ಕೆಲ ರೈಲು ಸೇವೆ ಸಂಪೂರ್ಣ ರದ್ದು
Team Udayavani, May 21, 2019, 6:10 AM IST
ಹುಬ್ಬಳ್ಳಿ: ದಾನಾಪುರ ನಿಲ್ದಾಣದಲ್ಲಿ ಜೂ.19ರವರೆಗೆ ನಾನ್ ಇಂಟರ್ಲಾಕಿಂಗ್ ಕಾರ್ಯ ಕೈಗೊಳ್ಳುತ್ತಿರುವುದರಿಂದ ಕೆಲ ರೈಲುಗಳ ಸೇವೆ ಸಂಪೂರ್ಣ ರದ್ದುಗೊಳಿಸಿದ್ದರೆ, ಕೆಲ ರೈಲುಗಳ ಸಮಯ ಪರಿಷ್ಕರಿಸಲಾಗಿದೆ. ಜೂ.10 ಹಾಗೂ 14ರಂದು ಪಾಟಲಿಪುತ್ರ-ಯಶವಂತಪುರ (22351) ಎಕ್ಸ್ಪ್ರೆಸ್ ರೈಲು ಸೇವೆ ರದ್ದುಪಡಿಸಲಾಗಿದೆ. ಜೂ.10 ಹಾಗೂ 17ರಂದು ಯಶವಂತಪುರ-ಪಾಟಲಿಪುತ್ರ (22352) ರೈಲು ಸೇವೆ ರದ್ದುಗೊಳಿಸಲಾಗಿದೆ. ಜೂ.15ರಂದು ಪಾಟ್ನಾ-ವಾಸ್ಕೋಡಗಾಮ (12742) ಎಕ್ಸ್ಪ್ರೆಸ್ ರೈಲು ಸಂಜೆ 4 ಗಂಟೆ ಬದಲು ಸಂಜೆ 4:30ಕ್ಕೆ ಪಾಟ್ನಾದಿಂದ ಪ್ರಯಾಣ ಬೆಳೆಸುವುದು.
ಭಾಗಶಃ ರದ್ದು: ಜೋಧಪುರ ನಿಲ್ದಾಣದಲ್ಲಿ ಮೇ 25ರವರೆಗೆ ವಾಶೇಬಲ್ ಅಪ್ರಾನ್ ನಿರ್ಮಾಣದ ಪ್ರಯುಕ್ತ ಕೆಲ ರೈಲುಗಳ ಸಂಚಾರ ಭಾಗಶಃ ರದ್ದುಪಡಿಸಲಾಗಿದೆ. ಮೇ 23 ಹಾಗೂ 25ರಂದು ಜೋಧಪುರದಿಂದ ಹೊರಡುವ ಜೋಧಪುರ-ಬೆಂಗಳೂರು ನಗರ (16507) ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಜೋಧಪುರದಿಂದ ಭಗತ್ ಕಿ ಕೋಠಿ ನಿಲ್ದಾಣಗಳ ಮಧ್ಯೆ; ಮೇ 20 ಹಾಗೂ 22ರಂದು ಬೆಂಗಳೂರು ನಗರ-ಜೋಧಪುರ ಎಕ್ಸ್ಪ್ರೆಸ್ (16508) ರೈಲು ಸಂಚಾರವನ್ನು ಭಗತ್ ಕಿ ಕೋಠಿಯಿಂದ ಜೋಧಪುರವರೆಗೆ; 22ರಂದು ಜೋಧಪುರದಿಂದ ಪ್ರಯಾಣ ಬೆಳೆಸುವ ಜೋಧಪುರ-ಬೆಂಗಳೂರು ನಗರ ಎಕ್ಸ್ಪ್ರೆಸ್ (16533) ರೈಲು ಸೇವೆಯನ್ನು ಜೋಧಪುರದಿಂದ ಭಗತ್ ಕಿ ಕೋಠಿವರೆಗೆ ಭಾಗಶಃ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..