ಹುಬ್ಬಳ್ಳಿ : ವ್ಯಕ್ತಿಗೆ ಕೃತಕ ತಲೆ ಬುರುಡೆ ಯಶಸ್ವಿ ಜೋಡಣೆ
Team Udayavani, Apr 26, 2021, 7:18 PM IST
ಹುಬ್ಬಳ್ಳಿ: ಸುಮಾರು 52 ವರ್ಷ ವಯಸ್ಸಿನ ಸರಕಾರಿ ನೌಕರರೊಬ್ಬರಿಗೆ ಟೈಟಾನಿಯಂ ಕೃತಕ ತಲೆಬುರುಡೆಯನ್ನು ಇಲ್ಲಿನ ಬಾಲಾಜಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಕೆ ಮಾಡಿದ್ದಾರೆಂದು ಆಸ್ಪತ್ರೆ ಚೇರ್ಮನ್ ಹಾಗೂ ನರರೋಗ ತಜ್ಞ ಡಾ| ಕ್ರಾಂತಿಕಿರಣ ತಿಳಿಸಿದ್ದಾರೆ.
ಮೆದುಳಿನ ಸ್ಟ್ರೋಕ್ನಿಂದ ಕೋಮಾ ಸ್ಥಿತಿಯಲ್ಲಿ ನೌಕರ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನ ಬಲಭಾಗ ಒಂದೆಡೆಗೆ ತೀವ್ರ ಬಾವು ಬಂದ ಪರಿಣಾಮದಿಂದ ಚಿಂತಾಜನಕ ಸ್ಥಿತಿಯಲ್ಲಿ ಇದ್ದರು. ಬಲಭಾಗದ ಬುರುಡೆ ಕತ್ತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕತ್ತರಿಸಿದ ತಲೆ ಬುರುಡೆ ಜೋಡಿಸಿದಲ್ಲಿ ಮೆದುಳಿಗೆ ಹೆಚ್ಚಿನ ಭಾರವಾಗುವ ಸಾಧ್ಯತೆಯಿಂದ ಶಸ್ತ್ರಚಿಕಿತ್ಸೆ ಭಾಗವನ್ನು ತೊಡೆಭಾಗದ ಚರ್ಮದಿಂದ ಮುಚ್ಚಿಡಲಾಗಿತ್ತು.
ವಿಶೇಷ ಲೋಹದಿಂದ ತಯಾರಿಸಲಾದ ಹಾಗೂ ಸಹಜ ಮೂಳೆಗಿಂತ ಹೆಚ್ಚು ಶಕ್ತಿಯಾಲಿಯಾದ ಟೈಟಾನಿಯಂ ಕೃತಕ ಬುರುಡೆಯನ್ನು ಬೆಂಗಳೂರಿನ ಕಂಪೆನಿಯಿಂದ ತರಿಸಿ ಅಳವಡಿಸಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ರೋಗಿ ಚೇತರಿಸಿಕೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ