ಪಾತಾಳಕ್ಕೆ ಕುಸಿದ ಎಸ್ಸೆಸ್ಸೆಲ್ಸಿ ಫಲಿತಾಂಶ
ಫಲಿತಾಂಶ •ಜಿಲ್ಲೆಗೆ 13ರಿಂದ 28ನೇ ರ್ಯಾಂಕ್•ಕಳೆದ ಸಲಕ್ಕಿಂತ ಪ್ರತಿಶತ 6.8 ಕುಸಿತ •ಶೇ. 75.41 ಉತ್ತೀರ್ಣ ಸಾಧನೆ
Team Udayavani, May 1, 2019, 10:17 AM IST
ಧಾರವಾಡ: ರಾಜ್ಯಕ್ಕೆ 3ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜೆಎಸ್ಸೆಸ್ ಆಂಗ್ಲ ಮಾಧ್ಯಮ ಶಾಲೆಯ ಪರಿಣಿತಾಳನ್ನು ಡಿಡಿಪಿಐ ಗಜಾನನ ಮನ್ನಿಕೇರಿ ಅಭಿನಂದಿಸಿದರು. ಶಾಲೆ ವತಿಯಿಂದ ಪರಿಣಿತಾಳನ್ನು ಸನ್ಮಾನಿಸಲಾಯಿತು. (ಬಲಚಿತ್ರ)
ಧಾರವಾಡ: ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿದಿದ್ದು, ಶೈಕ್ಷಣಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ 25ನೇ ರ್ಯಾಂಕ್ ಪಡೆದಿದ್ದೇ ಕನಿಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಇನ್ನೂ ಮೂರು ಮೆಟ್ಟಿಲು ಕೆಳಗಿಳಿದು 28ನೇ ಸ್ಥಾನ ಪಡೆದಿದೆ.
2014-15ರಲ್ಲಿ 25ನೇ ರ್ಯಾಂಕ್ ಪಡೆದಿದ್ದ ಜಿಲ್ಲೆ ಆನಂತರ 2015-16ರಲ್ಲಿ 10ನೇ ಹಾಗೂ 2016-17ರಲ್ಲಿ 8ನೇ ರ್ಯಾಂಕ್ ಗಳಿಸಿತ್ತು. 2017-2018ರಲ್ಲಿ 13ನೇ ರ್ಯಾಂಕ್ ಪಡೆದಿತ್ತು. ಆದರೆ ಈ ಸಲ ಫಲಿತಾಂಶ ಶೇ.75.41 ಆಗಿದ್ದು, ಕಳೆದ ಸಾಲಿನ ಶೇ. 82.21ಕ್ಕಿಂತ 6.8 ಪ್ರತಿಶತ ಕಡಿಮೆ ಸಾಧಿಸಿ 13ರಿಂದ 28ನೇ ಸ್ಥಾನಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಒಟ್ಟು 25,096 ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 18, 924 ಮಂದಿ ಪಾಸಾಗಿ ಶೇ.75.41 ಫಲಿತಾಂಶ ದಾಖಲಾಗಿದೆ. 119 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತ 6587 ವಿದ್ಯಾರ್ಥಿಗಳಲ್ಲಿ 5107 ಮಂದಿ ಪಾಸಾಗಿ ಶೇ.77.53 ಫಲಿತಾಂಶ ಸಾಧಿಸಿದ್ದಾರೆ. 137 ಅನುದಾನಿತ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತ 10,634 ವಿದ್ಯಾರ್ಥಿಗಳಲ್ಲಿ 7,759 ಮಂದಿ ಪಾಸಾಗಿ ಶೇ.72.96 ಫಲಿತಾಂಶ ದಾಖಲಾಗಿದೆ. 143 ಅನುದಾನರಹಿತ ಶಾಲೆಗಳಿಂದ ಪರೀಕ್ಷೆಗೆ ಕುಳಿತ 7,875 ವಿದ್ಯಾರ್ಥಿಗಳಲ್ಲಿ 6058 ಮಂದಿ ಪಾಸಾಗಿ ಶೇ.76.93 ಫಲಿತಾಂಶ ದಾಖಲಾಗಿದೆ.
ಜಾತಿವಾರು ಲೆಕ್ಕಾಚಾರ: ಜಿಲ್ಲೆಯಲ್ಲಿ ಜಾತಿವಾರು ಪರಿಶೀಲಿಸಿದಾಗ ಕೆಟಗರಿ 3ಎ, 3ಬಿ ಹಾಗೂ ಇತರೇ ವರ್ಗಗಳಲ್ಲಿ ಕ್ರಮವಾಗಿ ಶೇ.87.89, 81.38, 81.14ಫಲಿತಾಂಶ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕ್ರಮವಾಗಿ 70.16 ಹಾಗೂ 70.13 ಫಲಿತಾಂಶ ಸಾಧಿಸಿದ್ದಾರೆ. ಕೆಟಗರಿ 3ಎ, 3ಬಿ ಮತ್ತು ಇತರೇ ವರ್ಗದ ಬಾಲಕಿಯರು ಕ್ರಮವಾಗಿ 90.97, 87.10, 87.13 ಫಲಿತಾಂಶ ಸಾಧಿಸಿದ್ದಾರೆ. ಕೆಟಗರಿ 3ಎ, 3ಬಿ ಮತ್ತು ಇತರೇ ವರ್ಗದ ಬಾಲಕರು ಕ್ರಮವಾಗಿ 84.83, 75.52, 75.98 ಫಲಿತಾಂಶ ದಾಖಲಿಸಿದ್ದಾರೆ.
23 ಶಾಲೆ 100ಕ್ಕೆ ನೂರು:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
ರಾಜ್ಯದಲ್ಲಿ ಎನ್ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ