ಜೈನಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ: ಜೈನಮುನಿ
Team Udayavani, Jan 26, 2020, 10:27 AM IST
ಹುಬ್ಬಳ್ಳಿ: ಜೈನ ಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ತ್ಯಾಗದ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದೇ ನಮ್ಮ ಧರ್ಮ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಮಹಾರಾಜ್ ಹೇಳಿದರು.
ಸಂಸ್ಕಾರ ನಗರದಲ್ಲಿ ನಡೆಯುತ್ತಿರುವ ಮರ್ಯಾದಾ ಮಹೋತ್ಸವದಲ್ಲಿ ಶನಿವಾರ ಜರುಗಿದ ಸಂತರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭೋಗವಿಲ್ಲದ ಸಂದರ್ಭದಲ್ಲಿ ತ್ಯಾಗ ಮಾರ್ಗದಲ್ಲಿ ಸಾಗುವವನು ತ್ಯಾಗಿಯಲ್ಲ. ಭೋಗವಿದ್ದರೂ ಅದನ್ನು ಅನುಭವಿಸದೇ ತಿರಸ್ಕರಿಸುವವನೇ ನಿಜವಾದ ತ್ಯಾಗಿ ಎಂದರು.
ತ್ಯಾಗಕ್ಕೆ ಸಮಾನವಾದುದು ಮತ್ತೂಂದಿಲ್ಲ. ಜೀವನದಲ್ಲಿ ಶಾಂತಿ-ಸಮಾಧಾನ ಪಡೆಯಲು ತ್ಯಾಗ ಸಹಾಯಕವಾಗುತ್ತದೆ. ಅಹಿಂಸಾ ಪರಮೋಧರ್ಮ. ಹಿಂಸೆಯನ್ನು ತ್ಯಾಗ ಮಾಡಬೇಕು. ಸಣ್ಣ ಕ್ರಿಮಿ ಕೀಟಗಳ ಬಗ್ಗೆಯೂ ಪ್ರೀತಿ ಹೊಂದಿರಬೇಕು. ಎಲ್ಲ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು ಎಂಬುದನ್ನೇ ಜೈನ ಧರ್ಮ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಶ್ರೇಷ್ಠ ದಾನ ಅಭಯದಾನ. ಮಿಥ್ಯೆಯನ್ನು ತ್ಯಾಗ ಮಾಡಬೇಕು. ರಾತ್ರಿ ಭೋಜನವನ್ನು ತ್ಯಾಗ ಮಾಡಬೇಕು. ಕಟು ಭಾಷೆ, ಹಿಂಸಾ ಭಾಷೆಯನ್ನು ತ್ಯಾಗ ಮಾಡಬೇಕು. ತ್ಯಾಗಮಯ ಜೀವನವನ್ನು ರೂಪಿಸಿಕೊಳ್ಳಬೇಕು. ಸಂಯಮ ಎಂಬುದು ರತ್ನಕ್ಕೆ ಸಮ. ಅದಕ್ಕೆ ಸಮನಾದುದು ಯಾವುದೂ ಇಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಲಿ: ವರೂರು ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ಮಾತನಾಡಿ, ಆಚಾರ್ಯ ಮಹಾಶ್ರಮಣ ಮಹಾರಾಜರು ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಬೇಕು. ಇಲ್ಲಿನ ಭಕ್ತರು ಅವರಿಗೆ ಚಾತುರ್ಮಾಸ್ಯದ ಎಲ್ಲ ವ್ಯವಸ್ಥೆ ಮಾಡಿಕೊಡಲು ಶಕ್ತರಾಗಿದ್ದಾರೆ. ಧರ್ಮದ ಎಲ್ಲ ಜನರ ಪರವಾಗಿ ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ತ್ಯಾಗಕ್ಕೂ ಜೈನ ಧರ್ಮಕ್ಕೂ ಅನ್ಯೋನ್ಯ ಸಂಬಂಧವಿದೆ. ಬೆಣ್ಣೆಯಲ್ಲಿರುವ ತುಪ್ಪದಂತೆ ಜೈನಧರ್ಮದಲ್ಲಿ ತ್ಯಾಗ ಅಡಕವಾಗಿದೆ. ನಮ್ಮಲ್ಲಿರುವ ಇಚ್ಛೆಗಳನ್ನು ತ್ಯಾಗ ಮಾಡುವುದು ಸಾಧನೆಗೆ ಪೂರಕವಾಗುತ್ತದೆ. ಅಂತರಂಗ ತ್ಯಾಗ ಹಾಗೂ ಬಹಿರಂಗ ತ್ಯಾಗ ಎರಡೂ ಮುಖ್ಯ ಎಂದು ನುಡಿದರು.
ಆಚಾರ್ಯ ಶ್ರೀ ಅಜಿತ ಶೇಖರ ಸುರೀಶ್ವರಜಿ ಮಾತನಾಡಿ, ತ್ಯಾಗದಲ್ಲಿ ಎರಡು ಬಗೆ. ಸಂಸಾರ ತ್ಯಾಗ ಹಾಗೂ ಪರಮಾರ್ಥ ತ್ಯಾಗ. ಸಂಸಾರ ತ್ಯಾಗದಲ್ಲಿ ಸಂತೋಷ, ರಂಜನೆಯನ್ನು ತ್ಯಾಗ ಮಾಡುವುದು ಉಪಭೋಗ. ಪರಿವಾರವನ್ನು ತ್ಯಾಗ ಮಾಡುವುದು ಪರಿಭೋಗ. ಸಮಾಜಕ್ಕಾಗಿ ತ್ಯಾಗ ಮಾಡುವುದು ಉಪಯೋಗವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಮೂರುಜನ ಆಚಾರ್ಯರು ತ್ಯಾಗದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ. ಆಚಾರ್ಯರ ಸಂದೇಶಗಳು ಎಲ್ಲರಿಗೆ ಮುಟ್ಟಿದಾಗ ನಮ್ಮ ದೇಶ ಶಾಂತಿ- ಸೌಹಾರ್ದತೆಯ ದೇಶವಾಗುತ್ತದೆ ಎಂದು ನುಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿದರು. ಮಹೇಂದ್ರ ಸಿಂಘಿ, ಪುಖರಾಜ ಸಂಘವಿ, ಮಹಾವೀರ ಕುಂದೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
ನಾಮಪತ್ರ ಹಿಂದೆ ತೆಗೆದುಕೊಂಡಾಕ್ಷಣ ನನ್ನ ಧರ್ಮ ಯುದ್ಧ ನಿಂತಿಲ್ಲ: ದಿಂಗಾಲೇಶ್ವರ ಸ್ವಾಮೀಜಿ
ಐಎನ್ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ
ನೇಹಾ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ: ಜೆ.ಪಿ.ನಡ್ಡಾ
Neha ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್: ಮೌನ ಮೆರವಣಿಗೆ
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ