ಕ್ಲೋಜಿಂಗ್‌ ಡ್ಯಾಮ್‌ಗೆ ಬೇಕು ಇಚ್ಛಾ ಶಕ್ತಿ


Team Udayavani, Mar 4, 2020, 11:09 AM IST

huballi-tdy-3

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಹರಿಯುವ ಕೆಲ ಜೀವನದಿಗಳ ನೀರು ಹೆಚ್ಚಿನ ಬಳಕೆ ಇಲ್ಲದೆ ಸಮುದ್ರ ಸೇರುತ್ತಿವೆ. ನೀರಿನ ಬಳಕೆ ನಿಟ್ಟಿನಲ್ಲಿ ಕೆಲವೊಂದು ನದಿಗಳಿಗೆ ಕ್ಲೋಜಿಂಗ್‌ ಡ್ಯಾಂ(ನದಿ ಇನ್ನೊಂದು ನದಿ ಸೇರುವ ಮುನ್ನ ಪ್ರದೇಶದಲ್ಲಿ)ನಿರ್ಮಾಣಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಇದರಿಂದ ನೀರಾವರಿ ಸೌಲಭ್ಯ, ಕುಡಿಯುವ ನೀರು ಪೂರೈಕೆಗೆ ಸಹಕಾರಿ ಆಗಲಿದೆ.

ನದಿಗಳ ನೀರು ಬಳಕೆ ಹಾಗೂ ಪ್ರವಾಹ ನಿಯಂತ್ರಣ ದೃಷ್ಟಿಯಿಂದಲೂ ಕ್ಲೋಜಿಂಗ್‌ ಡ್ಯಾಂ ನಿರ್ಮಾಣ ಪ್ರಯೋಜನಕಾರಿ ಆಗಲಿದೆ ಎಂಬುದು ಕೆಲ ಎಂಜಿನಿಯರ್‌ಗಳ ಅಭಿಮತ. ಡ್ಯಾಂಗಳ ನಿರ್ಮಾಣಕ್ಕೆ ಯಾವುದೇ ಹಳ್ಳಿ-ನಗರ, ಭೂಮಿ ಮುಳುಗಡೆ ಆಗದಂತೆಯೇ ಕಾಮಗಾರಿ ಕೈಗೊಳ್ಳಬಹುದು ಎಂಬುದಕ್ಕೆ ತೆಲಂಗಾಣದಲ್ಲಿ ಕೈಗೊಂಡ ಕಾಳೇಶ್ವರಂ ಯೋಜನೆ ಮಾದರಿಯಾಗಿದೆ. ಅದೇ ಮಾದರಿಯನ್ನು ನಮ್ಮಲ್ಲಿಯೂ ಅಳವಡಿಕೆಗೆ ಸಾಧ್ಯವೇ ಎಂಬುದರ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆ ಇದೆ.

ಪ್ರವಾಹ ತಡೆ ಸಾಧ್ಯ: ಭೀಮಾ ಮತ್ತು ಘಟಪ್ರಭಾ ನದಿಗಳು ಕೃಷ್ಣಾ ನದಿಯ ಪ್ರಮುಖ ಉಪ ನದಿಗಳಾಗಿವೆ. ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ಮಳೆ ಬಿದ್ದರೆ ಕೃಷ್ಣಾ ನದಿ ಪ್ರವಾಹದಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಭೀಮಾ ನದಿ ಮಹಾರಾಷ್ಟ್ರದ ಸೋಲಾಪುರ, ರಾಜ್ಯದ ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ, ಘಟಪ್ರಭಾ ನದಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸುವುದಲ್ಲದೆ, ಕೃಷ್ಣಾಕ್ಕೆ ಸೇರಿ ಪ್ರವಾಹ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಕೊಡುಗೆ ನೀಡುತ್ತಿವೆ. ಈ ಎರಡು ನದಿಗಳಿಗೆ ಕ್ಲೋಜಿಂಗ್‌ ಡ್ಯಾಂ ನಿರ್ಮಾಣಕ್ಕೆ ಮುಂದಾದರೆ ಪ್ರವಾಹ ಪ್ರಮಾಣ ನಮ್ಮಲ್ಲಿಯಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ನಿಯಂತ್ರಣಕ್ಕೆ ಸಾಧ್ಯವಾಗಲಿದೆ. ಮುಖ್ಯವಾಗಿ ಕಲಬುರಗಿ, ಬೀದರ, ರಾಯಚೂರು ಭಾಗಗಳಿಗೆ ಇನ್ನಷ್ಟು ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ. ಭೀಮಾ ನದಿಗೆ ಕಲಬುರಗಿ ಜಿಲ್ಲೆ ನೆಲೋಗಿಯಲ್ಲಿ ಜಲಾಶಯ ನಿರ್ಮಾಣಕ್ಕೆ ಯೋಜಿಸಲಾಗಿದೆಯಾದರೂ ಅದು ಇಂದಿಗೂ ಸಾಕಾರಗೊಂಡಿಲ್ಲ. ಸಮರ್ಪಕ ನೀರಿನ ಬಳಕೆಯೂ ಆಗಿಲ್ಲ. ಜತೆಗೆ ಮಹಾರಾಷ್ಟ್ರದವರು ಭೀಮಾ ನದಿ ನೀರನ್ನು ಸುರಂಗ ಕಾಲುವೆ ಮೂಲಕ ತಿರುಗಿಸಿಕೊಂಡು ಪ್ರಯೋಜನ ಪಡೆಯುತ್ತಿದ್ದಾರೆ.

ಸಾಧ್ಯಾಸಾಧ್ಯತೆ ಅಧ್ಯಯನ ಅವಶ್ಯ: ಭೀಮಾ ನದಿ ಮಹಾರಾಷ್ಟ್ರದ ಭೀಮಾಶಂಕರ ಎಂಬ ಪ್ರಮುಖ ಧಾರ್ಮಿಕ ಸ್ಥಳದ ಅರಣ್ಯ ಪ್ರದೇಶದಲ್ಲಿ ಜನಿಸುತ್ತಿದ್ದು, ರಾಯಚೂರು ಜಿಲ್ಲೆಯ ಕಡೂರು ಬಳಿ ಕರ್ನಾಟಕ -ತೆಲಂಗಾಣ ಗಡಿಭಾಗದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ಭೀಮಾ ನದಿ ಸುಮಾರು 861 ಕಿಮೀ ದೂರ ಹರಿಯುತ್ತಿದೆ. ಭೀಮಾ ನದಿಗೆ ಅಮರ್ಜಾ, ಗಂಡೋರಿ ಹಳ್ಳ, ಮುಲ್ಲಾಮಾರಿ, ಬೆಣ್ಣೆತೋರಾ ಹಾಗೂ ಕಾಗಿನಾ ಉಪ ನದಿಗಳಿವೆ. ಕಾಗಿನಾ ನದಿ ಸೇರುವ ಜಾಗದಲ್ಲಿ ಇದಕ್ಕೆ ಜಲಾಶಯ ನಿರ್ಮಾಣ ಮಾಡಬಹುದಾಗಿದೆ ಎಂದು ನಿವೃತ್ತ ಎಂಜಿನಿಯರ್‌ರೊಬ್ಬರು ಕಳೆದ ಏಳೆಂಟು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದಾರೆ. ಭೀಮಾ ನದಿಗೆ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಿಸಿದರೆ, ಸುಮಾರು 10 ಎಕರೆಗೆ ನೀರು ಒದಗಿಸಬಹುದಾಗಿದೆ ಎಂಬುದನ್ನು ಅವರು ತಮ್ಮ ಯೋಜನಾ ವರದಿಯಲ್ಲಿ ನಮೂದಿಸಿದ್ದಾರೆ.

ಘಟಪ್ರಭಾ ನದಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೀವನದಿಗಳಲ್ಲಿ ಒಂದಾಗಿದ್ದು, ಕೃಷ್ಣಾ ನದಿಗೆ ಪ್ರಮುಖ ಉಪ ನದಿಯಾಗಿದೆ. ಈ ನದಿ ಸುಮಾರು 8,829 ಚದರ ಕಿಮೀ ನದಿ ಪಾತ್ರ ಹೊಂದಿದೆ. 1977ರಲ್ಲಿ ಬೆಳಗಾವಿ ಜಿಲ್ಲೆ ಹಿಡಕಲ್‌ನಲ್ಲಿ ಈ ನದಿಗೆ ಜಲಾಶಯ ನಿರ್ಮಾಣ ಮಾಡಿದ್ದು ಬಿಟ್ಟರೆ ಬೇರಲ್ಲೂ ಜಲಾಶಯಗಳ ನಿರ್ಮಾಣ ಆಗಿಲ್ಲ. ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಈ ನದಿಯ ಪ್ರಮುಖ ಉಪ ನದಿಗಳಾಗಿವೆ. ಚಿಕ್ಕಸಂಗಮ ಬಳಿ ಘಟಪ್ರಭಾ ನದಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ. ಬಾಗಲಕೋಟೆ ಜಿಲ್ಲೆ ಲೋಕಾಪುರ ದಾಟಿದ ನಂತರ ಸಣ್ಣ ಪ್ರಮಾಣದ ಜಲಾಶಯ ನಿರ್ಮಾಣ ಮಾಡಬಹುದಾಗಿದೆ ಎಂಬುದ ಎಂಜಿನಿಯರ್‌ಗಳ ಅಭಿಮತ.

ಏನಿದು ತೆಲಂಗಾಣ ಮಾದರಿ? : ಜಲಾಶಯ ನಿರ್ಮಾಣ ಎಂದ ಕೂಡಲೇ ಮೊದಲ ಚಿತ್ರಣ ಹಳ್ಳಿ, ಪಟ್ಟಣ-ನಗರಗಳು, ಕೃಷಿ ಭೂಮಿ ಮುಳುಗಡೆ, ನಿರ್ಮಾಣ ವೆಚ್ಚ, ಪುನರ್ವಸತಿ ವೆಚ್ಚ ಇತ್ಯಾದಿ ಮೂಡುತ್ತದೆ. ಆದರೆ, ತೆಲಂಗಾಣದಲ್ಲಿ ಕೈಗೊಂಡಿರುವ ಕಾಳೇಶ್ವರಂ ಯೋಜನೆ ಇವೆಲ್ಲವನ್ನು ಇಲ್ಲವಾಗಿ ವಿಶ್ವಕ್ಕೆ ಮಾದರಿ ರೂಪದಲ್ಲಿ ಗೋಚರಿಸುತ್ತಿದೆ. ತೆಲಂಗಾಣದಲ್ಲಿ ಗೋದಾವರಿ-ಪ್ರಾಣಹಿತ ನದಿಗಳ ಸಂಗಮ ನೀರನ್ನು ಬಳಸಿಕೊಂಡು ಕಾಳೇಶ್ವರಂ ಮೆಗಾ ಪ್ರೊಜೆಕ್ಟ್ ಕೈಗೊಂಡಿದೆ. ಅಂದಾಜು 80,200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಸುಮಾರು 240 ಟಿಎಂಸಿ ಅಡಿಯಷ್ಟು ನೀರು ಬಳಸಿಕೊಂಡು ಇದರಲ್ಲಿ ಸುಮಾರು 169 ಟಿಎಂಸಿ ಅಡಿ ನೀರನ್ನು ಅಂದಾಜು 45 ಲಕ್ಷ ಎಕರೆಗೆ ನೀರಾವರಿ ಒದಗಿಸಲು, 40 ಟಿಎಂಸಿ ಅಡಿ ನೀರನ್ನು ಹೈದರಾಬಾದ್‌ ಸೇರಿದಂತೆ ನಗರಗಳು, ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ, 16 ಟಿಎಂಸಿ ಅಡಿ ನೀರು ಕೈಗಾರಿಕೆಗೆ ನೀಡಲಾಗುತ್ತಿದೆ. ಒಂದು ಸೆಕೆಂಡ್‌ಗೆ 60 ಸಾವಿರ ಲೀಟರ್‌ ನೀರು ಮೇಲಕ್ಕೆತ್ತುವ ಸಾಮರ್ಥ್ಯದ ಬಾಹುಬಲಿ ಪಂಪ್‌ಗ್ಳನ್ನು ಅಳವಡಿಸಲಾಗಿದೆ. ಇಷ್ಟಾದರೂ ಯೋಜನೆಗಾಗಿ ಒಂದೇ ಒಂದು ಹಳ್ಳಿ ಮುಳುಗಡೆಯಾಗಿಲ್ಲ. ಹೆಚ್ಚಿನ ಭೂ ಸ್ವಾಧೀನ ಆಗಿಲ್ಲ. ಪುನರ್ವಸತಿ ಸಮಸ್ಯೆ ಎದುರಾಗಿಲ್ಲ. ನದಿಯ ಎರಡು ಬದಿ ತಡೆಗೋಡೆ ನಿರ್ಮಾಣದ ಮೂಲಕ ನದಿಯಲ್ಲಿಯೇ ಆಳ ರೂಪದಲ್ಲಿ ನೀರು ಸಂಗ್ರಹಿಸುವ, ಆ ನೀರನ್ನು ಹಿಮ್ಮುಖವಾಗಿ ಪಂಪ್‌ ಮಾಡುವ ಮೂಲಕ ನೀರು ಪಡೆಯಲಾಗುತ್ತದೆ. ವಿವಿಧ 9 ಬ್ಯಾರೇಜ್‌ಗಳಲ್ಲಿ ಸುಮಾರು 147 ಟಿಎಂಸಿ ಅಡಿಯಷ್ಟು ನೀರು ಲೈವ್‌ ಸ್ಟೋರೇಜ್‌ ಮಾಡಲಾಗುತ್ತಿದೆ. ಕಾಳೇಶ್ವರಂ ಯೋಜನೆಯ ತಂತ್ರಜ್ಞಾನ ನಮಗೆ ಎಷ್ಟು ಪೂರಕವಾಗಲಿದೆಯೋ ಅಷ್ಟನ್ನು ಬಳಕೆಗೆ ಮುಂದಾಗಬೇಕಾಗಿದೆ. ಹಳ್ಳಿ-ಪ್ರದೇಶ ಮುಳುಗಡೆ ಇಲ್ಲದೆ, ಪುನರ್ವಸತಿ ಸಮಸ್ಯೆ ಎದುರಾಗದ ರೀತಿಯಲ್ಲಿ ಕ್ಲೋಜಿಂಗ್‌ ಡ್ಯಾಂಗಳ ನಿರ್ಮಾಣ ಸಾಧ್ಯತೆ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಭವಿಷ್ಯದ ದೃಷ್ಟಿಯಿಂದ ಇದು ಪ್ರಯೋಜನಕಾರಿ ಆಗಬಲ್ಲದಾಗಿದೆ.

ಭೀಮಾ ನದಿಗೆ ಜಲಾಶಯ ನಿರ್ಮಾಣದಿಂದ ಕಲಬುರಗಿ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ನೀರಾವರಿಗೆ, ಕುಡಿಯಲು ನೀರು ನೀಡಬಹುದು. ಈ ಉದ್ದೇಶದಿಂದಲೇ ಸುಮಾರು ಎಂಟು ವರ್ಷಗಳ ಹಿಂದೆಯೇ ಯೋಜನೆ ತಯಾರಿಸಿದ್ದೇನೆ. ಅದೇ ರೀತಿ ಘಟಪ್ರಭಾ ನದಿಗೂ ಸಣ್ಣ ಮಟ್ಟದ ಕ್ಲೋಜಿಂಗ್‌ ಡ್ಯಾಂ ನಿರ್ಮಾಣ ಮಾಡಬಹುದಾಗಿದೆ. – ಪ್ರಕಾಶ ಕುದರಿ, ನಿವೃತ್ತ ಉಪ ಮುಖ್ಯ ಎಂಜಿನಿಯರ್‌

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.