಶೀಲನೆಯಲ್ಲಿ ಬೈಕ್‌ ಮೇಲೆ ಹೊರಟಿದ್ದ ಮೂವರು ಕಂಡು ಬಂದಿದ್ದರೆ ನಮ್ಮ ಇಲಾಖೆಯ 70 ಜನ ಸಿಬ್ಬಂದಿಗಳ ದಾಂಡೇಲಿ ಭಾಗದಲ್ಲಿ ಮಾಹಿತಿ ಕಲೆ ಹಾಕಿತ್ತು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ವರ್ತಿಕ ಕಟಿಯಾರ್‌, ಡಿವೈಎಸ್‌ಪಿ ರಾಮನಗೌಡ ಹಟ್ಟಿ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.