ಸಾಂಕ್ರಾಮಿಕ ಮಹಾಮಾರಿಗಳ ಆಕ್ರಮಣ
| ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲೇ ಪೀಡಿತರು ಹೆಚ್ಚು | ವಾಣಿಜ್ಯ ನಗರಿಯಲ್ಲಿ ಡೆಂಘೀ ಆತಂಕದ ಛಾಯೆ
Team Udayavani, Jul 31, 2019, 9:35 AM IST
ಧಾರವಾಡ: ರೋಗಿಗಳಿಂದ ಭರ್ತಿ ಆಗಿರುವ ಜಿಲ್ಲಾಸ್ಪತ್ರೆ ಹಾಸಿಗೆಗಳು.
ಧಾರವಾಡ: ಮಳೆಗಾಲದ ಜಿಟಿ ಜಿಟಿ ಮಳೆಯೊಂದಿಗೆ ಸಾಂಕ್ರಾಮಿಕ ರೋಗಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಆತಂಕದ ಛಾಯೆ ಆವರಿಸುವಂತಾಗಿದೆ.
ಜನೇವರಿಯಿಂದ ಜೂ. 7ರ ವರೆಗೆ ಮಲೇರಿಯಾ ರೋಗ 4, ಡೆಂಘೀ 7, ಚಿಕೂನ್ಗುನ್ಯಾ 8 ಜನರಲ್ಲಿ ಪತ್ತೆ ಆಗಿತ್ತು. ಈಗ ಬರೀ ಎರಡೇ ತಿಂಗಳಲ್ಲಿ ಮಳೆಗಾಲದ ಹೊಡೆತಕ್ಕೆ ಈ ಸಂಖ್ಯೆ ಐದಾರು ಪಟ್ಟು ಹೆಚ್ಚಳವಾಗಿದೆ. ಜು. 30ರ ವರೆಗೆ 38 ಜನರಲ್ಲಿ ಡೆಂಘಿ, 31 ಜನರಲ್ಲಿ ಚಿಕೂನ್ಗುನ್ಯಾ ಹಾಗೂ 5 ಜನರಲ್ಲಿ ಮಲೇರಿಯಾ ದೃಢಪಟ್ಟಿದೆ. ಈ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಆದರೆ ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿಯೇ ಹೆಚ್ಚು ಸಾಂಕ್ರಾಮಿಕ ರೋಗಗಳು ಪ್ರತಿವರ್ಷದಂತೆ ಈ ಸಲವೂ ಕಂಡುಬಂದಿವೆ.
ಮಳೆಗಾಲದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಒಡೆದು ಚರಂಡಿ ನೀರು ಸೇರುವಿಕೆ, ಕಸ-ತಾಜ್ಯವಸ್ತುಗಳ ನಿರ್ವಹಣೆ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ಸೇರಿದಂತೆ ನಾನಾ ಕಾರಣಗಳಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ. ಮಳೆಗಾಲಕ್ಕೂ ಮುನ್ನ ಫಾಗಿಂಗ್ ಮಾಡುವಲ್ಲಿ ಪಾಲಿಕೆ ಲಕ್ಷ್ಯ ವಹಿಸದ ಕಾರಣ ಸಾಂಕ್ರಾಮಿಕ ರೋಗಗಳು ಅವಳಿ ನಗರದಲ್ಲಿ ಹೆಚ್ಚಾಗುವಂತಾಗಿದೆ. ಸದ್ಯ ಪಾಲಿಕೆ ಎಚ್ಚೆತ್ತು ಫಾಗಿಂಗ್ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ