ಶತಮಾನೋತ್ಸವಕ್ಕೆ ಆರ್ಎಸ್ಎಸ್ ಇನ್ನಷ್ಟು ವಿಸ್ತಾರ: ದತ್ತಾತ್ರೇಯ ಹೊಸಬಾಳೆ
Team Udayavani, Oct 30, 2021, 3:44 PM IST
ಧಾರವಾಡ : ರಾಷ್ಟ್ರೀಯ ಸ್ವಯಂ ಸೇವಕ ಸಂಘವು 2025ನೇ ಇಸವಿಗೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅಷ್ಟರಲ್ಲಿಯೇ ದೇಶದ ಪ್ರತಿ ಮಂಡಲಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಇಲ್ಲಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನ ಕೊನೆಯ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೋವಿಡ್ ನಿಂದಾಗಿ ಶಾಖೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಆರಂಭಗೊಂಡಿದ್ದು, ಸದ್ಯಕ್ಕೆ ದೇಶಾದ್ಯಂತ ಒಟ್ಟು 54,382 ಆರ್ಎಸ್ಎಸ್ ಶಾಖೆಗಳು ನಡೆಯುತ್ತಿವೆ. ಈ ಪೈಕಿ 34 ಸಾವಿರ ಪ್ರತಿದಿನ ಶಾಖೆಗಳು, 12,708 ವಾರದ ಶಾಖೆಗಳು ಹಾಗೂ 7900 ತಿಂಗಳ ಶಾಖೆಗಳು ನಡೆಯುತ್ತಿವೆ. 1925 ರಲ್ಲಿ ಆರಂಭಗೊಂಡ ಆರ್ಎಸ್ಎಸ್ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆರ್ಎಸ್ಎಸ್ ರಚಿಸಿರುವ 6494 ಮಂಡಳಗಳಿಗೆ (ಬ್ಲಾಕ್) ತನ್ನ ಕಾರ್ಯ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಈಗಾಗಲೇ ಈ ಪೈಕಿ 4300 ಮಂಡಳಗಳಲ್ಲಿ ಆರ್ಎಸ್ಎಸ್ ತನ್ನ ಚಟುವಟಿಕೆ ನಿರ್ವಹಿಸುತ್ತಿದೆ. 1,59,028 ಸ್ಥಳಗಳಲ್ಲಿ ಆರ್ಎಸ್ಎಸ್ನ ಉತ್ಸವಗಳು ಜರುಗಿವೆ. ಸರ್ಕಾರದ 560 ಜಿಲ್ಲೆಗಳ ಪೈಕಿ 84 ಜಿಲ್ಲೆಗಳಲ್ಲಿನ ಎಲ್ಲಾ ಮಂಡಳಗಳಲ್ಲಿ ಶೇ.100 ರಷ್ಟು ಕಾರ್ಯಚಟುವಟಿಕೆ ವಿಸ್ತರಿಸಲಾಗಿದೆ. ಈ ಕಾರ್ಯಕ್ಕಾಗಿ 2 ವರ್ಷದ ಅವಧಿಗೆ ಸಂಘದ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನು ಇನ್ನಷ್ಟು ಗಟ್ಟಿಗೊಳಿಸುವ ಯೋಜನೆ ಈ ಬಠಕ್ನಲ್ಲಿ ರೂಪಿಸಲಾಗಿದೆ ಎಂದರು.
ಬೈಠಕ್ ನ ಚರ್ಚಿತ ವಿಷಯಗಳು: ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಲ್ಲೆ ನಿಯಂತ್ರಿಸುವುದು, ಅಸ್ಪಶೃತೆ, ಸ್ವದೇಶಿ ಜಾಗೃತಿ, ಉದ್ಯೋಗ ಸೃಷ್ಠಿ, ಸ್ಥಳೀಯ ಉದ್ಯೋಗಕ್ಕೆ ಒತ್ತು, ಹೊಸ ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳ ಕುರಿತು ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಳಕು ಚೆಲ್ಲಲು ಆರ್ಎಸ್ಎಸ್ ಯೋಜಿಸಿದೆ. ಮತಾಂತರ ಕಾಯಿದೆಯನ್ನು ಯಾರೇ ವಿರೋಧೀಸಿದರೂ ಸರ್ಕಾರ ಅದನ್ನು ಜಾರಿಗೊಳಿಸಬೇಕು. ಮತಾಂತರ ನಿಲ್ಲಬೇಕು. ಅಷ್ಟೇಯಲ್ಲ, ಈಗಾಗಲೇ ಮತಾಂತರಗೊಂಡವರು ಮರಳಿ ಹಿಂದೂ ಧರ್ಮಕ್ಕೆ ಸೇರಿಸುವ ಕಾರ್ಯ ನಡೆಯುತ್ತಿದೆ. ಸಂವಿಧಾನದಲ್ಲಿಯೆ ಜನಸಂಖ್ಯಾ ನೀತಿಯನ್ನು ರೂಪಿಸಿದ್ದು, ಎಲ್ಲಾ ಸಮುದಾಯಗಳಿಗೂ ಒಂದೇ ಬಗೆಯ ಜನಸಂಖ್ಯಾ ನೀತಿ ಜಾರಿಗೊಳಿಸಬೇಕಿದೆ. ಈ ಕುರಿತು ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದ್ದು, ಸಮಯ ಬಂದಾಗ ಸರ್ಕಾರ ಆ ತೀರ್ಮಾನ ಕೈಗೊಳ್ಳಲಿದೆ ಎಂದು ದತ್ತಾತ್ತೇಯ ಹೊಸಬಾಳೆ ಹೇಳಿದರು.
ಇದನ್ನೂ ಓದಿ:ಸರಳ ಮತ್ತು ಗೌರವಪೂರ್ವಕ ರಾಜ್ಯೋತ್ಸವ : ಮಾರ್ಗಸೂಚಿ ಬಿಡುಗಡೆ
ಈಗಾಗಲೇ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ನಿಮಿತ್ತ ಆರ್ಎಸ್ಎಸ್ ಕೂಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇತರ ಸಂಘಟನೆಗಳ ಜೊತೆ ಕೂಡಿ ಕೆಲಸ ಮಾಡಲಿದೆ. ಕಾಲಾಪಾನಿಯಾದ ಸ್ವಾತಂತ್ರ್ಯ ಸೇನಾನಿಗಳು ಸೇರಿದಂತೆ ತೆರೆಯಲ್ಲಿಯೇ ಕೆಲಸ ಮಾಡಿದ ಅನೇಕರು ಇನ್ನೂ ಪ್ರಚಾರಕ್ಕೆ ಬಂದಿಲ್ಲ. ಅಂತಹ ಮಹನೀಯರಿಗೆ ಈ ಉತ್ಸವದಲ್ಲಿ ಹೆಚ್ಚಿನ ಒತ್ತು ಪ್ರಚಾರ ಸಿಕ್ಕಬೇಕಿದ್ದು, ಈ ಕಾರ್ಯವನ್ನು ಆರ್ಎಸ್ಎಸ್ ಮಾಡಲಿದೆ ಎಂದರು.
ಪೋಪ್ ಭೇಟಿ ತಪ್ಪಲ್ಲ : ಪ್ರಧಾನಿ ನರೇಂದ್ರ ಮೋದಿ ಅವರು ರೋಮ್ನಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ್ದು ತಪ್ಪಲ್ಲ. ವಸದೈವಕಂ ಕುಟುಂಬಕಂ ಎನ್ನುವ ತತ್ವ ನಮ್ಮದು ಒಂದು ದೇಶದ ಮುಖ್ಯಸ್ಥ ಇನ್ನೊಂದು ದೇಶದ ಮುಖ್ಯಸ್ಥರನ್ನು ಭೇಟಿ ಮಾಡುವುದು ನಾಗರಿಕ ಸಮಾಜದ ಲಕ್ಷಣ, ಎಲ್ಲಾ ಧರ್ಮದ ಜನರನ್ನು ಭೇಟಿಯಾಗುವುದರಲ್ಲಿ ತಪ್ಪಿಲ್ಲ. ಇಷ್ಟಕ್ಕೂ ಪ್ರಧಾನಿ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ನಮ್ಮ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಹೊಸಬಾಳೆ ಅವರು ಮೋದಿ-ಪೋಪ್ ಭೇಟಿಯನ್ನು ಸಮರ್ಥಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ